ಭರ್ಜರಿ ಕುರಿ ವ್ಯಾಪಾರ
Team Udayavani, Jan 15, 2019, 8:14 AM IST
ಹೊನ್ನಾಳಿ: ಪಟ್ಟಣದ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಸಾಲು ಸಾಲಾಗಿ ಗ್ರಾಮ ದೇವತೆಗಳ ಹಬ್ಬ ಮತ್ತು ಜಾತ್ರೆಗಳಿರುವುದರಿಂದ ಪಟ್ಟಣದಲ್ಲಿ ರವಿವಾರ ವಿಶೇಷ ಕುರಿ ಸಂತೆ ನಡೆಯಿತು. ಸಾಮಾನ್ಯ ದಿನಗಳಲ್ಲಿ ಕೇವಲ ಪ್ರತಿ ಬುಧವಾರ ಮಾತ್ರ ಕುರಿ ಸಂತೆ ಸೇರುತ್ತದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ನಡೆವ ಸಂತೆಯಲ್ಲಿ ಕುರಿ ಸಾಕಾಣಿಕೆ ಮಾಡುವ ಸುತ್ತಮುತ್ತಲ ಗ್ರಾಮಗಳ ರೈತರು ಸಾವಿರಾರು ಕುರಿಗಳೊಂದಿಗೆ ಆಗಮಿಸಿ ಭರ್ಜರಿ ವಹಿವಾಟು ನಡೆಸಿದರು. ಇದೇ ತಿಂಗಳ 21 ಮತ್ತು 22ರಂದು ಪಟ್ಟಣದ ಗ್ರಾಮ ದೇವತೆ ದುರ್ಗಾಂಬಿಕೆ ಜಾತ್ರೆ ನಡೆಯಲಿರುವುದರಿಂದ ಕುರಿ ವ್ಯಾಪಾರಕ್ಕೆ ಮತ್ತಷ್ಟು ಮೆರಗು ಬಂದಿತ್ತು. ಗಾತ್ರ ಮತ್ತು ವಯಸ್ಸಿಗನುಗುಣವಾಗಿ ಕುರಿಗಳು 6 ಸಾವಿರದಿಮದ 20 ಸಾವಿರ ರೂ. ವರೆಗೆ ಮಾರಾಟವಾದವು.
ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೇರಿ ಸುರೇಶ್ ಈ ಕುರಿತು ಮಾತನಾಡಿ, ಹೊನ್ನಾಳಿ ತಾಲೂಕು ಕೇಂದ್ರಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಈ ಭಾಗದಲ್ಲಿ ಕುರಿ, ಮೇಕೆ, ಅಡುಗಳ ಸಾಕಾಣಿಕೆ ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ದೂರದ ಶಿವಮೊಗ್ಗ, ಭದ್ರಾವತಿ, ಸಾಗರ, ಹಿರೇಕೆರೂರು, ಹರಿಹರ, ದಾವಣಗೆರೆ ಆಯನೂರು, ತಿಮ್ಮಿನಕಟ್ಟ, ಸೇರಿದಂತೆ ಹತ್ತಾರು ಪ್ರದೇಶಗಳಿಂದ ಕುರಿ ಖರೀದಿಗೆ ಜನ ಇಲ್ಲಿಗೆ ಅಗಮಿಸುತ್ತಾರೆ. ಇಲ್ಲಿನ ಕುರಿ ಮಾರುಕಟ್ಟೆಗೆ ವ್ಯವಸ್ಥಿತ ರೂಪ ನೀಡಬೇಕಾದ ಅಗತ್ಯವಿದೆ. ಕುರಿಗಳ ಬೇಡಿಕೆ ಸರಿದೂಗಿಸಲು ಬುಧವಾರದೊಂದಿಗೆ ಪ್ರತಿ ಭಾನುವಾರ ಕೂಡ ಕುರಿ ಸಂತೆ ನಡೆಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