ಕರಿಯಮ್ಮ ದೇವಿ ಜಾತ್ರೆ ಆರಂಭ
Team Udayavani, Jan 29, 2019, 9:48 AM IST
ಚಿತ್ರದುರ್ಗ: ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಸೋಮವಾರ ಗಂಗಾಪೂಜೆಯೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು.
ಕರಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹೊಳೆಪೂಜೆಗೆ ಕೊಂಡೊಯ್ದು ಭಕ್ತರು ಗಂಗಾಪೂಜೆ ನೆರವೇರಿಸಿದರು. ಹೊಳೆಪೂಜೆ ಸಂದರ್ಭದಲ್ಲಿ 101 ಎಡೆಗಳನ್ನು ಹಾಕಿ ಪ್ರತಿಯೊಂದು ಜಾತಿ, ಧರ್ಮ, ಕೈವಾಡದವರಿಗೆ ಎಡೆ ನೀಡಲಾಯಿತು. ಗಂಗಾಪೂಜೆ ನಂತರ ಗ್ರಾಮಕ್ಕೆ ತೆರಳಿ ದೇವತೆಗೆ ಕಂಕಣಧಾರಣೆ ಮಾಡಲಾಯಿತು. ಘಟ ಮತ್ತು ಭಾನ ಪೂಜೆ ನೆರವೇರಿದವು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ರಾತ್ರಿ ಹರಿಯಬ್ಬೆ ಪಾಳ್ಯ ಗ್ರಾಮಸ್ಥರು ‘ದೇವಿ ಮಹಾತ್ಮೆ’ ನಾಟಕ ಪ್ರದರ್ಶಿಸಿದರು.
ಇಂದಿನ ಕಾರ್ಯಕ್ರಮ: ಜ. 29 ರಂದು ಸಂಜೆ ಗ್ರಾಮಕ್ಕೆ ಸರಗ ಹಾಕಲಾಗುತ್ತದೆ. ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಚಿತ್ರದುರ್ಗದ ಲಾಸಿಕಾ ಫೌಂಡೇಶನ್ ವತಿಯಿಂದ ಶ್ರೀಕೃಷ್ಣ ಲೀಲೋತ್ಸವ ನೃತ್ಯರೂಪಕ ಹಾಗೂ ಉತ್ತರ ಕನ್ನಡ ಜಿಲ್ಲೆ ಕಾನಸೂರು ಗ್ರಾಮದ ವಿದುಷಿ ಶ್ವೇತಾ ಭಟ್ ಅವರಿಂದ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಪ್ರದರ್ಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’