ಮೂನ್‌ಲೈಟ್‌ ಮುಡಿಗೆ ಆಸ್ಕರ್‌


Team Udayavani, Feb 28, 2017, 3:50 AM IST

27-PTI-6.jpg

ಲಾಸ್‌ ಏಂಜಲೀಸ್‌: ಆಸ್ಕರ್‌ ಅವಾರ್ಡ್‌ ಗೋಸ್‌ ಟು…. “ಲಾಲಾ ಲ್ಯಾಂಡ್‌’! ಹೀಗೆ ಹೇಳಿ ಅರೆಕ್ಷಣ ತಮ್ಮ ಮೇಲೆ ಅನುಮಾನ ಪಟ್ಟುಕೊಂಡರು ನಿರೂಪಕ ವಾರೆನ್‌ ಬೀಟಿ. ಆಸ್ಕರ್‌ ಕಮಿಟಿ ನೀಡಿದ್ದ ಲಕೋಟೆ­ಯಲ್ಲಿದ್ದ ಚಿತ್ರದ ಹೆಸರು “ಮೂನ್‌ಲೈಟ್‌’! ಕೊನೆಗೆ ಕ್ಷಮೆ ಯಾಚಿಸಿ, “ಈ ಸಲದ ಆಸ್ಕರ್‌ ಗೌರವಕ್ಕೆ ಮೂನ್‌ಲೈಟ್‌ ಭಾಜನ­ವಾಗಿದೆ’ ಎನ್ನುತ್ತಾ ನಿರೂಪಕರು ಅರೆಕ್ಷಣದ ಪ್ರಮಾದಕ್ಕೆ ತೆರೆ ಎಳೆದರು! ಅಂದಹಾಗೆ, ಇವೆರಡೂ ಅಮೆರಿಕದ್ದೇ ಚಿತ್ರಗಳು!

89ನೇ ಅಕಾಡೆಮಿ ಅವಾರ್ಡ್‌ ಬ್ಯಾರಿ ಜೆಂಕಿನ್ಸ್‌ ನಿರ್ದೇಶನದ “ಮೂನ್‌ಲೈಟ್‌’ ಚಿತ್ರದ ಪಾಲಾಗಿದೆ. ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ ಈ ಚಿತ್ರದ ಕತೆ ಈಗಾಗಲೇ ಜಾಗತಿಕವಾಗಿ ಹುಬ್ಬೇರಿಸಿದೆ. “ಅತ್ಯುತ್ತಮ ಚಿತ್ರ’ದೊಂದಿಗೆ ಇನ್ನೆರಡು ಗೌರವಗಳನ್ನೂ “ಮೂನ್‌ಲೈಟ್‌’  ಬಾಚಿದೆ. ಇದೇ ಚಿತ್ರದ ಮಹೇರ್ಷಲಾ ಅಲಿಗೆ “ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಸಿಕ್ಕಿದ್ದು, ಮುಸ್ಲಿಮ್‌ ಕಲಾವಿದನೊಬ್ಬನಿಗೆ ಆಸ್ಕರ್‌ ಪ್ರಾಪ್ತವಾಗಿದ್ದು ಇದೇ ಮೊದಲು. “ಅತ್ಯುತ್ತಮ ಚಿತ್ರಕಥೆ’ ವಿಭಾಗದಲ್ಲಿ ಬ್ಯಾರಿ ಜೆಂಕಿನ್ಸ್‌ ಮತ್ತು ಟ್ಯಾರೆಲ್‌ ಆಲ್ವಿನ್‌ ಮೆಕ್ರಾನೇಗೆ ಪ್ರಶಸ್ತಿ ಸಿಕ್ಕಿದೆ. ಸ್ಕ್ರೀನ್‌ಪ್ಲೇ ವಿಭಾಗದಲ್ಲೂ ಆಸ್ಕರ್‌ ಪಡೆದಿದೆ.

