ಸಮಸ್ತ ಮಾನವ ಕುಲದ ವಿನಾಶ ಪ್ರಾರಂಭ: ಡಾ| ಚೆನ್ನಿ ಆತಂಕ


Team Udayavani, Sep 17, 2018, 3:49 PM IST

dvg-1.jpg

ದಾವಣಗೆರೆ: ವಸುದೈವ ಕುಟುಂಬಕಂ… ಎಂಬ ಪರಿಕಲ್ಪನೆ ದೂರವಾಗುತ್ತಾ ಮನುಷ್ಯನೇ ವಿಶ್ವದ ಕೇಂದ್ರ. ಇನ್ನುಳಿದ ಎಲ್ಲವೂ ಅವನ ಸೇವೆಗಾಗಿ ಇರುವುದು ಎಂಬ ಭಾವನೆ ಬೇರೂರುತ್ತಿರುವ ಮೂಲಕ ಮನುಷ್ಯ ಕುಲದ ವಿನಾಶ ಆರಂಭವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ| ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು.

ಭಾನುವಾರ ಗ್ರಾಮ ಸೇವಾ ಸಂಘಟನೆ ಹಾಗೂ ಕರುಣಾ ಜೀವಾ ಕಲ್ಯಾಣ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ರೋಟರಿ
ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಪ್ರತಿಯೊಂದು ಜೀವಿಗಳ ನಡುವೆ ಒಂದಲ್ಲ ಒಂದು ರೀತಿ ಸಂಬಂಧವಿದೆ ಎಂಬುದನ್ನು ವಿಜ್ಞಾನ ಸಾಬೀತು ಪಡಿಸಿದೆ. ಸಕಲ ಜೀವಿ ರಾಶಿಯೂ ಒಂದು ಕುಟುಂಬದ ಭಾಗವಾಗಿದೆ. ಹಾಗಾಗಿಯೇ ವಸುದೈವ ಕುಟುಂಬಕಂ… ಎಂಬ ಪರಿಕಲ್ಪನೆ ಸಂವಿಧಾನದ ಆಶಯವಾಗಬೇಕು ಎಂಬ ನಿಲುವು ಕೈಗೊಳ್ಳಲಾಗಿದೆ ಎಂದರು. 

ದೇಶದ ಅರ್ಥ ವ್ಯವಸ್ಥೆ, ಜನರ ದೇಶಿಯ ಕುಲ ಕಸುಬನ್ನು ಬ್ರಿಟಿಷ್‌ ವಸಾಹತುಶಾಹಿ ವ್ಯವಸ್ಥೆ ಕಸಿಯುವ ಪ್ರಯತ್ನ ಮಾಡಿದಾಗ ಗಾಂಧೀಜಿ ನಮಗಿಂದು ರಾಷ್ಟ್ರದ ಪರಿಕಲ್ಪನೆಗಿಂತ ಮುಖ್ಯವಾಗಿ ಗ್ರಾಮೀಣದ ಪರಿಕಲ್ಪನೆ ಬೇಕೆಂಬ ಸದಾಶಯ ಹೊಂದಿದ್ದರು ಎಂದು ತಿಳಿಸಿದರು.

