ಕೊಲ್ಕತ್ತಾ ಕಲಾವಿದರ ಕೈಚಳಕದಲ್ಲಿ ವಿನಾಯಕ


Team Udayavani, Aug 30, 2018, 12:55 PM IST

dvg-1.jpg

ದಾವಣಗೆರೆ: ವಿಘ್ನ ನಿವಾರಕ ವಿನಾಯಕನ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ದೇವನಗರಿಯಲ್ಲಿ ವೈವಿಧ್ಯಮಯ ಗಣೇಶಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಪಿ.ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ
ಆವರಣ, ಹೊಳೆಹೊನ್ನೂರು ತೋಟದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಸೇರಿದಂತೆ ನಾಲ್ಕಾರು ಕಡೆ ಕೊಲ್ಕತ್ತಾ ಮೂಲದ ಕಲಾವಿದರು 5ರಿಂದ 12 ಅಡಿಗಿಂತ ದೊಡ್ಡ ದೊಡ್ಡ ಪರಿಸರ ಸ್ನೇಹಿ ಗಣೇಶಮೂರ್ತಿಗಳ ತಯಾರಿಕೆಯಲ್ಲಿ
ನಿರತರಾಗಿದ್ದಾರೆ.

ಅಂಬಾರಿಯಲ್ಲಿ ಆಸೀನ, ಶ್ರೀಕೃಷ್ಣ ಅರ್ಜುನನ ಸಾರಥಿಯಾಗಿ, ಛತ್ರಪತಿ ಶಿವಾಜಿ, ಆಕಳು ಮೇಲೆ ಈಶ್ವರ ಗಣಪ, ಡಮರು, ಶಂಕು, ತಬಲ, ಕಾಳಿಂಗ ಸರ್ಪದ ಮೇಲೆ ನೃತ್ಯ ಮಾಡುವ ಗಣಪ….ಹೀಗೆ ವಿವಿಧ ಅವತಾರದ ಗಣೇಶಮೂರ್ತಿಗಳು ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕೊಲ್ಕತ್ತಾ ಮೂಲದ ರಂಜಿತ್‌ಪಾಲ್‌ ಅವರ ನೇತೃತ್ವದ ತಂಡದಿಂದ ರೂಪುಗೊಳ್ಳುತ್ತಿವೆ. ಮೂರ್ತಿ ತಯಾರಿ…. ಭತ್ತದ ಹುಲ್ಲು, ಬಿದಿರು, ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿಕೊಂಡು 8 ಜನರ ತಂಡ ಮೂರ್‍ನಾಲ್ಕು ತಿಂಗಳಿನಿಂದಲೇ 5ರಿಂದ 14 ಅಡಿಗಳವರೆಗಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದೆ.

5ರಿಂದ 8 ಅಡಿ ಎತ್ತರದ ಮೂರ್ತಿಗೆ 8 ರಿಂದ 10 ಸಾವಿರ ರೂ., 10ರಿಂದ 14 ಅಡಿ ಎತ್ತರದ ಗಣಪತಿಗಳಿಗೆ 10ರಿಂದ 30 ಸಾವಿರ ರೂ. ವರೆಗೂ ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ಕೇಳುವ ಮಾದರಿಯ ಸುಂದರ ಗಣಪತಿ ಮೂರ್ತಿ ತಯಾರು ಮಾಡಿಕೊಡುತ್ತೇವೆ. ಈಗ ಪ್ಲಾಸ್ಟ್‌ರ್‌ ಆಫ್‌ ಪ್ಯಾರಿಸ್‌ ಗಣಪತಿಗಳ ನಿರ್ಮಾಣ ಸ್ವಲ್ಪ ಕಡಿಮೆಯಾಗಿರುವ
ಬೆನ್ನಲ್ಲೇ ಮಣ್ಣಿನ ಗಣೇಶ ಮೂರ್ತಿಗಳಿಗೆ ಡಿಮ್ಯಾಂಡ್‌ ಇದೆ. ಹಾಗಾಗಿ ಮಣ್ಣಿನ ಗಣೇಶ ಮೂರ್ತಿ ನಿರ್ಮಾಣದಲ್ಲಿ ತೊಡಗಿರುವ ಬಹುತೇಕ ಕಲಾವಿದರು ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕರು.

