ಕುಡಿದು ಹಸೆಮಣೆ ಏರಿದ ವರ; ಮುಂದೇನಾಯ್ತು?
Team Udayavani, Mar 12, 2019, 3:45 AM IST
ಮದುವೆ ಮೂಹೂರ್ತದ ವೇಳೆ ವರ ಕಂಠ ಪೂರ್ತಿ ಕುಡಿದು ಬಂದರೆ ವಧು ಮತ್ತು ಆಕೆಯ ಸಂಬಂಧಿಗಳಿಗೆ ಹೇಗಾಗಬೇಡ? ಬಿಹಾರದ ದುಮ್ರಿ ಚಾಪಿಯ ಗ್ರಾಮದಲ್ಲಿ ವರ ಕುಡಿತು ತೂರಾಡುತ್ತಾ ಹಸೆಮಣೆ ಏರಿದ್ದ.
ಆತನಿಗೆ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವೂ ಇರಲಿಲ್ಲ. ಕುಡಿದ ಅಮಲಲ್ಲಿ ಮದುವೆ ವಿಚಾರವನ್ನೂ ಮರೆತಿದ್ದ. ಯಾವ ಶಾಸ್ತ್ರವನ್ನೂ ಆತನಿಂದ ಮಾಡಲು ಆಗುತ್ತಿರಲಿಲ್ಲ. ಇದನ್ನು ನೋಡಿ ಬೇಸರಗೊಂಡ ವಧು ದಿಟ್ಟ ನಿರ್ಧಾರ ತೆಗೆದುಕೊಂಡು ಮದುವೆಯನ್ನೇ ರದ್ದುಪಡಿಸಿದ್ದಾಳೆ. ಆಕೆಯ ಸಂಬಂಧಿಗಳು ಮತ್ತು ವರನ ಕುಟುಂಬದವರು ಆಕೆಯ ಮನಸ್ಸನ್ನು ಬದಲಿಸಲು ಎಷ್ಟು ಯತ್ನಿಸಿದರೂ ಆಕೆ ಮನಸ್ಸು ಬದಲಿಸಿಕೊಂಡಿಲ್ಲ.
“ವರ ಕಂಠ ಪೂರ್ತಿ ಕುಡಿದು ಬಂದಿದ್ದ. ಆತನಿಗೆ ಸರಿಯಾಗಿ ನಿಲ್ಲಲೂ ಆಗುತ್ತಿರಲಿಲ್ಲ. ನಮ್ಮ ಮಗಳು ಆತನನ್ನು
ಮದುವೆಯಾಗುವುದಿಲ್ಲ ಎಂದು ಹೇಳಿ ಹಸೆಮಣೆಯಿಂದ ಎದ್ದು ನಡೆದಳು’ ಎಂದು ವಧುವಿನ ತಂದೆ ಹೇಳಿದ್ದಾರೆ. ಮದುವೆ ರದ್ದಾಗುತ್ತಲೇ ಗ್ರಾಮಸ್ಥರೆಲ್ಲರೂ ವರನನ್ನು ವಶದಲ್ಲಿರಿಸಿಕೊಂಡು ಆತ ಪಡೆದಿದ್ದ ವರದಕ್ಷಿಣೆಯನ್ನು ವಾಪಸ್ಸು ಪಡೆದು ಅವನನ್ನು ಬಿಟ್ಟು ಕಳುಹಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