ಲಾಲಾ ಲ್ಯಾಂಡ್‌ ಪೈಪೋಟಿ: 1950ರ ಆಲ್‌ ಅಬೌಟ್‌ ಈವ್‌, 1997ರ ಟೈಟಾ­ನಿಕ್‌ ಚಿತ್ರಗಳ ದಾಖಲೆ ಮುರಿದು “ಲಾಲಾ ಲ್ಯಾಂಡ್‌’ 14 ವಿಭಾಗಗಳಲ್ಲಿ ನಾಮನಿರ್ದೇ­ಶನ­ಗೊಂಡಿತ್ತು. ಅಂತಿಮ­ವಾಗಿ ಈ ಚಿತ್ರ 6 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. “ಅತ್ಯು­ತ್ತಮ ನಾಯಕಿ’ ಗೌರವಕ್ಕೆ ಚಿತ್ರದ ಎಮ್ಮಾ ಸ್ಟೋನ್‌ ಪಾತ್ರರಾಗಿದ್ದಾರೆ. “ಅತ್ಯುತ್ತಮ ನಿರ್ದೇಶಕ’ರೂ ಈ ಚಿತ್ರದ ಡೇಮಿ­ಯೆನ್‌ ಚಾಜೆಲೆ. “ಅತ್ಯುತ್ತಮ ಛಾಯಾ­ಗ್ರಹಣ’ ಚಿತ್ರದ ಕ್ಯಾಮೆರಾಮನ್‌ ಲೈನಸ್‌ ಸ್ಯಾಂಡ್‌ಗೆನ್‌ರ ಮುಡಿಗೇರಿದೆ.

ಇನ್ನು “ಅತ್ಯುತ್ತಮ ನಟ’ನಾಗಿ “ಮ್ಯಾಂಚೆ­ಸ್ಟರ್‌ ಬೈದಿ ಸೀ’ ಚಿತ್ರದ ಕ್ಯಾಸಿ ಅಫ್ಲೆಕ್‌, “ಉತ್ತಮ ವಿದೇಶಿ ಚಿತ್ರ’ ಹೆಗ್ಗಳಿಕೆ “ದಿ ಸೇಲ್ಸ್‌ ಮನ್‌’ ಪಾಲಾಗಿದೆ. ಬಾಲಿವುಡ್‌, ಹಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಭಾರತೀಯ ಸನ್ನಿಗೆ ಚಪ್ಪಾಳೆ ಸುರಿಮಳೆ!
ಭಾರತೀಯ ಮೂಲದ ದೇವ್‌ ಪಟೇಲ್‌ಗೆ ಆಸ್ಕರ್‌ ತಪ್ಪಿದರೂ , ಭಾರತೀಯರೆಲ್ಲ ಹೆಮ್ಮೆ ಪಡುವಂಥ ಅಲೆ ಆಸ್ಕರ್‌ ಅಂಗಳದಲ್ಲಿ ಸೃಷ್ಟಿಯಾ ಗಿತ್ತು. ನಾಮನಿರ್ದೇಶನ­ಗೊಂಡ “ದಿ ಲಯನ್‌ ಕಿಂಗ್‌’ ಚಿತ್ರದಲ್ಲಿ ದೇವ್‌ ಪಟೇಲ್‌ನ ಬಾಲ್ಯದ ಪಾತ್ರದಲ್ಲಿ ನಟಿ ಸಿದ 8 ವರ್ಷದ ಸನ್ನಿ ಪವಾರ್‌,  ಕೆಂಪು ಹಾಸಿನ ಮೇಲೆ ಹೆಜ್ಜೆಯಿಟ್ಟರು. ಸನ್ನಿ ನಡಿಗೆಯ ಫೋಟೋ ಆಸ್ಕರ್‌ನ ಅತ್ಯು ತ್ತಮ ಫೋಟೋಗಳಲ್ಲಿ ಒಂದೆಂಬ ಶ್ಲಾಘ ನೆಗೆ ಪಾತ್ರವಾಗಿದೆ. ಅಮೆರಿಕದ ಖ್ಯಾತ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್‌, ಸನ್ನಿಯನ್ನು “ಆಸ್ಕರ್‌’ ಪ್ರತಿಮೆಯಂತೆ ಎತ್ತಿ ಎಲ್ಲರೆ ದುರು ಗೌರವ ಸೂಚಿಸಿದಾಗ ಸಭಾಂ ಗಣದಲ್ಲಿ ಚಪ್ಪಾಳೆಗಳು ಮೊಳಗಿದವು.