ಕೆಲವರಿಗೆ ಮೂರ್ತಿ ತಯಾರಿಯೇ ಕಾಯಕ… ನಗರದ ಹೊಂಡದ ಸರ್ಕಲ್‌ ಬಳಿಯ ಚಿತ್ರಗಾರಗಲ್ಲಿ, ಜಾಲಿನಗರ, ಅಶೋಕನಗರ, ವಿನೋಬನಗರ ಸೇರಿದಂತೆ ಹಲವೆಡೆ ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ 35ಕ್ಕಿಂತ ಹೆಚ್ಚು ಕುಟುಂಬಗಳು ಹಬ್ಬಕ್ಕೂ ಆರು ತಿಂಗಳ ಮುಂಚಿತವಾಗಿ ಮೂರ್ತಿಗಳ ತಯಾರಿಸುತ್ತಾ ತಮ್ಮ ಬದುಕು ರೂಪಿಸಿಕೊಳ್ಳುವ ಕಾಯಕದಲ್ಲಿ ತೊಡಗಿವೆ.

ಜೇಡಿಮಣ್ಣು ದುಬಾರಿ…. ಗಣೇಶ ಮೂರ್ತಿಗಳ ತಯಾರಿಕೆಗೆ ಬೇಕಾದ ಜೇಡಿಮಣ್ಣು ಎಲ್ಲೆಡೆ ಸಿಗದು. ನದಿ ಪಾತ್ರದ ತಟಗಳಲ್ಲಿ ದೊರೆಯುವ ಜೇಡಿಮಣ್ಣಿನ ಟ್ರ್ಯಾಕ್ಟರ್‌ ಲೋಡ್‌ ಒಂದಕ್ಕೆ 7 ಸಾವಿರ ರೂ. ನೀಡಬೇಕಿದೆ. ಈ ಮೊತ್ತ ಸಣ್ಣ ಸಣ್ಣ ಮೂರ್ತಿ ತಯಾರಕರಿಗೆ ಹೊರೆ ಎನಿಸುತ್ತದೆ. ಆದರೆ ದೊಡ್ಡ ಮೂರ್ತಿಗಳ ತಯಾರಕರ ಮೇಲೆ ಈ ಬೆಲೆ ಹೆಚ್ಚಳದ ಪರಿಣಾಮ ಕಡಿಮೆ ಎನ್ನುತ್ತಾರೆ ಚಿತ್ರಗಾರ ಗಲ್ಲಿಯ ಗಣೇಶ ಮೂರ್ತಿ ತಯಾರಕ ವಿಜಯ್‌.

ಪಿಒಪಿ ಹಾವಳಿ ನಿಂತಿಲ್ಲ… ಮಣ್ಣು , ಹತ್ತಿ, ನಾರು, ಬಣ್ಣ ಸೇರಿದಂತೆ ಇತರೆ ಪರಿಕರಗಳ ಬೆಲೆ ದುಬಾರಿ ಆಗಿವೆ. ಆದ್ದರಿಂದ ಸಣ್ಣ ಸಣ್ಣ ಮೂರ್ತಿಗಳಿಗೆ 100ರಿಂದ 300 ರೂ. ವರೆಗೆ ಹಾಗೂ ನಾಲ್ಕೈದು ಅಡಿಗಿಂತ ದೊಡ್ಡ ಮೂರ್ತಿಗಳನ್ನು 5ರಿಂದ 8 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ ಅವರು.  ಇದೀಗ ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿಗಳು ಹೆಚ್ಚು ಕಂಡು ಬರದೇ ಇದ್ದರೂ ಹಬ್ಬ ಎರಡು ದಿನ ಇರುವಾಗ ಮಹಾರಾಷ್ಟ್ರ, ಕೊಲ್ಲಾಪುರ ಮುಂತಾದ ಕಡೆಗಳಿಂದ ಮಾರುಕಟ್ಟೆಗೆ ಪಿಒಪಿ ಗಣೇಶ ಮೂರ್ತಿಗಳು ಲಗ್ಗೆ ಇಡುತ್ತವೆ. ಹೀಗಾಗಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ಮೂರ್ತಿ ತಯಾರಕರು.

