ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ


Team Udayavani, Jul 20, 2018, 3:07 PM IST

dvg-2.jpg

ಹರಿಹರ: ಹರಿಹರ-ಕುಮಾರಪಟ್ಟಣಂ ಮಧ್ಯೆ ತುಂಗಭದ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಕೊನೆ ಹಂತದಲ್ಲಿದ್ದು, ಹೊಸ ಸೇತುವೆ ಮೇಲೆ ಪರೀಕ್ಷಾರ್ಥ ವಾಹನ ಸಂಚಾರ ಆರಂಭಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳು ಅಲ್ಲದೆ ಲಾರಿ ಮುಂತಾದ ಭಾರಿ ವಾಹನಗಳು ಕಳೆದೊಂದು ವಾರದಿಂದ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದು, ಎಂಜಿನಿಯರ್‌ಗಳು ಸೇತುವೆ ಬಳಿ ಹಾಜರಿದ್ದು, ತಾಂತ್ರಿಕತೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸೇತುವೆಯ ಆರಂಭ ಮತ್ತು ಕೊನೆಯಲ್ಲಿ ಏರಿಗಳ (ಅಬಾರ್ಡ್‌ಮೆಂಟ್‌) ನಿರ್ಮಾಣ ಸಹ ಮುಗಿದಿದ್ದು, ಸೇತುವೆಯಿಂದ ದರ್ಗಾದವರೆಗೆ 200 ಮೀ. ರಸ್ತೆಗೆ ಹಾಗೂ ಲಿಂಕ್‌ ರಸ್ತೆ ಡಾಂಬರೀಕರಣ ಮತ್ತು ಸೇತುವೆ ಇಕ್ಕೆಲಗಳಲ್ಲಿ ಸೈಡ್‌ ವಾಲ್‌ ನಿರ್ಮಾಣ ಬಾಕಿ ಇದ್ದು, ಇನ್ನೆರಡು ತಿಂಗಳಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆಆರ್‌ ಡಿಸಿಎಲ್‌ ಎಇಇ ವಸಂತ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆರ್ಥಿಕತೆಗೆ ಚೇತರಿಕೆ: ಹಳೆ ಸೇತುವೆ ಶಿಥಿಲಗೊಂಡು ಭಾರೀ ವಾಹನಗಳು ಬೈಪಾಸ್‌ ರಸ್ತೆ ಮೂಲಕ ಸಾಗುತ್ತಿದ್ದರಿಂದ ಹಿನ್ನೆಡೆ ಅನುಭವಿಸುತ್ತಿದ್ದ ಹರಿಹರದ ಆರ್ಥಿಕತೆ ನೂತನ ಸೇತುವೆಯಿಂದ ಚೇತರಿಸಿಕೊಳ್ಳಲಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಖಾಸಗೀ ವಾಹನಗಳು 7 ಕಿ.ಮೀ. ಸುತ್ತಿ ಬಳಸಿ ಸಂಚರಿಸುವುದು ತಪ್ಪಿ ಸಮಯ, ಇಂಧನ ಉಳಿತಾಯವಾಗಲಿದೆ. 

ನೂತನ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಹೊಸತನ ಅನುಭವಿಸುತ್ತಿದ್ದಾರೆ. ಮೈದುಂಬಿ ಹರಿಯುವ ನದಿಯನ್ನು ಹೊಸ ಸೇತುವೆ ಮೇಲೆ ವೀಕ್ಷಣೆ ಮಾಡುತ್ತಿರುವ ನಗರದ ಜನತೆಯೂ ಸಂತಸ ಪಡುತ್ತಿದ್ದಾರೆ. 

