ಪಟ್ಟಣಕ್ಕೊಂದೇ ಗಣಪ ಪ್ರತಿಷ್ಠಾಪಿಸಿದರೆ ಒಗ್ಗಟ್ಟು: ಮೇಘರಾಜ್
Team Udayavani, Aug 23, 2018, 3:35 PM IST
ಮಲೇಬೆನ್ನೂರು: ಪಟ್ಟಣದಲ್ಲಿ ಐಕ್ಯತೆ ಭಾವನೆ ಮೂಡಿಸುವ ಸಲುವಾಗಿ ಒಂದೇ ಗಣಪನನ್ನು ಪ್ರತಿಷ್ಠಾಪಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬೇಕೆಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಪಿಎಸ್ಐ ಮೇಘರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವಾರು ಗಣಪತಿಗಳನ್ನು ಪ್ರತಿಷ್ಠಾಪಿಸುವುದರ ಬದಲಾಗಿ ಒಂದೇ ಗಣಪತಿಯನ್ನು ಪ್ರತಿಷ್ಠಾಪಿಸಿದಾಗ ಪ್ರತಿಯೊಬ್ಬರೂ ಒಂದೆಡೆ ಸೇರುವುದರಿಂದ ಒಗ್ಗಟ್ಟು ಇರುತ್ತದೆ ಎಂದರು. ಪಟ್ಟಣದ ಪ್ರತಿಭೆಗಳಿಗೆ ಕಲೆ ಅನಾವರಣಕ್ಕೆ ಉತ್ತಮ ವೇದಿಕೆ ದೊರಕುತ್ತದೆ. ಎಷ್ಟೇ ದಿನ ಗಣಪನನ್ನು ಪ್ರತಿಷ್ಠಾಪಿಸಿದರೂ ನಾವು ಭದ್ರತೆ ನೀಡಲು ಸಿದ್ಧ ಎಂದು ಪಿಎಸ್ಐ ಮೇಘರಾಜ್ ಸಭೆಯಲ್ಲಿ ತಿಳಿಸಿದರು.
ಈಗಾಗಲೇ ಗಣಪತಿ ತಯಾರಕರಿಗೆ ಮುಂಗಡ ಹಣ ನೀಡಲಾಗಿದ್ದು, ಒಂದೇ ಗಣಪ ಪ್ರತಿಷ್ಠಾಪಿಸಲು ಹೇಗೆ ಸಾಧ್ಯ ಎಂದು ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು ತಮ್ಮ ಸಮಸ್ಯೆ ಹೇಳಿದಾಗ, ಹಾಗಿದ್ದಲ್ಲಿ ಈ ಬಾರಿ ಗಣಪನನ್ನು ಪ್ರತಿಷ್ಠಾಪಿಸಿರಿ. ಊರೊಟ್ಟಿನಿಂದ ಒಂದು ಗಣಪ ಇಡೋಣ. ಗಣಪನ ವಿಸರ್ಜನೆ ಮೆರವಣಿಗೆ ಮಾತ್ರ ಎಲ್ಲರೂ ಒಂದೇ ದಿನ ನೆರವೇರಿಸಬೇಕು. ಬೇರೆ ದಿನ ವಿಸರ್ಜಿಸುವವರು ಯಾವುದೇ ರೀತಿಯ ಆಡಂಬರದ ಮೆರವಣಿಗೆ ಮಾಡದೆ ಸರಳವಾಗಿ ವಿಸರ್ಜಿಸಬೇಕು ಎಂದು ಪಿಎಸ್ಐ ಸಲಹೆ ನೀಡಿದರು.
ಈಗಾಗಲೇ ಚನ್ನಗಿರಿಯಲ್ಲಿ ಒಂದೇ ಗಣಪ ಪ್ರತಿಷ್ಠಾಪಿಸುವ ಪದ್ಧತಿ ಪ್ರಾರಂಭಿಸಿ ಯಶಸ್ವಿಯೂ ಆಗಿದ್ದಾರೆ. ಇಲ್ಲೂ ಒಂದೇ ಗಣಪ ಪ್ರತಿಷ್ಠಾಪಿಸುವ ಮೂಲಕ ಪೊಲೀಸ್ ಕರೆಗೆ ಕೈ ಜೋಡಿಸಿ ಎಂದು ವಿನಂತಿಸಿದರು. ಸಭೆಯಲ್ಲಿ ಪಟ್ಟಣದ ಎಲ್ಲ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿ ಪೊಲೀಸರ ಕರೆಗೆ ಸಮ್ಮತಿಸಿದರು. ಒಂದೇ ಗಣಪತಿ ಪ್ರತಿಷ್ಠಾಪಿಸಲು ಕಮಿಟಿ ರಚಿಸಬೇಕು. ಕಮಿಟಿ ರಚಿಸುವ ಬಗ್ಗೆ ಚರ್ಚಿಸಲು ಶುಕ್ರವಾರ ಸಭೆ ಸೇರಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಧರ್ಮಣ್ಣ, ಮಂಜಣ್ಣ, ಎಳೇಹೊಳೆ ಕುಮಾರ, ಬೆನಕೊಂಡಿ ರಾಜೇಶ್, ಭಾನುವಳ್ಳಿ ಸುರೇಶ್, ಹಿಟ್ಟಿನ ಗಿರಣಿ ಶಾಂತ್ರಾಜ್, ರಂಗನಾಥಾಚಾರ್, ಮಹೇಶ್, ಸುಬ್ಬಿರಾಜಪ್ಪ, ಎ.ಕೆ. ರಂಗನಾಥ್, ನವೀನ, ಲೊಕೇಶ್, ದೊರೆಸ್ವಾಮಿ, ಮಹಲಿಂಗಪ್ಪ, ಬೆಸ್ಕಾಂ, ಪುರಸಭೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gayatri Siddeshwar: ಅಡಕೆ ಮೌಲ್ಯವರ್ಧನೆಗೆ ಯೋಜನೆ: ಗಾಯಿತ್ರಿ
ಇಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಚಿಪ್ಪು ಹಿಡಿದು ಪ್ರತಿಭಟನೆ: ರವಿಕುಮಾರ್
MUST WATCH
ಹೊಸ ಸೇರ್ಪಡೆ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್