ಹಿರಿಯ ನಟ ರಿಷಿ ಕಪೂರ್‌ ಆರೋಗ್ಯ ಏನಾಗಿದೆ ? ಕ್ಯಾನ್ಸರ್‌ ವದಂತಿ


Team Udayavani, Jan 4, 2019, 10:41 AM IST

rishi-kapoor-700.jpg

ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ. 

ಈ ಶಂಕೆಗೆ ಕಾರಣ ರಿಷಿ ಕಪೂರ್‌ ಪತ್ನಿ ನೀತೂ ಕಪೂರ್‌ (ಮಾಜಿ ಬಾಲಿವುಡ್‌ ನಟಿ ನೀತೂ ಸಿಂಗ್‌) ಅವರು ಇನ್‌ಸ್ಟಾಗ್ರಾಂ ನಲ್ಲಿ  ಹಾಕಿರುವ ಒಂದು ಪೋಸ್ಟ್‌. ಅದರಲ್ಲಿ ಆಕೆ “ಕ್ಯಾನ್ಸರ್‌ ಅನ್ನೋದು ಕೇವಲ zodiac sign (ರಾಶಿ ಚಿಹ್ನೆ) ಮಾತ್ರವೇ ಆಗಿರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. ನೀತೂ ಅವರ ಈ ಪೋಸ್ಟ್‌ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. 

ನೀತೂ ಹಾಕಿರುವ ಈ ಪೋಸ್ಟ್‌  ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ 
ರಿಷಿ ಕಪೂರ್‌ ಬಗೆಗೋ ಅಥವಾ ಸ್ವತಃ ತನ್ನ ಬಗೆಗೋ ಎಂಬುದೀಗ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಅಂತೆಯೇ ಅವರಲ್ಲಿ ಇದು ತೀವ್ರ ಕಳವಳ ಸೃಷ್ಟಿಸಿದೆ.

ಈ ನಡುವೆ ರಿಷಿ ಕಪೂರ್‌ ಅವರ ಸಹೋದರ, ನಟ ರಣಧೀರ್‌ ಕಪೂರ್‌, ಚಿಂತೂ (ರಿಷಿ) ಆರೋಗ್ಯದ ಬಗ್ಗೆ ಕೆಲವೊಂದು ಅಪ್‌ಡೇಟ್‌ ನೀಡಿದ್ದಾರೆ. 

ಹಿಂದುಸ್ಥಾನ್‌ ಟೈಮ್ಸ್‌ ಜತೆಗೆ ಮಾತನಾಡುತ್ತಾ ರಣಧೀರ್‌ ಕಪೂರ್‌ ಅವರು, “ಇದರ ಬಗ್ಗೆ (ಕ್ಯಾನ್ಸರ್‌) ನನಗೆ ಹೆಚ್ಚೇನೂ ಗೊತ್ತಿಲ್ಲ. ಜನರು ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಳ್ಳುವುದು ಸ್ವಾಭಾವಿಕ. ಆದರೆ ರಿಷಿ ಆರೋಗ್ಯದಿಂದಿದ್ದಾರೆ ಎಂದಷ್ಟೇ ಹೇಳಬಲ್ಲೆ; ಇಲ್ಲಿರುವ ಫೋಟೋ ಅದಕ್ಕೆ ಸಾಕ್ಷಿ. ಎಲ್ಲರೊಂದಿಗೂ ಬೆರೆತು ರಿಷಿ ಮಾತನಾಡುತ್ತಿದ್ದಾರೆ. ಒಳ್ಳೆಯ ಊಟ, ಆಹಾರ ಸೇವಿಸುತ್ತಿದ್ದಾರೆ. ಆತ ಬೇಗನೆ ಭಾರತಕ್ಕೆ ಮರಳಲಿದ್ದಾರೆ. ನಾವದನ್ನೀಗ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

 

2018ರ ಸೆಪ್ಟಂಬರ್‌ನಲ್ಲಿ ರಿಷಿ ಕಪೂರ್‌ ‘ನಾನು ಕೆಲವು ವೈದ್ಯಕೀಯ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೋಗುತ್ತಿದ್ದೇನೆ; ಯಾರೂ ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ವದಂತ ಹಬ್ಬಿಸಬಾರದು’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದರು. 

ತಾಯಿ ಕೃಷ್ಣ ರಾಜ್‌ ಕಪೂರ್‌ ನಿಧನ ಹೊಂದಿದ್ದಾಗ ಅವರ ಅಂತ್ಯಕ್ರಿಯೆಗೂ ರಿಷಿ ಬಂದಿರಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲ ತಾಣದಲ್ಲಿ ‘ರಿಷಿ ಕಪೂರ್‌  ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ’ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು.

ಈ ವರೆಗೂ ರಿಷಿ ಕಪೂರ್‌ ಯಾವ ವ್ಯಾದಿಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಅವರಿಂದಾಗಲೀ ಅವರ ಕುಟುಂಬದವರಿಂದಾಗಲೀ ಯಾವುದೇ ಮಾಹಿತಿ, ದೃಢೀಕರಣ ಇಲ್ಲ. 

ಇದೇ ವೇಳೆ ರಿಷಿ ಕಪೂರ್‌ ಅವರ ಮಕ್ಕಳಾದ ರಣಬೀರ್‌ ಕಪೂರ್‌ ಮತ್ತು ರಿದ್ಧಿಮಾ ಕಪೂರ್‌ ಸಾಹಿನಿ ಅವರು ನ್ಯೂಯಾರ್ಕ್‌ ನಲ್ಲೇ ಇದ್ದಾರೆ. ಅಲ್ಲಿಯೇ ಎಲ್ಲರೂ ಜತೆಗೂಡಿ ಹೊಸ ವರ್ಷ ಆಚರಿಸಿದ್ದಾರೆ. 

ರಿದ್ಧಿಮಾ ಜತೆಗೆ ಆಕೆಯ ಪತಿ ಭರತ್‌ ಮತ್ತು ಪುತ್ರಿ ಸಮರಾ ಇದ್ದಾರೆ. ರಣಬೀರ್‌ ಜತೆಗೆ ಆತನ ಗರ್ಲ್ ಫ್ರೆಂಡ್‌ ಎಂದು ವದಂತಿಯಾಗಿರುವ ಅಲಿಯಾ ಭಟ್‌ ಇದ್ದಾರೆ.  

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

9

ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ

12

ಮೀಟಿಂಗ್‌ ಮಾಡೋಕ್ಕೂ ರೇಟ್‌ ಫಿಕ್ಸ್‌: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕ ಚೋಪ್ರಾ ದಂಪತಿ

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.