ವಸುದೈವ ಕುಟುಂಬಕಂ..
ಪರಿಕಲ್ಪನೆ ಬಂದಲ್ಲಿ ವಿಕೃತವಾದ ರಾಷ್ಟ್ರವಾದ ಕೊನೆಯಾಗಲಿದೆ ಎಂದ ಅವರು ಇಂದು
ಇಡೀ ವಿಶ್ವದಲ್ಲಿ ಬಲಪಂಥಿಯ, ಮನುಷ್ಯ ವಿರೋಧಿ ಚಿಂತನೆ ನಡೆಯುತ್ತಿದೆ. ಅದಕ್ಕೆ ರಾಜಕೀಯ ಪ್ರೋತ್ಸಾಹ ಸಹ ದೊರಕುತ್ತಿದೆ ಎಂದರು. ದೇಶದ ಇತಿಹಾಸದ ಪರಂಪರೆಯಲ್ಲಿ ಯಾವ ಧರ್ಮದಲ್ಲೂ ಉಗ್ರ ಸ್ವರೂಪವಿಲ್ಲ. ಅವೆಲ್ಲವೂ ಸ್ವಾರ್ಥದ ಅಧಿಕಾರಕ್ಕಾಗಿ ನಡೆದಿರುವ ಹುನ್ನಾರವಷ್ಟೇ. ಬಸವಧರ್ಮ, ವಚನ ಸೇರಿದಂತೆ ಎಲ್ಲಾ ಸಾಹಿತ್ಯವನ್ನು ಯಾವತ್ತಿಗೂ ಒಂದು ಜಾತಿಗೆ ಸೀಮಿತ ಮಾಡಬಾರದು. ನಮ್ಮದು, ತಮ್ಮದು ಎಂಬ ಭಾವನೆಯ ಹಿನ್ನೆಲೆಯೊಳಗೆ ಸ್ವಾಗತಿಸಬೇಕು. ಇಂದಿನ ದಿನಗಳಲ್ಲಿ ಸಾಹಿತಿಗಳು ಮುಖ್ಯವಾಗಿ ಸತ್ಯಾಸತ್ಯತೆ ಉಳಿಸುವ ಪ್ರಯತ್ನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಶಿವನಕೆರೆ ಬಸವಲಿಂಗಪ್ಪ, ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ, ಸಾಹಿತಿ ಭಿಕ್ಷಾವರ್ತಿಮಠ, ಧಾರವಾಡದ ಬಸವಪ್ರಭು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾದಮಣಿ ನಾಲ್ಕೂರು ತತ್ವಪದ ಹಾಗೂ ಐರಣಿ ಚಂದ್ರು ಕ್ರಾಂತಿಗೀತೆ ಹಾಡಿದರು. ಅಭಿಲಾಷ್‌ ಸ್ವಾಗತಿಸಿದರು. ನೀಲಗುಂದ ಚಂದ್ರಪ್ಪ ನಿರೂಪಿಸಿದರು.

ಪುನಶ್ಚೇತನಗೊಳ್ಳಬೇಕಿದೆ…
ಎಡಪಂಥೀಯ ಸಂಘಟನೆಗಳು ಪುನಶ್ಚೇತನಗೊಳ್ಳಬೇಕಿದೆ. ಹಳ್ಳಿಗಳಲ್ಲಿ ಖಾಲಿ ಉಳಿದಿರುವ ಶೇ. 80ರಷ್ಟು ಯುವಕರ
ಮನ ಮುಟ್ಟಲು ಹಳ್ಳಿಗಳತ್ತ ಮುಖ ಮಾಡಬೇಕಿದೆ. ಯುವಕರನ್ನು ರಚನಾತ್ಮಕವಾಗಿ ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ.
 ಶಂಕರ ಹಲಗತ್ತಿ, ಮಕ್ಕಳ ಸಾಹಿತಿ

ಧೈರ್ಯದ ಹತ್ಯೆ….
ಧರ್ಮ ಮತ್ತು ಆಧ್ಯಾತ್ಮವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪರಸ್ಪರ ಬಾಂಧವ್ಯ ಬೆಳೆಯಲು ಸಾಧ್ಯ. ಪರಿಸರ ಸಂರಕ್ಷಣೆ, ಲಿಂಗ ಸಮಾನತೆ, ಧರ್ಮ ಮತ್ತು ಆಧ್ಯಾತ್ಮವನ್ನು ಬೆಸೆಯುವ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಿದೆ. ಕನ್ನಡದ ಸಾಹಿತಿಗಳು ಪರಿಸರದಲ್ಲಿ ಉಂಟಾಗುತ್ತಿರುವ ನೋವನ್ನು ಸಾಹಿತ್ಯದ ಮೂಲಕ ಹೊರಹಾಕಲು ಮುಂದಾಗುತ್ತಿಲ್ಲ. ಜೀವನ ಶೈಲಿ ಅಳವಡಿಸಿಕೊಳ್ಳಲು ಕೂಡ ಧೈರ್ಯವನ್ನು ಕೊಲ್ಲುತ್ತಿರುವುದು ನಿಜಕ್ಕೂ ದುರಂತ.
 ಡಾ| ಸಂಜೀವ ರೆಡ್ಡಿ

