ಈ ಬಾರಿಯೂ ಕೈ ಕೊಡ್ತು ಮುಂಗಾರು ಮಳೆ


Team Udayavani, Aug 17, 2017, 12:22 PM IST

17-DV-2.jpg

ದಾವಣಗೆರೆ: ಸತತ ಎರಡು ವರ್ಷ ಬರದ ಬೇಗೆಯಲ್ಲಿ ಬೆಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ ಈ ಬಾರಿಯೂ ಬರದ ವಾತಾವರಣ ದಟ್ಟವಾಗುತ್ತಿದೆ!. ಜಿಲ್ಲೆಯಾದ್ಯಂತ ಈವರೆಗೆ ಮಳೆಯ ಕೊರತೆ, ಮಳೆಗಾಲದಲ್ಲೇ ಬಿರು ಬೇಸಿಗೆಯನ್ನೂ ಮೀರಿಸುತ್ತಿರುವ ಬಿಸಿಲ ಧಗೆ ಎಲ್ಲವೂ ಸತತ ಮೂರನೇ ವರ್ಷವೂ ಬರಗಾಲ ಖಾಯಂ ಎನ್ನುವುದರ ಮನ್ಸೂಚನೆ ನೀಡುವಂತಿದೆ. ಬರದ ಬವಣೆ, ಕುಡಿಯುವ ನೀರಿನ ಸಮಸ್ಯೆ ಎದರಿಸಲು ಈಗಿನಿಂದಲೇ ಎಲ್ಲ ರೀತಿಯಲ್ಲಿ ಸಜ್ಜಾಗಬೇಕಿದೆ.

ಈವರೆಗೆ ಮಳೆಗಾದಲ್ಲಿ ಒಮ್ಮೆ ಬಿಟ್ಟರೆ ರಭಸದ ಮಳೆಯೇ ಸುರಿದದ್ದು ಗೋಚರಿಸಲಿಲ್ಲ. ಇದನ್ನ ಸಾಬೀತು ಮಾಡಲು ಮಳೆಗಾಲದಲ್ಲೇ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರು ಪರದಾಡುತ್ತಿರುವುದು. 80ಕ್ಕೂ ಹೆಚ್ಚು ಗ್ರಾಮಗಳಿಗೆ ಈಗ ಟ್ಯಾಂಕರ್‌ ನೀರೇ ಆಧಾರ ಎನ್ನುವುದು ಮಳೆ ಕೊರತೆಯ
ಪ್ರತೀಕ. ಮುಂಗಾರು ಪೂರ್ವ, ನಂತರದಲ್ಲಿ ಗಟ್ಟಿ ಮಳೆ ಎನ್ನುವುದನ್ನು ಈ ಬಾರಿ ಯಾರೂ ನೋಡಲೇ ಇಲ್ಲ. ಸತತ ಎರಡು ವರ್ಷ ಮಾತ್ರವಲ್ಲದೆ ಈಗಲೂ ಹಸಿ, ಹದವಾದ ಮಳೆ ಇಲ್ಲದ ಕಾರಣ ಭೂಮಿಯ ಪಸೆಯೇ ಬತ್ತಿದೆ. ಎಲ್ಲೆಡೆ ತೇವಾಂಶದ ಕೊರತೆ ಅತೀ ಗಂಭೀರವಾಗಿದೆ.

