10ನೇ ವಾರ್ಡ್‌ನಲ್ಲಿ ಒಳಚರಂಡಿಯದ್ದೇ ಸಮಸ್ಯೆ


Team Udayavani, Jan 24, 2019, 5:40 AM IST

dvg-4.jpg

ದಾವಣಗೆರೆ: ಮನೆಯಿಂದ ಹೊರಗಡೆ ಬಂದರೆ ಒಳ ಚರಂಡಿ ನೀರಿನ ನರಕ ದರ್ಶನ, ಒಂದು ಕ್ಷಣಕ್ಕೂ ಸಹಿಸಲಾಗದ ದುರ್ವಾಸನೆ, ಮಳೆ ಬಂದರಂತೂ ಮನೆಯೊಳಗೆ ನುಗ್ಗಿ ಬರುವ ಚರಂಡಿ ನೀರು, ಸದಾ ವಾಕರಿಕೆಯ ವಾತಾವರಣ, ಚರಂಡಿಗೆ ಅಡ್ಡ ಹಾಕಲಾಗಿರುವ ಪೈಪ್‌ಗ್ಳ ಸಂಪರ್ಕ ಮಾರ್ಗ. ಆದರೂ ಜೀವನ ನಡೆಸಲೇಬೇಕಾದ ಅನಿವಾರ್ಯತೆ…!

ಇದು ಜಿಲ್ಲಾ ಕೇಂದ್ರದಿಂದ ಬಹು ದೂರ ಇರುವ ಯಾವುದೋ ಕುಗ್ರಾಮದ ಮನೆಗಳ ಕಥೆಯಲ್ಲ. ಸ್ಮಾರ್ಟ್‌ಸಿಟಿಯಾಗುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ 10ನೇ ವಾರ್ಡ್‌ನ ಕೆಲ ಮನೆಗಳವರ ಸ್ಥಿತಿ.

ಮಹಾನಗರ ಪಾಲಿಕೆಯ 10ನೇ ವಾರ್ಡ್‌ನ ಅಂಚಿನಲ್ಲಿರುವ ರಾಜಕಾಲುವೆ ಪಕ್ಕದಲ್ಲಿರುವ ಮನೆಗಳಲ್ಲಿ ಇರುವವರ ಸ್ಥಿತಿ ನಿಜಕ್ಕೂ ಆ ದೇವರಿಗೆ ಪ್ರೀತಿ. ಅಂತಹ ದಯನೀಯ ಸ್ಥಿತಿಯ ನಡುವೆ ಒಂದಲ್ಲ ಎರಡಲ್ಲ, 40-50 ವರ್ಷದಿಂದ ಜೀವನ ನಡೆಸುತ್ತಿದ್ದಾರೆ.

ಆದರೆ, ಈ ಕ್ಷಣಕ್ಕೂ ದೊರೆಯಬೇಕಾದ ಕನಿಷ್ಟ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಚುನಾವಣಾ ಪ್ರಚಾರಕ್ಕೆಂದು ಬಂದವರು ಕೈ ಮಗಿದು, ಮತ ಕೇಳಿ, ಎಲ್ಲವನ್ನೂ ಮಾಡಿಸಿಕೊಡುತ್ತೇವೆ ಎಂದು ಹೇಳಿರುವ ಮಾತುಗಳೇ ನಿವಾಸಿಗಳಿಗೆ ಸಿಕ್ಕಿರುವ ಬಹು ದೊಡ್ಡ ಸೌಲಭ್ಯ!.

ಸೂರಿಲ್ಲದವರಿಗೆ ಸೂರು… ಎಂದು ಪುಂಖಾನುಪುಂಖವಾಗಿ ಹೇಳುವಂತ ಜನಪ್ರತಿನಿಧಿಗಳು ಒಮ್ಮೆಯಾದರೂ ದಾವಣಗೆರೆ ಮಹಾನಗರ ಪಾಲಿಕೆ 10ನೇ ವಾರ್ಡ್‌ನ ನಿವಾಸಿಯಾದ ವಯೋವೃದ್ಧೆ ಲಕ್ಷ್ಮಿಬಾಯಿ, ಬಸಮ್ಮ, ಅಮೀನಾಬೀ, ಜರೀನಾ ಬೀ… ಕೆಲವಾರು ಕುಟುಂಬಗಳ ಸ್ಥಿತಿ ನೋಡಿದರೆ ನಾವಾಡುವ ಮಾತುಗಳಿಗೆ, ಇರುವ ಸ್ಥಿತಿಗೆ ಎಷ್ಟು ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ವೇದ್ಯವಾಗುತ್ತದೆ. ಅಷ್ಟೊಂದು ಕೆಟ್ಟ ಸ್ಥಿತಿಯ ನಡುವೆ ಜೀವನ ನಡೆಸುತ್ತಿದ್ದಾರೆ.