ಧರ್ಮ-ಸಾಹಿತ್ಯದ ಅಂತರ್‌ ಸಂಬಂಧ ಅಗತ್ಯ
 ದಾವಣಗೆರೆ: ಧರ್ಮಕ್ಕೂ, ಸಾಹಿತ್ಯಕ್ಕೂ ಇರುವ ಅಂತರ್‌ ಸಂಬಂಧವನ್ನು ಇಂದು ಕಾಪಾಡಿಕೊಳ್ಳಬೇಕಿದೆ ಎಂದು
ರಂಗಕರ್ಮಿ ಪ್ರಸನ್ನ ತಿಳಿಸಿದರು. ಭಾನುವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ
ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಾಭಾರತ, ವಚನ ಸಾಹಿತ್ಯ ಇವೆಲ್ಲ ಧಾರ್ಮಿಕ ಕೃತಿ ಹೌದು. ಆದರೆ ಸಾಹಿತ್ಯ, ಧರ್ಮ ಪ್ರತ್ಯೇಕ ಎಂಬ ಭಾವನೆ ಈಚೆಗೆ ವ್ಯಕ್ತವಾಗುತ್ತಿದ್ದು, ದೇಶದ ಪರಂಪರೆಯನ್ನು ಸಾಹಿತ್ಯದ ಜೊತೆಗೆ ಮುನ್ನಡೆಸಬೇಕಿದೆ ಎಂದರು.

ಯಾವುದೇ ಸಾಹಿತ್ಯಕ್ಕಾದರೂ ಪ್ರತಿಕ್ರಿಯೆ, ವಿರೋಧ ವ್ಯಕ್ತವಾಗು ವುದು ಸಹಜ. ಎಲ್ಲದಕ್ಕೂ ತಲೆ ಯಾಡಿಸುವಂತದ್ದು ಕೃತಿ ಆಗಲ್ಲ. ಸಾಹಿತ್ಯ ಎನ್ನುವಂತದ್ದು ವಿಮರ್ಶೆಗೆ ಒಳಪಡಿಸುವಂತಹ ಪ್ರಕ್ರಿಯೆ. ಅಲ್ಲಿ ರಾಜಕಾರಣ
ಮಾಡದೇ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಹೇಳಿದರು. ಧಾರ್ಮಿಕ ಉಗ್ರವಾದದಲ್ಲಿ ಧಾರ್ಮಿಕ, ಆರ್ಥಿಕ ಅಸಹಿಷ್ಣುತೆ ಎಂಬ ಎರಡು ಮುಖಗಳಿದ್ದು, ದೇಶದಲ್ಲಿ ಆರ್ಥಿಕ ಅಸಹಿಷ್ಣುತೆ ಹೆಚ್ಚಾದ ಮೇಲೆಯೇ ಅಸಹಿಷ್ಣುತೆ ಉಂಟಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮೋದಿಯವರು ಈ ನಾಡಿನ ಶ್ರಮಜೀವಿಗಳ ಕೈ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸುವುದಿಲ್ಲ ಎಂದು ಸಹಮತ ವ್ಯಕ್ತಪಡಿಸಿದ್ದರು. ಆದರೆ ಆದ್ಯಾವುದನ್ನೂ ವಿತ್ತ ಸಚಿವರು ಒಳಗೊಂಡಂತೆ ಯಾರೂ ಮಾಡಲಿಲ್ಲ. 29 ಉತ್ಪನ್ನಗಳಿಗೆ ತೆರಿಗೆ ಶೂನ್ಯ ಮಾಡುವ ಮಾತು ಹುಸಿಯಾಗಿಯೇ ಉಳಿದಿದೆ. ಆದರೆ, ಬಂಡವಾಳಶಾಹಿಗಳಿಗೆ ಹೊಸ ಕಂಪನಿಗಳನ್ನು ತೆರೆಯಲು ಅವಕಾಶ ಮಾಡಿಕೊಡುತ್ತಾ ದಲಿತರ, ರೈತರ, ಕಾರ್ಮಿಕರ ವಿರೋಧ ನೀತಿಗಳನ್ನು ಜಾರಿಗೆ ತರುತ್ತಿರುವುದು ಸರಿಯಲ್ಲ ಎಂದರು.

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Davanagere: ನಾಮಪತ್ರ ಸಲ್ಲಿಸಿದ ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಹೊರ ತರುವೆ: ಗಾಯತ್ರಿ ಸಿದ್ದೇಶ್ವರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.