ಭೂಮಿಯಲ್ಲಿ ತೇವಾಂಶ ಇಲ್ಲದೆ ಬಿತ್ತಿದ ಬೆಳೆ ಮೊಳಕೆಯೊಡೆಯದು, ಒಂದೊಮ್ಮೆ ಮೊಳಕೆಯೊಡೆದರೂ ಬಿಸಿಲು, ಗಾಳಿ ತಡೆಯುವ ಸ್ಥಿತಿಯಲ್ಲೇ ಇಲ್ಲ. 3-4 ಇಂಚಿನ ಮೇಲೆ ಎಲ್ಲಿಯೂ ತೇವಾಂಶವೇ ಇಲ್ಲದ ಕಾರಣ ಹರಪನಹಳ್ಳಿ, ಜಗಳೂರು ಇತರೆಡೆ ಬೆಳೆಗಳು ಮಳೆ ಕೊಂಚ ತಡವಾದರೂ
ಮುರುಟಿ ಹೋಗುತ್ತಿವೆ. ಮಳೆಯ ನಿರೀಕ್ಷೆಯಲ್ಲೇ ಬಿತ್ತಿದ್ದ ಮೆಕ್ಕೆಜೋಳ ಮೊಳಕೆಯೊಡೆಯದೇ ಅದನ್ನು ನಾಶ ಮಾಡಿ, ಮತ್ತೆ ಬಿತ್ತನೆ ಮಾಡಿದ್ದ ಬೆಳೆಯೂ ಒಣಗಿದ್ದರಿಂದ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗ್ರಾಮ ಪಂಚಾಯತಿ ಸದಸ್ಯ ಸಿದ್ದಪ್ಪ ಎಂಬುವರು ಆತ್ಮಹತ್ಯೆಗೆ ಒಳಗಾಗಿರುವುದು ಇಂದಿನ ಹಾಗೂ ಮುಂದಿನ ಭೀಕರ ಪರಿಸ್ಥಿತಿಯ ಕೈಗನ್ನಡಿ.

ಶೇ.-28 ಮಳೆ ಕೊರತೆ: ಜಿಲ್ಲೆಯಲ್ಲಿ  ಈವರೆಗೆ ಮಳೆಯ ಕೊರತೆಯ ಪ್ರಮಾಣ ಹೆಚ್ಚಾಗುತ್ತಲೆ ಇದೆ. ಜುಲೈ ಅಂತ್ಯಕ್ಕೆ ಶೇ.-22 ರಷ್ಟಿದ್ದ ಮಳೆಯ ಕೊರತೆ. ಆ. 14 ರ ಅಂತ್ಯಕ್ಕೆ ಶೇ.-28 ಮುಟ್ಟಿದೆ. ಮುಂಗಾರು ಪ್ರಾರಂಭದ ನಂತರ ಯಾವುದೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ವಾಸ್ತವ ಮಳೆಯ
ಪ್ರಮಾಣ ಹೆಚ್ಚಾದ ಉದಾಹರಣೆಯೇ ಇಲ್ಲ.

ಏಪ್ರಿಲ್‌ನಲ್ಲಿ 36 ಮಿಲಿ ಮೀಟರ್‌ ವಾಡಿಕೆ ಮಳೆಗೆ ಆಗಿದ್ದು 14.3 ಮಿಲಿ ಮೀಟರ್‌. ಮೇ ತಿಂಗಳಲ್ಲಿ 74.7 ಮಿಲಿ ಮೀಟರ್‌ಗೆ 54.7 ಮಿಲಿ ಮೀಟರ್‌ ಮಳೆಯಾಗಿತ್ತು. ಜೂನ್‌ನಲ್ಲಿ 76 ಮಿಲಿ ಮೀಟರ್‌ಗೆ 58 ಮಿಲಿ ಮೀಟರ್‌, ಜುಲೈನಲ್ಲಿ 99 ಮಿಲಿ ಮೀಟರ್‌ಗೆ 77 ಮಿಲಿ ಮೀಟರ್‌, ಆಗಸ್ಟ್‌ನ 42 ಮಿಲಿ ಮೀಟರ್‌ ಗೆ ಅ.14ರ ಅಂತ್ಯಕ್ಕೆ 30 ಮಿಲಿ ಮೀಟರ್‌ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈವರೆಗೆ ಆಗಬೇಕಿದ್ದ 334 ಮಿಲಿ ಮೀಟರ್‌ ಮಳೆಗೆ 239 ಮಿಲಿ ಮೀಟರ್‌ನಷ್ಟು ಮಾತ್ರ ಮಳೆಯಾಗಿದೆ.

