ಸ್ವತ್ಛತೆ ಜಾಗೃತಿಗೆ ಬೈಕ್ ರ್ಯಾಲಿ
Team Udayavani, Aug 26, 2018, 4:48 PM IST
ಹೊನ್ನಾಳಿ: ಸ್ವತ್ಛತೆ ವೈಯಕ್ತಿಕ ಆರೋಗ್ಯವಲ್ಲದೇ ಸಮುದಾಯದ ಆರೋಗ್ಯವನ್ನೂ ಕಾಪಾಡುತ್ತದೆ ಎಂದು ತಾ.ಪಂ ಇಒ ಕೆ.ಸಿ. ಮಲ್ಲಿಕಾರ್ಜುನ ಹೇಳಿದರು. ಸ್ವತ್ಛ ಸರ್ವೇಕ್ಷಣ ಗ್ರಾಮೀಣ-2018 ಅಡಿಯಲ್ಲಿ ರಾಜ್ಯ ಸರ್ಕಾರ, ಜಿ.ಪಂ ಮತ್ತು ತಾ.ಪಂ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವತ್ಛ ಅಭಿಯಾನ ಬೈಕ್ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ಬಳಕೆ ಮಾಡಬೇಕು. ಇದರಿಂದ ಕುಟುಂಬದ ಆರೋಗ್ಯ ವೃದ್ಧಿಸಿ ಸಮಾಜದ ಸ್ವಾಸ್ಥ್ಯಾ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ನೇಮಿಸಿರುವ ಖಾಸಗಿ ಸಂಸ್ಥೆಗಳು ಮತ್ತು ಪ್ರಾಯೋಜಕತ್ವ ಸಂಸ್ಥೆಗಳು ಸ್ವತ್ಛತೆ ಸರ್ವೇಕ್ಷಣೆಗೆ ಗ್ರಾಮಗಳಿಗೆ ಆಗಮಿಸಿ ಮುಖ್ಯವಾಗಿ ಕಸ ವಿಲೇವಾರಿ, ವೈಯಕ್ತಿಕ ಶೌಚಾಲಯ ಬಳಕೆ, ಶಾಲೆ-ಅಂಗನವಾಡಿ ಶೌಚಾಲಯ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವತ್ಛತೆ ಪರಿಶೀಲಿಸಲಿದ್ದಾರೆ. ಈ ಕುರಿತು ಧನಾತ್ಮಕವಾಗಿ ಚಿಂತಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಬೈಕ್ ರ್ಯಾಲಿ ಪ.ಪಂ ಸಾಮರ್ಥ್ಯಸೌಧ ದಿಂದ ಆರಂಭಗೊಂಡು ಸಂಗೊಳ್ಳಿ ರಾಯಣ್ಣ ವೃತ್ತ, ಕುರಿ ಸಂತೆ, ಹಳದಮ್ಮ ದೇವಸ್ಥಾನ, ಕ್ಯಾನರಾ ಬ್ಯಾಂಕ್ ರಸ್ತೆ ಮೂಲಕ ಪುನಃ ತಾ.ಪಂ ಕಚೇರಿಗೆ ಆಗಮಿಸಿತು. ಸಹಾಯಕ ಅಧಿಕಾರಿ ರಾಘವೇಂದ್ರ, ಪಿಡಿಒಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