ಟ್ಯಾಂಕರ್ ಪಲ್ಟಿ: ಹಾಲಿನ ಹೊಳೆ; ಮುಗಿಬಿದ್ದ ಜನರು
Team Udayavani, Dec 19, 2017, 3:46 PM IST
ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಬಳಿ ಹಾಲಿನ ಟ್ಯಾಂಕರೊಂದು ಪಲ್ಟಿಯಾಗಿ ಸಾವಿರಾರು ಲೀಟರ್ ಹಾಲು ಮಣ್ಣು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸಾದಲಿ ಗ್ರಾಮದ ಹಾಲಿನ ಶೀತಲಿಕರಣ ಘಟಕದಿಂದ ಯಲಹಂಕ ಕೆಎಂಎಫ್ ಡೈರಿಗೆ ಹಾಲು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ರಸ್ತೆಯ ತುಂಬೆಲ್ಲಾ ಹಾಲು ಹೊಳೆಯಾಗಿ ಹರಿದಿದ್ದು, ಗಮನಿಸಿದ ಜನರು ಸಿಕ್ಕ ಸಿಕ್ಕ ಬಾಟಲಿಗಳಲ್ಲಿ ಲೀಕ್ ಆಗುತ್ತಿದ್ದ ಹಾಲನ್ನು ತುಂಬಿಕೊಂಡರೆ , ಇನ್ನು ಕೆಲವರು ಕೊಡಪಾನಗಳನ್ನು ತಂದು ಹಾಲು ತುಂಬಿಸಿಕೊಂಡರು.
ಟ್ಯಾಂಕರ್ನಲ್ಲಿ ಬಹುಪಾಲು ಹಾಲು ಮಣ್ಣು ಪಾಲಾಗಿದ್ದು, ಕ್ರೇನ್ಮೂಲಕ ಟ್ಯಾಂಕರನ್ನು ತೆರವುಗೊಳಿಸಲಾಗಿದೆ.
ಟ್ಯಾಂಕರ್ನಲ್ಲಿದ್ದ ಚಾಲಕ, ಕ್ಲೀನರ್ ಮತ್ತು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!