ಟ್ರಂಪ್‌ ನೀತಿಗೆ ಅಸ್ಕರ್‌ ಫ‌ರ್ಹಾದಿ ಸಡ್ಡು
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಲಸೆ ವಿರೋಧಿ ನೀತಿಗೆ ಆಸ್ಕರ್‌ ಸಮಾರಂಭವನ್ನೂ ಕಾವೇರಿಸಿತ್ತು. “ಸೇಲ್ಸ್‌ಮ್ಯಾನ್‌’ ಚಿತ್ರದ ನಿರ್ದೇಶಕ, ಇರಾನ್‌ನ ಅಸ್ಕರ್‌ ಫ‌ರ್ಹಾದಿ “ಅತ್ಯುತ್ತಮ ವಿದೇಶಿ ಚಿತ್ರ’ ಗೌರವ ಸ್ವೀಕರಿಸಲು ಬಾರದೆ ಟ್ರಂಪ್‌ ವಿರುದ್ಧ ಪ್ರತಿಭಟನೆ ಸೂಚಿಸಿದರು. “ಅಮೆರಿಕ ತನ್ನ ದೇಶದ ಪ್ರಜೆಗಳನ್ನು ಅವಮಾನಿಸಿದೆ. ಹಾಗಾಗಿ ಆಸ್ಕರ್‌ಗೆ ಬರುವುದಿಲ್ಲ. ಆದರೆ, ಆಸ್ಕರ್‌ ಸಮಿತಿ ತಮ್ಮ ಚಿತ್ರಕ್ಕೆ ಗೌರವ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂಬ ಪತ್ರವನ್ನು ಅಸ^ರ್‌  ರವಾನಿಸಿದ್ದರು.

ಟ್ರಂಪ್‌ಗೆ ವ್ಯಂಗ್ಯ ಮಾಡಿದ ಜಿಮ್ಮಿ
ಆಸ್ಕರ್‌ನಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮ್‌ ಕಲಾವಿದನಿಗೆ (ಮಹೇರ್ಶಲಾ ಅಲಿ “ಅತ್ಯುತ್ತಮ ಪೋಷಕ ನಟ’) ಗೌರವ ಸಿಕ್ಕಿದೆ. ಇದನ್ನೇ ಪ್ರಸ್ತಾಪಿಸುತ್ತಾ ಅಮೆರಿಕದ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್‌ ಅವರು ಡೊನಾಲ್ಡ್‌ ಟ್ರಂಪ್‌ರ ಭಾಷಣವನ್ನು ವೇದಿಕೆಯಲ್ಲಿಯೇ ಅಣಕಿಸಿದರು. ಅಲ್ಲದೆ, “ಜನಾಂಗೀಯ ನಿಂದನೆಯಿಂದ ಅಮೆರಿಕ ಈಗ ಇಬ್ಭಾಗ ಆಗಿ ಹೋಗಿದೆ. ಆದರೆ, ನಾವು ಜನಾಂಗೀಯ ನಿಂದಕರಲ್ಲ ಎಂದು ಆಸ್ಕರ್‌ ಹೇಳಿದೆ’ ಎನ್ನುವ ಮೂಲಕ ಅಧ್ಯಕ್ಷರ ಕಣ್ತೆರೆಸುವ ಕೆಲಸ ಮಾಡಿದರು!

ಟಾಪ್ ನ್ಯೂಸ್

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.