ಲಕ್ಷ್ಮೀಬಾಯಿಯ ಮನೆಯ ಗೋಡೆ ಚರಂಡಿ ನೀರಿನ ಸೆಳೆತಕ್ಕೆ ಸಿಕ್ಕು ಹಲವಾರು ಬಾರಿ ಕೊಚ್ಚಿ ಹೋಗಿದೆ. ಅವರಿವರ ಸಹಾಯದಿಂದ ಈಚೆಗೆ ಸಣ್ಣದ್ದಾಗಿ ಗೋಡೆ ಕಟ್ಟಿಕೊಂಡಿರುವ ಅವರು ಪ್ರತಿ ಕ್ಷಣವನ್ನೂ ಆತಂಕದಿಂದಲೇ ಕಳೆಯುತ್ತಿದ್ದಾರೆ. ಏಕೆಂದರೆ ಯಾವುದೇ ಸಂದರ್ಭದಲ್ಲಾದರೂ ಚರಂಡಿ ನೀರು ನುಗ್ಗಿ ಬರೀ ಗೋಡೆಯನ್ನೇ ಮಾತ್ರವಲ್ಲ ಇಡೀ ಮನೆಯನ್ನ ಆಪೋಶನ ತೆಗೆದುಕೊಂಡು ಹೊತ್ತೂಯ್ಯಬಹುದಾದ ಸ್ಥಿತಿ ಇದೆ. ಇದು ಲಕ್ಷ್ಮೀಬಾಯಿಯ ಮನೆಯ ಕಥೆಯೊಂದೇ ಅಲ್ಲ. ಬಸಮ್ಮ, ಅಮೀನಾಬೀ, ಜರೀನಾ ಬೀ ಮುಂತಾದವರ ಮನೆಗಳ ಕಥೆಯೂ ಹೌದು.

ಮಗ ಸತ್ತೇ ಹೋದ!: ಇಲ್ಲಿನ ಮನೆಗಳಿಗೆ ನಿರಾತಂಕವಾಗಿ ಹೋಗಿ ಬರಲು ಅಸಲಿಗೆ ರಸ್ತೆಯೇ ಇಲ್ಲ. ರಾಜಕಾಲುವೆಗೆ ಅಡ್ಡಲಾಗಿ ಹಾಕಲಾಗಿರುವ ಪೈಪ್‌ಗ್ಳೇ ಸಂಪರ್ಕ ದಾರಿ. ಕೆಲವು ದಿನಗಳ ಹಿಂದೆ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ ಲಕ್ಷ್ಮಿಬಾಯಿಯ ಮಗ ಶಿವು… ಎಂಬಾತ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದರೆ ಇಲ್ಲಿ ಎಂತಹ ವಾತಾವರಣ ಇರಬಹುದು ಎಂದು ಲೆಕ್ಕ ಹಾಕಬಹುದು.

