ಆಮ್ರಪಾಲಿ ಸಮೂಹದ ಮೂರು ನಿರ್ದೇಶಕರಿಗೆ ಪೊಲೀಸ್ ಕಸ್ಟಡಿ: ಸುಪ್ರೀಂ
Team Udayavani, Oct 9, 2018, 4:04 PM IST
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಆಮ್ರಪಾಲಿ ಸಮೂಹದ ಮೂರು ನಿರ್ದೇಶಕರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಸಮೂಹದ ಎಲ್ಲ 46 ಕಂಪೆನಿಗಳ ದಾಖಲೆ ಪತ್ರಗಳನ್ನು ಫೊರೆನ್ಸಿಕ್ ಆಡಿಟರ್ಗಳಿಗೆ ಒಪ್ಪಿಸುವಂತೆ ಆದೇಶಿಸಿತು.
ಜಸ್ಟಿಸ್ ಅರುಣ್ ಮಿಶ್ರಾ ಮತ್ತು ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು ಫೊರೆನ್ಸಿಕ್ ಆಡಿಟರ್ಗಳಿಗೆ ಆಮ್ರಪಾಲಿ ಸಮೂಹ ದಾಖಲೆ ಪತ್ರಗಳನ್ನು ಒಪ್ಪಿಸದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಸಮೂಹದ ಮೂವರು ನಿರ್ದೇಶಕರುಗಳ ವರ್ತನೆಯು ತನ್ನ ಆದೇಶದ ಸಂಪೂರ್ಣ ಉಲ್ಲಂಘನೆಯಾಗಿರುತ್ತದೆ ಎಂದು ಕೋರ್ಟ್ ಹೇಳಿ ಆ ಮೂವರೂ ನಿರ್ದೇಶಕರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.