ಚಿಕ್ಕಮಗಳೂರಲ್ಲಿ ಜೀಪು ಮಾರಾಟ ಜಾಲ ಪತ್ತೆ
Team Udayavani, Jul 31, 2017, 1:54 PM IST
ಚಿಕ್ಕಮಗಳೂರು: ನಗರದಲ್ಲಿ ಜೀಪುಗಳ ಮಾರಾಟ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ಮಾಲೀಕರಿಂದ ಜೀಪುಗಳನ್ನು ಖರೀದಿಸಿ ಅವುಗಳ ಚಾರ್ಸಿ ಮತ್ತು ಇಂಜಿನ್ಗಳನ್ನು ಬೇರೆ ವಾಹನಗಳಿಗೆ ಅಳವಡಿಸಿ ಅವುಗಳ ಸಂಖ್ಯೆಯನ್ನು ಬದಲಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ 4 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಇಂಜಿನ್ ಮತ್ತು ಚಾರ್ಸಿ ನಂಬರ್ ಬದಲಾಯಿಸಿ ನಕಲಿ ದಾಖಲೆ ಸೃಷ್ಟಿಸಿ, ಹಲವಾರು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಕೆಲವು ಗ್ಯಾರೇಜ್ಗಳ ಸಹಕಾರವೂ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ನಗರದ 60 ಅಡಿ ರಸ್ತೆಯಲ್ಲಿ ಬಿಳಿಬಣ್ಣದ ಜೀಪ್ವೊಂದು ಪತ್ತೆಯಾಗಿದ್ದು, ಅದನ್ನು ಅತ್ತಿಗುಂಡಿ ವಾಸಿ ಮಕ್ಸೂದ್ ಬೇರೆ ಎಲ್ಲಿಂದಲೋ ತಂದು ಇಂಜಿನ್ ಮತ್ತು ಚಾರ್ಸಿಗಳನ್ನು ಬದಲಿಸಿ ಮಾರಾಟ ಮಾಡಲು ಪ್ರಯತ್ನಿಸಿದ ಪ್ರಕರಣದ ಮೂಲಕ ಈ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಳಿಬಣ್ಣದ ಜೀಪೊಂದನ್ನು ಪರಿಶೀಲಿಸಲು ಪೊಲೀಸರು ಹೋದಾಗ ಆ ವ್ಯಕ್ತಿ ಅಲ್ಲಿಂದ ಹೋಗಲು ಪ್ರಯತ್ನಿಸಿದ್ದು, ತಕ್ಷಣ ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಮಕ್ಸೂದ್ ಅಹಮದ್ ಎಂದು ಜೀಪ್ ಮಾರುವ ಕೆಲಸ ಮಾಡುತ್ತಿದ್ದು, ಅತ್ತಿಗುಂಡಿ ವಾಸಿ ಎಂದು ತಿಳಿಸಿದ್ದಾನೆ. ಆ
ತಕ್ಷಣ ಪೊಲೀಸರು ಜೀಪನ್ನು ಪರಿಶೀಲಿಸಿದಾಗ ದಾಖಲೆಗಳು ಸಿಗದೆ ನೆಪಗಳನ್ನು ಹೇಳಿದ್ದು, ನಂತರ ಈ ಜೀಪನ್ನು ಎರಡು ತಿಂಗಳ ಹಿಂದೆ ಕಲುºರ್ಗಿಯ ಆಳಂದದ ಸುಶೀಲ್ಕುಮಾರ್ ಅವರಿಂದ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯನ್ನು ತೀವ್ರಗೊಳಿಸಿದಾಗ ಮಹೀಂದ್ರ ಪಿಕಪ್ ವಾಹನದ ಚಾರ್ಸಿಯನ್ನು ಕಳವು ಮಾಡಿ ಈ ಜೀಪಿಗೆ ಜೋಡಿಸಲಾಗಿತ್ತು. ನಂತರ 1.30 ಲಕ್ಷ ರೂ. ನೀಡಿ, ಈ ವಾಹನ ಖರೀದಿಸಿ, ರಾಮನಹಳ್ಳಿಯ ಅಪ್ಸರ್ ಅವರ ಮೂಲಕ ರಿಪೇರಿ ಮಾಡಿಸಿ ಅಜ್ಜು ಅವರಿಂದ ನಂಬರ್ ಬದಲಾವಣೆ ಮಾಡಿಸಲಾಗಿದೆ ಎಂದು ತಿಳಿದುಬಂತೆಂದು ಪೊಲೀಸರು ವಿವರಿಸಿ, ಇದೇ ರೀತಿ ನಾಲ್ಕೈದು ವಾಹನಗಳನ್ನು ಮಾರಾಟ ಮಾಡಿರುವುದು ಪತ್ತೆಯಾಯಿತೆಂದು ಹೇಳಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ಮಕ್ಸೂದ್, ಅಹಮದ್, ಸುಶೀಲ್ಕುಮಾರ್, ಫೈರೋಜ್, ಕರುಅಣ್ಣ, ಅಪ್ಸರ್ ಮತ್ತು ಅಜ್ಜು ಅವರು ಆರೋಪಿಗಳೆಂದು ತೀರ್ಮಾನಿಸಿ ಅವರಲ್ಲಿ ಮಕ್ಸೂದ್, ಅಹಮದ್, ಅಪ್ಸರ್ ಮತ್ತು ಅಜ್ಜು ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್