ಹೊಸ ಸೇತುವೆಯ ವಿವರ: ಹಳೆ ಸೇತುವೆ 305 ಮೀ. ಉದ್ದವಿದ್ದರೆ ನೂತನ ಸೇತುವೆ ಒಟ್ಟು 295 ಮೀ.ಉದ್ದವಿದೆ. ಹಳೆ‌ ಸೇತುವೆ 5.25 ಮೀ. ಅಗಲವಿದ್ದರೆ, ನೂತನ ಸೇತುವೆ ಅದರ ಎರಡು ಪಟ್ಟು ಅಗಲವಾಗಿದೆ. ಹಳೆ ಸೇತುವೆಗೆ 18.4 ಮೀ. ಅಂತರದಲ್ಲಿ 14 ಕಮಾನುಗಳಿದ್ದರೆ, ಹೊಸ ಸೇತುವೆಗೆ 42 ಮೀ. ಅಂತರದಲ್ಲಿ 7 ಕಮಾನುಗಳಿವೆ. 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಪಿ. ಹರೀಶ್‌ ಶಾಸಕರಾಗಿದ್ದಾಗ 2011-12ನೇ ವರ್ಷದ ರಾಜ್ಯ ಬಜೆಟ್‌ನಲ್ಲಿ ಸೇತುವೆ ಕಾಮಗಾರಿಗೆ 19.87 ಕೋಟಿ ರೂ. ಅನುದಾನ ನಿಗ ದಿ ಮಾಡಲಾಗಿತ್ತು. ಈಸ್ಟ್‌ ಕೋಸ್ಟ್‌ ಕನ್ಸ್‌ಟ್ರಕ್ಷನ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ಕಂಪನಿಗೆ ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಉಸ್ತುವಾರಿ ವಹಿಸಲಾಗಿತ್ತು. 2013ರ ಡಿಸೆಂಬರ್‌ ಒಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಗುತ್ತಿಗೆದಾರರ ಆರ್ಥಿಕ ಸಂಕಷ್ಟದಿಂದಾಗಿ 7 ವರ್ಷಗಳವರೆಗೆ ಮುಂದುವರೆಯಿತು.

 ಹಳೆ ಸೇತುವೆ ಇತಿಹಾಸ: ಸುಮಾರು ಒಂದೂವರೆ ಶತಮಾನದ ಹಿಂದೆ ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದ್ದ ಹಳೆ ಸೇತುವೆ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳ ಮಹತ್ವದ ಸಂಪರ್ಕ ಕೊಂಡಿಯಾಗಿತ್ತು. ಅಂದಿನ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ 999 ಅಡಿ ಉದ್ದದ ಸೇತುವೆಯ 2 ಕಮಾನುಗಳು 1924 ರಲ್ಲಿ ಪ್ರವಾಹ, ನದಿ ನೀರಿನ ಸೆಳವಿಗೆ ತುತ್ತಾಗಿ ಕುಸಿದಿದ್ದವು. ಬ್ರಿಟಿಷ್‌ ಸರ್ಕಾರ ಅವುಗಳನ್ನು ಪುನರ್‌ನಿರ್ಮಿಸಿತ್ತು. 

ಸ್ವಾತಂತ್ರ್ಯ ನಂತರದಲ್ಲಿ ವಾಹನಗಳ ಹೆಚ್ಚಳ, ಸೂಕ್ತ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದ ಸೇತುವೆಯ ಮತ್ತೂಂದು ಕಮಾನು ಸಹ ಬಿರುಕು ಬಿಟ್ಟಿದ್ದರಿಂದ ಕಳೆದ 25 ವರ್ಷಗಳಿಂದ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಂದಿನಿಂದಲೂ ನೂತನ ಸೇತುವೆ ನಿರ್ಮಾಣಕ್ಕೆ ಈ ಭಾಗದ ಜನರು, ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದು ಅದು ಈಗ
ಈಡೇರುತ್ತಿದೆ. 

ನಿತ್ಯ ಅಂದಾಜು 300 ಬಸ್‌ಗಳು ಹರಿಹರ-ರಾಣೆಬೆನ್ನೂರು ಮಧ್ಯೆ ಸಂಚರಿಸುತ್ತಿದ್ದು, ಅಪಾರ ಪ್ರಮಾಣದ ಇಂಧನ ಹಾಗೂ ಸಮಯದ ಉಳಿತಾಯವಾಗುವುದು ನಮಗೆ ಅತೀವ ಸಂತಸ ತಂದಿದೆ. ಪ್ರಯಾಣ ದರ ಇಳಿಕೆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.  ಪರಮೇಶ್ವರಪ್ಪ, ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌, ಹರಿಹರ. 

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.