ಕುಸಿದ ಬಿತ್ತನೆ: ದಾವಣಗೆರೆ ಜಿಲ್ಲೆಯಲ್ಲಿ ಒಟ್ಟಿರುವ 2,29,800 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು 1,89,510 ಹೆಕ್ಟೇರ್‌ನಲ್ಲಿ ಮಾತ್ರ. ಆಗಸ್ಟ್‌ ಎರಡನೇ ವಾರಕ್ಕೆ ಇನ್ನೂ 40,290 ಹೆಕ್ಟೇರ್‌ ನಲ್ಲಿ ಬಿತ್ತನೆ ಆಗಿಯೇ ಇಲ್ಲ. ಜಿಲ್ಲೆಯ ಮುಖ್ಯ ಬೆಳೆ ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿದಿದೆ. ಇನ್ನೇನೂ ಸಮಯ ಇರುವುದು ರಾಗಿಗೆ ಮಾತ್ರ. ಆದರೆ, ಆ ರಾಗಿ ಬಿತ್ತನೆ ಮಾಡಲಿಕ್ಕಾದರೂ ಅವಕಾಶ ಇಲ್ಲದಂತಾಗುತ್ತಿದೆ.

ದಾವಣಗೆರೆ ತಾಲೂಕಿನ 35,275 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು 29,667 ಹೆಕ್ಟೇರ್‌ನಲ್ಲಿ. ಅಂತೆಯೇ ಹರಿಹರದಲ್ಲಿ 12,350 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು ಕೇವಲ 4,794 ಹೆಕ್ಟೇರ್‌ನಲ್ಲಿ ಮಾತ್ರ. ಜಗಳೂರಿನ 44,110 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ 32,260 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹರಪನಹಳ್ಳಿಯ 61,115 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ 57,775 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೊನ್ನಾಳಿಯ 36,895 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶ ಪೈಕಿ 33,330 ಹೆಕ್ಟೇರ್‌ನಲ್ಲಿ ಬಿತ್ತನೆ
ಮಾಡಲಾಗಿದೆ. ಚನ್ನಗಿರಿಯ 40,055 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶಲ್ಲಿ 32,186 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ದಾಖಲೆಯಲ್ಲಿ ಬಿತ್ತನೆ ಪ್ರದೇಶ, ಪ್ರಮಾಣ ಗಮನಿಸಿದರೆ ಅಂತಹ ಭಾರೀ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಆದರೆ, ವಾಸ್ತವ ಸ್ಥಿತಿ ದಾಖಲೆಗಿಂತಲೂ ಅತೀವ ಗಂಭೀರ. ದಾಖಲೆಯ ಆಧಾರಕ್ಕೂ ನೈಜ ಚಿತ್ರಣಕ್ಕೂ ಅಗಾಧ ವ್ಯತ್ಯಾಸ ಎಲ್ಲೆಡೆ ಕಂಡು ಬರುತ್ತಿದೆ.

ನೀರಾವರಿಯಲ್ಲೂ ಇಲ್ಲ: ಜಿಲ್ಲೆಯ 1,10, 200 ಹೆಕ್ಟೇರ್‌ನಷ್ಟು ನೀರಾವರಿ ಪ್ರದೇಶದಲ್ಲಿ ಈವರೆಗೆ ಬಿತ್ತನೆಯಾಗಿರುವುದು ಕೇವಲ 20,282 ಹೆಕ್ಟೇರ್‌ನಲ್ಲಿ ಮಾತ್ರ. ದಾವಣಗೆರೆ ತಾಲೂಕಿನಲ್ಲಿ 28,725 ಹೆಕ್ಟೇರ್‌ಗೆ 8,080 ಹೆಕ್ಟೇರ್‌ನಲ್ಲಿ, ಹರಿಹರದಲ್ಲಿ 19,650 ಹೆಕ್ಟೇರ್‌ಹೆ 1,229, ಜಗಳೂರಿನಲ್ಲಿ 8,890ಕ್ಕೆ 502 ಹೆಕ್ಟೇರ್‌, ಹರಪನಹಳ್ಳಿಯಲ್ಲಿ 18,885 ಹೆಕ್ಟೇರ್‌ಗೆ 6,035, ಚನ್ನಗಿರಿಯಲ್ಲಿ 15,945 ಹೆಕ್ಟೇರ್‌ಗೆ 715 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಆಗಿರುವುದು ಮಳೆಯ ಕೊರತೆ ತೋರಿಸುತ್ತದೆ. ಅಂತೆಯೇ ಮುಂದಿನ ಬರಗಾಲಕ್ಕೆ ಮುನ್ನುಡಿಯಂತಿದೆ.

ವಿಶೇಷ ವರದಿ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.