ಕೈಗೆ ಬಂದಿದ್ದ ಮಗ ನೀರು ತರುವಾಗ ಪೈಪ್‌ ಮೇಲೆ ಕಾಲಿಟ್ಟಿದ್ದಾನೆ. ಇದ್ದಕ್ಕಿದ್ದಂಗೆ ಜಾರಿದ್ದಾನೆ. ಪಕ್ಕೆ, ಮುಖ, ತಲೆ… ಬೇರೆ ಕಡೆ ಹೊಡೆತ ಬಿದ್ದು ಸತ್ತೇ ಹೋದ. ಅವನ ಹೆಣ ಹಾಕಿಕೊಳ್ಳಲಿಕ್ಕೂ ಮನೆ ಮುಂದೆ ಜಾಗ ಇರಲಿಲ್ಲ, ಈಗಲೂ ಇಲ್ಲ. ನಾನೊಬ್ಬಳೇ ರಾತ್ರಿಯಿಡೀ ಹೆಣ ಹಾಕ್ಕೊಂಡು ಹಂಗೇ ಕುಂತಿದೀನಿ. ನನ್‌ ಗಂಡ ಇದೇ ಮನ್ಯಾಗೆ ಸತ್ತು ಹೋದ್ರು. ಈಗ ಮಗನೂ ಸತ್ತು ಹೋದ. ಇಷ್ಟಾದರೂ ಯಾರೂ ಏನು ಸಹಾಯ ಮಾಡಲಿಲ್ಲ. ನಮ್ಮಂತ ಬಡವರು ಬದುಕೋದೇ ತಪ್ಪಾ ಎಂದು ಪ್ರಶ್ನೆ ಕೇಳುವ ಲಕ್ಷ್ಮೀಬಾಯಿಗೆ ಸಂಬಂಧಿತರು ಉತ್ತರ ಕೊಡಬೇಕು.

ಅಲ್ಲಿ ಇಲ್ಲಿ ಹೋಟೆಲ್‌ನಾಗೆ ಕಸ-ಮುಸುರಿ ಕೆಲಸ ಮಾಡ್ಕೊಂಡು, ಇರೋ ಒಬ್ಬ ಮಗನ ಮಖ ನೋಡ್ಕೊಂಡು ಜೀವ್ನ ನಡೆಸಬೇಕಾಗಿದೆ. ಅದನ್ನು, ಇದನ್ನ ಮಾಡುತ್ತೇವೆ ಅಂತಾ ಹೇಳ್ತಾರೆ. ನಮ್ಮಂತ ಬಡವರಿಗೆ ಏನಾದರೂ ಅನುಕೂಲ ಮಾಡಿಕೊಟ್ರೆ ಹೆಂಗೋ ಜೀವ್ನ ಮಾಡ್ಕೋತೀವಿ… ಎನ್ನುತ್ತಾರೆ ಲಕ್ಷ್ಮೀಬಾಯಿ.

ಮನೆಯಿಂದ ಹೊರಗೆ ಬಂದರೆ ಸಾಕು ಯುಜಿಡಿ ನೀರು ಬರೋದೇ ಕಾಣುತ್ತೆ. ಗಬ್ಬು ವಾಸನೆ ಬೇರೆ. ಇದರಲ್ಲೇ ಜೀವನ ಮಾಡಬೇಕಾಗೈತೆ. ಬೇರೆ ಕಡೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿ ಹೋದವರು, ಅವರ ಮಾತುಗಳಿಗೆ ಲೆಕ್ಕವೇ ಇಲ್ಲ. ಆದರೆ, ಈವರೆಗೆ ಏನೂ ಆಗೇ ಇಲ್ಲ. ಸಾಯೋ ತನಕ ಹಿಂಗೇ ಇರಬೇಕೋ ಏನೋ.. ಅನ್ನೋದೆ ಗೊತ್ತಾಗುತ್ತಾ ಇಲ್ಲ ಎಂದು ಲಕ್ಷ್ಮೀಬಾಯಿ ಮನೆಯ ಮುಂದಿನ ನಿವಾಸಿ ಬಸಮ್ಮ ಹೇಳುತ್ತಾರೆ.

ಸ್ಮಾರ್ಟ್‌ಸಿಟಿ, ಸುಂದರ, ಸ್ವಚ್ಛ ದಾವಣಗೆರೆಯ ಬಗ್ಗೆ ಹೇಳುವಂತಹವರು ಮಹಾನಗರ ಪಾಲಿಕೆಯ 10ನೇ ವಾರ್ಡ್‌ನ ನಿವಾಸಿಗಳಿಗೆ ಕನಿಷ್ಟ ಪಕ್ಷ ಬದುಕುವ ವಾತಾವರಣವನ್ನಾದರೂ ಕಲ್ಪಿಸಬೇಕಾಗಿದೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.