ಸಂಭ್ರಮದ ತೋಪಿನ ಗೊಲ್ಲಾಳಮ್ಮ ದೇವಿ ಜಾತ್ರೆ
Team Udayavani, Feb 22, 2019, 11:59 AM IST
ಧರ್ಮಪುರ: ಇಲ್ಲಿನ ತೋಪಿನ ಗೊಲ್ಲಾಳಮ್ಮ ದೇವಿ ಜಾತ್ರೆ ಸಡಗರ ಸಭ್ರಮದಿಂದ ಜರುಗಿತು. ಗೊಲ್ಲಾಳಮ್ಮ ದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿ ವಿವಿಧ ಪೂಜಾ ಕೈಕಂರ್ಯಗಳು ನೆರವೇರಿದವು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅರತಿ ಸೇವೆ, ಉಂಡೆ, ಮಂಡೆ, ಬೇವಿನ ಸೀರೆ ತೊಟ್ಟು ಹರಕೆ ತೀರಿಸಿದರು. ಭಕ್ತರಿಗೆ ಸಕಲ ಸೌಲಭ್ಯವನ್ನು ದೇವಸ್ಥಾನ ಕಮಿಟಿ ಒದಗಿಸಿತ್ತು. ಯಾವುದೇ ತೊಂದರೆ ಆಗದಂತೆ ಪೊಲೀಸರು ಬಿಗಿಬಂದೋಬಸ್ತ್ ಒದಗಿಸಿದ್ದರು.
ಯಾದವ ನಂದ ಸ್ವಾಮೀಜಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ಚಿತ್ರದುರ್ಗ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಮಾಜಿ ಸಂಸದ ಜನಾರ್ದನ ಸ್ವಾಮಿ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಲಾರೆ: ನಾರಾಯಣ ಸ್ವಾಮಿ
“ಕಾಂಗ್ರೆಸ್ನಿಂದ ರೈತಪರ ಯೋಜನೆ ರದ್ದು’:ಎ.ಎಸ್. ಪಾಟೀಲ್ ನಡಹಳ್ಳಿ
Tragic: ಚಾಕೋಲೇಟ್ ಎಂದು ಭಾವಿಸಿ ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು
Bharamasagara; ಕಾತ್ರಾಳು ಕೆರೆಗೆ 300 ಕ್ಕೂ ಹೆಚ್ಚು ಸತ್ತ ಕೋಳಿಗಳು : ಜನಾಕ್ರೋಶ
Pre Wedding Shoot: ವೈದ್ಯನನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