ಪರಿಸರದ ಬಗ್ಗೆ ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಬಹುತೇಕ ಜನರು ಮಣ್ಣಿನ ಗಣೇಶ ಮೂರ್ತಿ ಖರೀದಿಸಲು ಮುಂಗಡವಾಗಿ ಹೆಸರು ಬರೆಸುತ್ತಾರೆ. ಇನ್ನೂ ಕೆಲವರು ಯಾವುದೇ ರೀತಿ ಬಣ್ಣ ಲೇಪನ ಮಾಡದೇ ಇರುವ ಮೂರ್ತಿಗಳನ್ನು ಖರೀದಿಸಲು ಉತ್ಸಾಹ ತೋರಿಸುತ್ತಿದ್ದಾರೆ ಎನ್ನುತ್ತಾರೆ ಮೂರ್ತಿ ತಯಾರಕ ಸಂತೋಷ್‌.

ಸಾರ್ವಜನಿಕರ ಸಹಕಾರ ಬೇಕು ಪಿಒಪಿ ಮೂರ್ತಿಗಳ ಮಾರಾಟದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿ ತಯಾರಕರು ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತರಬೇಕು. ಆಗ ಸಂಸ್ಥೆಗಳು ಪರಿಶೀಲನೆ ನಡೆಸಿ, ವಶಕ್ಕೆ ಪಡೆಯಲಿವೆ. ಇನ್ನು ಸಾರ್ವಜನಿಕರು ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಬೇಕು. ಇದರಿಂದ ಹಬ್ಬದ ಆಚರಣೆ ಕಳೆಗಟ್ಟುವ ಜೊತೆಗೆ ಪರಿಸರ ಮಾಲಿನ್ಯ ತಡೆಗೆ ಕೈಜೋಡಿಸಿದಂತಾಗಲಿದೆ.
 ಕೆ.ಬಿ. ಕೊಟ್ರೇಶ್‌, ಜಿಲ್ಲಾ ಪರಿಸರ ಅಧಿಕಾರಿ

ಬಿಗಿ ಕ್ರಮ ಬೇಕಿದೆ
ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ಮಣ್ಣಿನ ಗಣಪತಿಗಳ ತಯಾರಕರ ಸಂಘ ಹಾಗೂ ಪರಿಸರ ವೇದಿಕೆ ಸಹಯೋಗದಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣಪತಿಗಳ ಮಾರಾಟ ಮಳಿಗೆ ತೆರೆಯುವ ಚಿಂತ ನೆ ಇದೆ. ವಿವಿಧ ಜಿಲ್ಲೆ, ತಾಲೂಕುಗಳಿಂದ ಮಾರಾಟಗಾರರು ಬರಲಿದ್ದಾರೆ. ಅಲ್ಲದೇ ಬ್ಯಾನ್‌ ಆದರೂ ಸಹ ನೆರೆ ರಾಜ್ಯಗಳಿಂದ ಬರುವ ಪಿಒಪಿ ಗಣೇಶಮೂರ್ತಿ ನಿಯಂತ್ರಿಸಲು ಹಬ್ಬದ ಒಂದು ವಾರಕ್ಕೂ ಮುನ್ನ ನಗರ ಪ್ರವೇಶಿಸುವ ಮಾರ್ಗ ಗಳಲ್ಲಿ ಸೂಕ್ತ ಪೊಲೀಸ್‌
ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. 
 ಗಿರೀಶ್‌ ದೇವರಮನೆ, ಪರಿಸರ ಸಂರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ

„ವಿಜಯ ಸಿ. ಕೆಂಗಲಹಳ್ಳಿ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.