ಶಾರುಖ್ ಗಾಗಿ ಹಾಡುವುದನ್ನು ನಾನೇಕೆ ನಿಲ್ಲಿಸಿದೆ?ಅಭಿಜಿತ್ ಮನದ ಮಾತು
Team Udayavani, Oct 4, 2018, 3:51 PM IST
ಹೊಸದಿಲ್ಲಿ : ಬಾಲಿವುಡ್ ಸೂಪರ್ ಹಿಟ್ ನಟ ಶಾರುಖ್ ಖಾನ್ ಅವರ ಹೆಚ್ಚಿನೆಲ್ಲ ಹಿಟ್ ಸಿನೇಮಾಗಳ ಸೂಪರ್ ಹಿಟ್ ಹಾಡುಗಳನ್ನು ಹಾಡಿ ಶಾರುಖ್ ಧ್ವನಿ ಎಂದೇ ಖ್ಯಾತಿ ಪಡೆದಿದ್ದ ಜನಪ್ರಿಯ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರು ತಾನು ಶಾರುಖ್ ಗಾಗಿ ಹಾಡುವುದನ್ನು ಏಕೆ ನಿಲ್ಲಿಸಿದೆ ಎಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಈಚೆಗೆ ನಡೆದಿದ್ದ ಇಂಡಿಯಾ ಟುಡೇ ಸಫಾಯಿಗಿರಿ ಸಮಿಟ್ ಆ್ಯಂಡ್ ಅವಾರ್ಡ್ 2018ರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಭಿಜಿತ್ ಭಟ್ಟಾಚಾರ್ಯ ಈ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದರು.
“ಅದು ಆತ್ಮಗೌರವ, ಸ್ವಾಭಿಮಾನ ಮತ್ತು ಸಂಸ್ಕಾರದ ಕಾರಣದಿಂದ ನಾನು ಶಾರುಖ್ ಗಾಗಿ ಹಾಡುವುದನ್ನು ನಿಲ್ಲಿಸಿದೆ. ಓಂ ಶಾಂತಿ ಓಂ ಮತ್ತು ಮೈ ಹೂಂ ನ ಸೂಪರ್ ಹಿಟ್ ಚಿತ್ರದ ಅಂತ್ಯದಲ್ಲಿ ಕ್ರೆಡಿಟ್ ಸಾಂಗ್ ಸೀಕ್ವೆನ್ಸ್ ನಲ್ಲಿ ಆತ ಎಲ್ಲರನ್ನೂ ತೋರಿಸಿದರು – ಸ್ಪಾಟ್ ಬಾಯ್ ನಿಂದ ಹಿಡಿದು ಹೇರ್ ಡೆಸ್ಸರ್ಸ್ ವರೆಗೆ; ಆದರೆ ಗಾಯಕರ ಹೆಸರನ್ನು ಹೊರತುಪಡಿಸಿ !”
”…..ಎಲ್ಲವೂ ಮುಗಿದ ಹೋದ ಬಳಿಕ ಕಟ್ಟಕಡೆಯಲ್ಲಿ ಗಾಯಕರನ್ನು ಹೆಸರನ್ನು ತೋರಿಸಿದರು. ಈ ರೀತಿ ನಿಕೃಷ್ಟವಾಗಿ ಕಡೆಗಣಿಸಲ್ಪಡುವುದಕ್ಕೆ ನಾವು ಅರ್ಹರಲ್ಲ; ಅಲ್ಲಿಯ ಬಳಿಕ ನಾನು ಸ್ವಾಭಿಮಾನ ಮತ್ತು ಸಂಸ್ಕಾರದ ಕಾರಣಕ್ಕೆ ಶಾರುಖ್ ಗೆ ಹಾಡುವುದನ್ನು ನಿಲ್ಲಿಸಿದೆ. ಶಾರುಖ್ ಗಾಗಿ ನಾನು ಹಾಡುವ ವರೆಗೆ ಆತ ರಾಕ್ ಸ್ಟಾರ್ ಆಗಿದ್ದರು. ನಾನು ನಿಲ್ಲಿಸಿದ ಬಳಿಕ ಅವರು ಲುಂಗಿ ಡ್ಯಾನ್ಸ್ ಮಟ್ಟಕ್ಕೆ ಇಳಿದರು’ ಎಂದು ಭಟ್ಟಾಚಾರ್ಯ ಹೇಳಿದರು.
ಶಾರುಖ್ ಗಾಗಿ ಅಭಿಜಿತ್ ಭಟ್ಟಾಚಾರ್ಯ ಹಾಡಿರುವ ಓಲೆ ಓಲೆ, ಯೇ ತೆರೀ ಆಂಖೇ ಜುಖೀ ಜುಖೀ, ಸುನೋ ನ ಸುನೋ ನಾ, ಚಾಂದ್ ತಾರೇ, ತನ್ ತನಾ ತನ್ ತನ್ ತನ್ ತಾರಾ, ಬಾದ್ಶಾ ಓ ಬಾದ್ಶಾ, ತಮ್ ದಿಲ್ ಕೀ ಧಡ್ಕನ್ ಹೋ ಇತ್ಯಾದಿ ಹಾಡುಗಳು ಸೂಪರ್ ಹಿಟ್ ಆಗಿರುವುದನ್ನು ಚಿತ್ರ ಸಂಗೀತ ಪ್ರೇಮಿಗಳು ಎಂದೂ ಮರೆಯಲಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