ಛೇ..ಶ್ರೀದೇವಿಯ ಮಹದಾಸೆ ಹಾಗೆಯೇ ಉಳಿದುಹೋಯಿತು!
Team Udayavani, Feb 25, 2018, 4:57 PM IST
ಮುಂಬಯಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಸಾಟಿಯಿಲ್ಲದ ನಟಿ ಶ್ರೀದೇವಿ ಅವರಿಗಿದ್ದ ಮಹದಾಸೆ ಈಡೇರದೆ ಹೋಗಿದೆ. ಹಿರಿಯ ಮಗಳಾದ ಜಾನ್ವಿನ್ನು ಹಿರಿತೆರೆಯ ಮೇಲೆ ನೋಡಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ಶ್ರೀದೇವಿ ಚಿತ್ರ ಬಿಡುಗಡೆಗೂ ಮುನ್ನ ಯಾವ ಮುನ್ಸೂಚನೆ ಇಲ್ಲದೆ ಮರೆಯಾಗಿದ್ದಾರೆ.
ಜಾನ್ವಿಗೆ ನಟನಾ ತರಬೇತಿಯನ್ನೂ ಕೊಡಿಸಿ ,ಸ್ವಯಂ ಟಿಪ್ಸ್ಗಳನ್ನೂ ನೀಡುತ್ತಿದ್ದ ಶ್ರೀದೇವಿ ‘ಧಡಕ್’ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ಗೆ ಪ್ರತಿನಿಧಿಯೊಂದನ್ನು ನೀಡಲು ಮುಂದಾಗಿದ್ದರು.
ಮರಾಠಿಯ ಬ್ಲಾಕ್ ಬಸ್ಟರ್ ಪ್ರೇಮಕಥೆ ‘ಸೈರಾತ್’ ಚಿತ್ರದ ರಿಮೇಕ್ ಆಗಿರುವ ಧಡಕ್ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ಶೂಟಿಂಗ್ನಲ್ಲಿ ನಿರತರಾಗಿರುವ ವೇಳೆಯಲ್ಲೇ ತಾಯಿ ಶ್ರೀದೇವಿ ದುಬೈನಲ್ಲಿ ಬಾರದ ಲೋಕಕ್ಕೆ ಮರಳಿದ್ದಾರೆ.
ತಾಯಿಯ ಹಠಾತ್ ಅಗಲುವಿಕೆ ಜಾನ್ವಿಗೆ ಬರಸಿಡಿಲು ಬಂದೆರಗಿದಂತಾಗಿದ್ದು, ತೀವ್ರ ದುಃಖೀತರಾಗಿದ್ದಾರೆ.
ಇತ್ತೀಚೆಗೆ ಮಗಳ ಉತ್ತಮ ಭವಿಷ್ಯಕ್ಕಾಗಿ ಆಂಧ್ರದ ದೇವಾಲಯವೊಂದಕ್ಕೆ ತೆರಳಿ ಸರ್ಪ ಸಂಬಂಧಿ ಪೂಜಾ ಪುನಸ್ಕಾರಗಳನ್ನೂ ನೆರವೇರಿಸಿದ್ದರು ಎಂದು ತಿಳಿದು ಬಂದಿದೆ.
ಮಕ್ಕಳಿಬ್ಬರ ಉಜ್ವಲ ಭವಿಷ್ಯಕ್ಕಾಗಿ ಅಪಾರ ಕನಸು ಕಂಡಿದ್ದ ಶ್ರೀದೇವಿ ಪುತ್ರಿಯ ಮೊದಲ ಚಿತ್ರ ತೆರೆಕಾಣುವ ಮುನ್ನವೆ ಮರೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