ಕಳಪೆ ಗೌರವ ನೀಡಿದ ಕಂಪನಿಗೆ ನಾಮ!
Team Udayavani, Sep 25, 2018, 5:24 AM IST
ದೆಹಲಿಯ ಬ್ಯಾಂಕೊಂದರಲ್ಲಿ ಜಮೆ ಮಾಡಲು ತನ್ನೊಂದಿಗೆ ತಂದಿದ್ದ 80 ಲಕ್ಷ ರೂ. ಕ್ಯಾಶ್ ಇದ್ದ ಬ್ಯಾಗೊಂದನ್ನು ಕಬಳಿಸಲು ಬಂದಿದ್ದ ಕಳ್ಳರೊಂದಿಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದ ಆ ಕಂಪನಿಯ ಉದ್ಯೋಗಿ ಧನಸಿಂಗ್ ಬಿಶ್ತ್.
ಘಟನೆಯಲ್ಲಿ ಕ್ಯಾಶ್ ಬ್ಯಾಗನ್ನು ಬಚಾವು ಮಾಡಿಕೊಂಡನಾದರೂ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದಿದ್ದ. ತನ್ನೀ ಸಾಹಸಕ್ಕೆ ಪ್ರತಿಯಾಗಿ ಕಂಪನಿ ಸೂಕ್ತ ಗೌರವ ಕೊಡಲಿದೆ ಎಂದು ನಂಬಿದ್ದ ಈತನಿಗೆ ಕಂಪನಿ ಕೊಟ್ಟಿದ್ದು, ಕೇವಲ ಒಂದು ಟಿ-ಶರ್ಟ್. ಇದರಿಂದ ಆಕ್ರೋಶಗೊಂಡ ಬಿಶ್ತ್, ಈ ಕಂಜೂಸ್ ಕಂಪನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ, ತನ್ನ ಸ್ನೇಹಿತನೊಂದಿಗೆ ಒಂದು ಪ್ಲಾನ್ ಮಾಡಿ ಮುಂದಿನ ಬಾರಿ ಕಂಪನಿಯ ಹಣದ ಬ್ಯಾಗ್ ಕೈಗೆ ಸಿಕ್ಕಾಗ ಅದನ್ನು ಅಪಹರಿಸಿಬಿಟ್ಟ. ಕಂಪನಿಯ ಮೇಲಿನ ಕೋಪದಿಂದ 70 ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಅನ್ನು ಕದ್ದಿರುವ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