ಬಾಲಿವುಡ್ನಲ್ಲಿ ಕೆಲವರಿಂದ ನನ್ನ ವಿರುದ್ಧ ಪಿತೂರಿ !: ಗೋವಿಂದ
Team Udayavani, Nov 11, 2018, 10:58 AM IST
ಮುಂಬಯಿ: ಬಾಲಿವುಡ್ನಲ್ಲಿ ಕೆಲವು ಮಂದಿಯ ಗುಂಪು ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಖ್ಯಾತ ನಟ ಗೋವಿಂದ ಕಿಡಿ ಕಾರಿದ್ದಾರೆ.
ನಿರ್ಮಾಪಕ ಪಹಲಾಜ್ ನಿಲ್ಹಾನಿ ಅವರೊಂದಿಗೆ ರಂಗೀಲಾ ರಾಜಾ ಚಿತ್ರವನ್ನು ಬಿಡುಗಡೆ ಮಾಡಲು ಹೋರಾಟ ನಡೆಸುತ್ತಿರುವ ಗೋವಿಂದ ಶನಿವಾರ ರಾತ್ರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ರೀತಿ ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದಿದೆ ಮಾತ್ರವಲ್ಲದೆ 20 ಕಡೆ ಚಿತ್ರಕ್ಕೆ ಕತ್ತರಿ ಪ್ರಯೋಗಿಸಬೇಕು ಎಂದಿದೆ.
ನನಗೆ ಕಳೆದ 9 ವರ್ಷಗಳಿಂದ ಚಿತ್ರಂಗದಲ್ಲಿ ಅನುಭವವಾಗುತ್ತಿದೆ. ಕೆಲ ವ್ಯಕ್ತಿಗಳ ಗುಂಪು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಮತ್ತು ನನ್ನ ಚಿತ್ರಗಳು ಉತ್ತಮ ವೇದಿಕೆಯಲ್ಲಿ ಬಿಡುಗಡೆಯಾಗಲು ಅವಕಾಶ ಮಾಡಿಕೊಡುತ್ತಿಲ್ಲ ಎಂದಿದ್ದಾರೆ.
ನಾನು ಈಗೀನವರೆಗೆ ಸುಮ್ಮನಿದ್ದೆ. ಆದರೆ ಅವರು ಹೇಗೆ ಪಹಲಾಜ್ ನಿಲ್ಹಾನಿ ಅವರಂತಹ ನಿರ್ಮಾಪಕರ ಚಿತ್ರಗಳನ್ನು ತಡೆಯುತ್ತಾರೆ, ಅವರು ಚಿತ್ರರಂಗದಲ್ಲಿ ಅಪಾರ ಗೌರವ ಪಡೆದಿರುವ ವ್ಯಕ್ತಿ, ಹಲವು ನಟರನ್ನು ಪರಿಚಯಿಸಿದವರು ಅವರು ಎಂದರು.
ನಮ್ಮ ಚಿತ್ರರಂಗ ಈ ರೀತಿ ಇರಲಿಲ್ಲ, ನನಗೀಗ ಬೇರೆಯದ್ದೆ ಪ್ರಪಂಚದಲ್ಲಿ ಇರುವ ಅನುಭವ ಆಗುತ್ತಿದೆ ಎಂದರು.
ಪಹಲಾನಿ ಅವರು ಚಿತ್ರದ ಬಿಡುಗಡೆಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು ಸಿಬಿಎಫ್ಸಿ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?