ಈ ವೃದ್ಧ ಮಾತೆ ಎಂಟು ಮಕ್ಕಳಿದ್ದರೂ ಅನಾಥೆ!


Team Udayavani, Dec 10, 2017, 3:12 PM IST

3-aa.jpg

ಉಪ್ಪಿನಂಗಡಿ(ದಕ್ಷಿಣ ಕನ್ನಡ): 8 ಮಕ್ಕಳಿದ್ದರೂ ಮಾತೆ ಯೊಬ್ಬರು ತನ್ನ 85ರ ಇಳಿ ವಯಸ್ಸಿನಲ್ಲಿ ಬೀದಿ ಪಾಲಾಗಿ, ತುತ್ತು ಅನ್ನಕ್ಕಾಗಿ ಅಂಗಲಾಚಬೇಕಾದ ದುಃಸ್ಥಿತಿಯ ಪ್ರಕರಣ ಉಪ್ಪಿನಂಗಡಿ ಠಾಣೆಯ ಮೆಟ್ಟಿಲೇರಿದೆ.

ಮೂಲತಃ ಉಪ್ಪಿನಂಗಡಿಯ ಮುಳಿಯ ನಿವಾಸಿಯಾಗಿದ್ದ, ಪ್ರಸಕ್ತ ಇಳಂತಿಲದ ಕುಂಟಾಲಕಟ್ಟೆ ಎಂಬಲ್ಲಿ ವಾಸ್ತವ್ಯವಿರುವ ಲಕ್ಷ್ಮೀ ಹೆಗ್ಡೆ ಎಂಬ ವೃದ್ಧೆಯ ಕರುಣಾಜನಕ ಕತೆ ಇದು. ಎರಡು ಹೆಣ್ಣು ಮತ್ತು ಆರು ಗಂಡುಮಕ್ಕಳ ತಾಯಿ ಈಕೆ. ಮಕ್ಕಳಲ್ಲಿ ಹಲವರು ಸರ್ಕಾರಿ ನೌಕರಿಯಲ್ಲಿದ್ದಾರೆ. ತನ್ನದಾಗಿದ್ದ 5.30 ಎಕ್ರೆ ಕೃಷಿಭೂಮಿಯನ್ನು ಅಳಿಯನ ಸಂಕಷ್ಟದ ಕಾರಣ ಹಾಗೂ ಮಕ್ಕಳ ನಿರ್ಧಾರಗಳಿಂದಾಗಿ ಮಾರಾಟ ಮಾಡಿದ್ದು, ಪ್ರಸಕ್ತ ಇಳಂತಿಲದ 5 ಸೆಂಟ್ಸ್‌ ಭೂಮಿ ಮಾತ್ರ ಇವರದ್ದಾಗಿದೆ.

ಅಲ್ಲಿರುವ ಛಾವಣಿ ಕುಸಿದ ಮನೆ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಆಸರೆಗಾಗಿ ಮಕ್ಕಳ ಮನೆ ಬಾಗಿಲಿಗೆ ಹೋದರೆ ಅಲ್ಲಿಂದಲೂ ಹೊರಹಾಕಿದ್ದಾರೆ. ದಿಕ್ಕೆಟ್ಟವೃದ್ಧೆಗೆ ಉಪ್ಪಿನಂಗಡಿ ಅಂಜೆಲ್‌ ಪ್ರಿಂಟರ್ಸ್‌ ಮಾಲೀಕ ಓಸ್ವಾಲ್ಡ್‌ ಪಿಂಟೋ ಕಳೆದ 75 ದಿನಗಳಿಂದ ಆಸರೆ ನೀಡಿದ್ದಾರೆ. ಇಷ್ಟು ದಿನಗಳಾದರೂ ವೃದ್ಧೆಯ ಮಕ್ಕಳು ಪಿಂಟೋ ಅವರ ಸತತ ಮನವಿಯನ್ನು ತಳ್ಳಿಹಾಕಿದ್ದಾರೆ. ತಾಯಿಯನ್ನು ನೋಡುವುದಕ್ಕೂ ಬಾರದೆ, ಕೊನೆಗೆ ಫೋನಿಗೂ ಸ್ಪಂದಿಸದಿದ್ದಾಗ ಪಿಂಟೋ ಪ್ರಕರಣವನ್ನು ಪೊಲೀಸ್‌ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಸಂಕಷ್ಟ: ಸರಕಾರಿ ಉದ್ಯೋಗದಲ್ಲಿದ್ದು, ಅಧಿಕಾರಿ ಸ್ಥಾನದಲ್ಲಿರುವ ಲಕ್ಷ್ಮೀ ಹೆಗ್ಡೆ ಅವರ ಮಕ್ಕಳನ್ನು ಸಂಪರ್ಕಿಸಿ “ತಾಯಿಯನ್ನು ಕರೆದು ಕೊಯ್ಯಿರಿ’ ಎಂದು ವಿನಂತಿಸಿದರೆ, ಯಾರೂ ಸಿದ್ಧರಿಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಕಿರಿಯ ಮಗ, ತಾಯಿಯನ್ನು ತನ್ನ ಮನೆಗೆ ಕರೆದೊಯ್ಯುತ್ತೇನೆ ಎಂದರೆ ಸೊಸೆ ತಾನು ಮನೆ ತೊರೆಯುತ್ತೇನೆ ಎಂದು ಬೆದರಿಕೆ ಹಾಕುತ್ತಿರುವುದರಿಂದ ಕಿರಿಯ ಮಗ ಅಡಕತ್ತರಿಯಲ್ಲಿ ಸಿಲುಕಿದಂತಹ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪೊಲೀಸರ ಶ್ರಮ ವ್ಯರ್ಥ 

“ನಾನು ನಿಮಗೆಲ್ಲ ಭಾರವಾಗಿದ್ದೇನೆ ಎಂದಾದರೆ ದಯವಿಟ್ಟು ಮನೆಯನ್ನು ರಿಪೇರಿ ಮಾಡಿಕೊಡಿ, ನಾನು ಅಲ್ಲೇ ಇರುತ್ತೇನೆ’ ಎಂದು ವೃದ್ಧೆ ಅಂಗಲಾಚಿದರೆ ಮನೆ ದುರಸ್ತಿಗೂ ಯಾರೂ ಮುಂದಾಗುತ್ತಿಲ್ಲ. ವೃದ್ಧೆಯ ಸಂಕಷ್ಟಕ್ಕೆ ರಾಜಿ ಪರಿಹಾರಕ್ಕೆ ಪೊಲೀಸರು ಪಟ್ಟ ಶ್ರಮವೆಲ್ಲ ವ್ಯರ್ಥವಾಗಿದೆ.

ವೃದ್ಧಾಪ್ಯ ವೇತನವಿಲ್ಲ

 ಮಕ್ಕಳ ಆಸರೆಯಿಲ್ಲದ 85ರ ವೃದ್ಧೆಗೆ ಸರ್ಕಾರದ ವೃದ್ಧಾಪ್ಯ ವೇತನವಾಗಲಿ, ವಿಧವಾ ವೇತನವಾಗಲಿ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಿದಾಗಲೆಲ್ಲ, “ಮಕ್ಕಳು ಸರಕಾರಿ ಅಧಿಕಾರಿಗಳಾಗಿದ್ದು, ನಿಮಗೆ ಸರಕಾರಿ ಸೌಲಭ್ಯ ನೀಡಲು ಸಾಧ್ಯವಿಲ್ಲ’ ಎಂಬ ಉತ್ತರವೇ ಲಭಿಸಿದೆ. ಮಕ್ಕಳ ಆಶ್ರಯದಲ್ಲಿಲ್ಲವೆಂದರೆ, ಇಲಾಖಾ ಸಿಬ್ಬಂದಿ ಕೇಳುತ್ತಿಲ್ಲ ಎನ್ನುತ್ತಾರೆ ವೃದ್ಧೆ ಲಕ್ಷ್ಮೀ ಹೆಗ್ಡೆ. 

ಕರಗಿದ ಠಾಣಾಧಿಕಾರಿ
ಲಕ್ಷ್ಮೀ ಹೆಗ್ಡೆ ಅವರ ಕರುಣಾಜನಕ ವೃತ್ತಾಂತ ಆಲಿಸಿದ ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್‌ ಅವರ ಮನ ಕರಗಿತು. ಅವರು ತನ್ನ ಮನೆಯಲ್ಲೇ ಆಶ್ರಯ ನೀಡುವ ಪ್ರಸ್ತಾವ ಮುಂದಿರಿಸಿದರು. ಇದನ್ನು ಕೇಳಿದ ವೃದ್ಧೆ
ಕಚೇರಿಯಲ್ಲಿ ಕಂಬನಿಗರೆದು, “ಹುಟ್ಟಿದರೆ ನಿಮ್ಮಂಥ ಸ್ವಭಾವದ ಮಕ್ಕಳು ಹುಟ್ಟಬೇಕು’ ಎಂದರು. ವಾಸಿಸಲು
ಇರುವ ಸ್ವಂತ ಮನೆಯನ್ನು ಸರಿಪಡಿಸಿಕೊಡಿ’ ಅಷ್ಟೇ ಸಾಕು ಎಂದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.