ದೇಹ-ಮನಸ್ಸು ಸುಸ್ಥಿರಕ್ಕೆ ಯೋಗ ಮದ್ದು
Team Udayavani, Jun 22, 2018, 11:10 AM IST
ಚಿಕ್ಕಮಗಳೂರು: ಜಾತಿ, ಮತ, ಧರ್ಮ ಮತ್ತು ದೇಶದ ಪರಿಯಿಲ್ಲದೆ ವಸುದೈವ ಕುಟುಂಬಕಂ ಎನ್ನುವುದನ್ನು ವಿಶ್ವ ಯೋಗದಿನ ಅರ್ಥಪೂರ್ಣವಾಗಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಎಸ್.ಟಿ.ಎನ್. ತೆರೆದ ರಂಗಮಂದಿರದಲ್ಲಿ ಗುರುವಾರ ನಡೆದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಹ ಮತ್ತು ಮನಸ್ಸನ್ನು ಸುಸ್ಥಿರಗೊಳಿಸುವ ತಂತ್ರಜ್ಞಾನ ಯೋಗ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಮಹತ್ವ ತಂದವರು ಪ್ರಧಾನಿ ನರೇಂದ್ರ ಮೋದಿ. ಇದು ಭಾರತದ ವಿದ್ಯೆ. ಋಷಿಮುನಿಗಳು ತಪಸ್ಸು ಮತ್ತು ಶ್ರಮದಿಂದ ಆವಿಷ್ಕಾರವಾಯಿತು. ಆರೋಗ್ಯದ ಬಗ್ಗೆ ವಿದೇಶಗಳಲ್ಲಿ ಚರ್ಚೆ ನಡೆಯುತ್ತಿದ್ದಾಗ ಯೋಗ ಅದಕ್ಕೆ ಮದ್ದು, ಶಾಂತಿಗೂ ಅದೊಂದು ಮಾರ್ಗವೆಂಬುದನ್ನು ತಾವು ಕಂಡುಕೊಂಡ
ಸತ್ಯದ ಮೂಲಕ ವಿದೇಶದಲ್ಲೂ ಪ್ರಚುರಗೊಳಿಸಿದರು ಎಂದು ತಿಳಿಸಿದರು.
ಇಂದು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗಾಭ್ಯಾಸ ನಡೆದಿದೆ. ಯೋಗದಿನವನ್ನು ಆಯಾ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಔಷಧ ಮಾತ್ರೆಗಳಿಂದ ದೇಹ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಅವುಗಳ ಪಾರ್ಶ್ವ ಪರಿಣಾಮದಿಂದ ತಪ್ಪಿಸಿಕೊಳ್ಳಲು ಯೋಗಕ್ಕೆ ಶರಣಾಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ. ರವಿ ಮಾತನಾಡಿ, ಯೋಗ ನಮ್ಮ ಪ್ರಾಚೀನ ಋಷಿಮುನಿಗಳು
ಮನುಕುಲದ ಉದ್ಧಾರಕ್ಕೆ ನೀಡಿದ ಸೂತ್ರ. ಅವರು ಎಂದೂ ಅದನ್ನು ವ್ಯಾಪಾರೀಕರಣದ ಲಾಭ ಗಳಿಸುವ ಸರಕೆಂದು ಭಾವಿಸಿರಲಿಲ್ಲ ಎಂದರು.
ಯಾವ ನಿರ್ದಿಷ್ಟ ಆಸನಕ್ಕೂ ಪೇಟೆಂಟ್ ಪಡೆಯದೆ ಅದನ್ನು ಸಾರ್ವತ್ರಿಕವಾಗಿಸಿ ನಮ್ಮ ಹಿರಿಯರು ಅದನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬಂದರು. ಈ ವಿದ್ಯೆ ಪ್ರಧಾನಿ ಮೋದಿ ಅವರಿಂದ ವಿರಾಟ್ ಸ್ವರೂಪ ಪಡೆದು ವಿಶ್ವವ್ಯಾಪಿಯಾಯಿತು ಎಂದು ಹೇಳಿದರು.
ಕಾಡುತ್ತಿರುವ ಒಂದು ಆತಂಕವೆಂದರೆ ಅದರ ಅತಿಯಾದ ವೈಭವೀಕರಣ, ಹಾಗಾಗಲು ಬಿಡದೆ ಸಹಜವಾಗಿ ಯೋಗವನ್ನು ಆಚರಿಸಬೇಕು. ಅಮೂಲ್ಯವಾದ ಈ ವಿದ್ಯೆ ನಮ್ಮೊಳಗೆ ಇದೆ. ಕಸ್ತೂರಿ ಮೃಗಕ್ಕೆ ತನ್ನೊಳಗಿನ ಕಸ್ತೂರಿ ವಾಸನೆ ಅರಿಯದಂತೆ ನಮ್ಮೊಳಗೆ ಯೋಗ ವಿದ್ಯೆ ಇದ್ದು ಅದನ್ನು ಹೊರತಂದು ಅಭ್ಯಾಸ ಮಾಡಬೇಕು ಎಂದರು.
ದೇಹ, ಮನಸ್ಸುಗಳಾಚೆಗೆ ವಿಜ್ಞಾನ ಹೋಗುವುದಿಲ್ಲ. ಆದರೆ ಯೋಗ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟುಗೂಡಿಸುತ್ತದೆ. ದೇಹದಲ್ಲಿ ವಾತಾ-ಪಿತ್ತ-ಕಫ ಸಮಚಿತ್ತವಾಗಿರುವಂತೆ ನೋಡಿಕೊಳ್ಳುತ್ತದೆ. ಈ ಸಮಚಿತ್ತತೆ ಪಡೆದುಕೊಂಡವರು ನಿರೋಗಿ ಎಂದು ಹೇಳಿದರು.
ಪ್ರತಿ ಭಾರತೀಯ ಅಡುಗೆ ಮನೆ ಹಿಂದೆ ಒಂದು ಆಸ್ಪತ್ರೆಯಾಗಿತ್ತು. ಅದರಲ್ಲಿ ಅಮ್ಮನೆ ವೈದ್ಯೆ, ಆಯಾ ಕಾಲದಲ್ಲಿ ದೇಹದಲ್ಲುಂಟಾಗುವ ವ್ಯತ್ಯಾಸಗಳನ್ನರಿತು ಅದಕ್ಕೆ ಸೂಕ್ತವಾದ ಆಯಾ ತಯಾರಿಸಿ ಆಕೆ ನೀಡುತ್ತಿದ್ದಳು. ಆದರೆ ಇಂದು ನಾವು ಫ್ರೀಜ್ ಮತ್ತು ಓವನ್ಗಳ ನಡುವೆ ಬದುಕು ಸಾಗಿಸುತ್ತಿದ್ದೇವೆ. ಅದನ್ನು ಬಿಟ್ಟು ಯೋಗದಿಂದ ದೇಹ ಹಾಗೂ ಮನಸ್ಸಿಗೆ ಚೈತನ್ಯ ತುಂಬಿಕೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮಾ, ಆಯುಷ್ ಅಧಿಕಾರಿ ಡಾ| ಗೀತಾ ಇದ್ದರು. ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್ನ ಎಚ್.ಸಿ. ಸುರೇಂದ್ರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