ಆಳವಾದ ಜ್ಞಾನವಿದ್ದಲ್ಲಿ ಬೋಧನೆ ಸುಲಭ
Team Udayavani, Feb 8, 2019, 5:57 AM IST
ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್ ಸಾಂಸ್ಕೃತಿಕ ಸ್ವರೂಪ ಪಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಬಿ.ಎಂ. ಹನುಮಂತಪ್ಪ ಹೇಳಿದ್ದಾರೆ.
ಇಂಗ್ಲಿಷ್ ಭಾಷೆಯ ನಾಟಕ, ಪಾತ್ರಾಭಿನಯ, ವಾಚನಾಭಿನಯ, ಕಥಾಭಿನಯ, ಮತ್ತಿತರ ಅಭಿನಯ ಪ್ರಕಾರಗಳು ಮತ್ತು ಕಾರ್ಯಕ್ರಮಗಳು ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಂಥ ಅಕಾಡೆಮಿಕ್ ಹಾಗೂ ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿದ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಿವೆ. ಅಂಥಹ ಕಾರ್ಯಕ್ರಮ ನರಗನಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲೂ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಇಂಗ್ಲಿಷ್ ಅಷ್ಟು ಸುಲಭವಾದ ಭಾಷೆಯಲ್ಲ. ಇದು ಪಟ್ಟಣದ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಸ್ವತ್ತಾಗಿತ್ತು. ಆ ಭಾಷೆಯನ್ನು ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ರೂಪದಲ್ಲಿ ತರುವುದು ತುಂಬಾ ಕಷ್ಟಕರ. ಆದರೂ ಅದನ್ನು ಗ್ರಾಮೀಣ ಮಕ್ಕಳಿಂದ ಸಾಧ್ಯವಾಗಿಸಿರುವ ಶಿಕ್ಷಕ ಪ್ರಕಾಶ್ ಕೊಡಗನೂರ್ ಕಾರ್ಯ ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಿಕೆಗೆ ಚೌಕಟ್ಟಿಲ್ಲ. ಚೆನ್ನಾಗಿ ಬರೆಯುವ, ಮಾತನಾಡುವ ವಿದ್ಯಾರ್ಥಿಗಳಿಗೆ ಇದೇ ವ್ಯಾಕರಣವೆಂದು ಹಿಂದೆ ಶಿಕ್ಷಕರು ಕಲಿಸುತ್ತಿದ್ದರು. ಡೈರೆಕ್ಟ್ ಮೆಥಡ್ ಪ್ರಯೋಜನಕಾರಿಯಲ್ಲ , ಬದಲಿಗೆ ಭಾಷಿಕ ಪರಿಸರವನ್ನು ವಿವಿಧ ಪ್ರಕಾರಗಳಲ್ಲಿ ಕಟ್ಟಿ ಕೊಡುವ ಕ್ರಮ ಅತ್ಯಂತ ಪರಿಣಾಮಕಾರಿಯಾದದ್ದು. ಇದಕ್ಕೆ ಭಾಷಾ ಶಿಕ್ಷಕರೇ ಆಗಲಿ ಇಲ್ಲವೇ ವಿಷಯ ಶಿಕ್ಷಕರೇ ಆಗಲಿ ಆಳವಾದ ಜ್ಞಾನ ಹೊಂದಿರಲೇಬೇಕು.
ಕೂದಲಿದ್ದವನು ಹೇಗೆ ಬೇಕಾದರೂ ತಲೆ ಬಾಚಿಕೊಳ್ಳುವಂತೆ ಭಾಷೆಯಲ್ಲಿ ಪ್ರೌಢಿಮೆ ಹೊಂದಿದವರಿಗೆ ಕಲಿಸುವ ಕ್ರಮ ಕಷ್ಟಕರವೇನಲ್ಲ ಎಂದರು. ವಿಶೇಷ ಆಹ್ವಾನಿತರಾಗಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್. ಎಚ್. ಅರುಣ್ಕುಮಾರ್ ಮಾತನಾಡಿ, ಉತ್ತಮ ಚಟುವಟಿಕೆ ಮತ್ತು ಕಾರ್ಯದ ಹಿಂದೆ ಬಹಳಷ್ಟು ಶ್ರಮ ಬೇಕಿದೆ. ಇಂದು ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಪ್ರಪಂಚ ಬಹಳ ಚಿಕ್ಕದಾಗಿದೆ. ನಮ್ಮದಲ್ಲದ ಭಾಷೆಯಾದ ಇಂಗ್ಲಿಷ್ ಅರ್ಥ ಮಾಡಿಕೊಂಡು ಭಾಷೆಯ ಏರಿಳಿತ, ಉಚ್ಚಾರಣೆ, ಹಾವ-ಭಾವದಿಂದ ಮಕ್ಕಳು ನಟಿಸುತ್ತಿರುವುದು ಅದ್ಭುತ ಎಂದು ಬಣ್ಣಿಸಿದರು. ಆನಗೋಡು ಶಾಲೆ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ ಮಾತನಾಡಿ, ನಾವು ಮಾಡಬೇಕಾದ ಕಾರ್ಯದ ಬಗ್ಗೆ ದೃಢತೆ ಹೊಂದಿದ್ದರೆ ಬಂಜರು ಭೂಮಿಯಲ್ಲೂ ಸಹ ಬೆಳೆ ತೆಗೆಯಬಹುದು ಎಂದರು.
4 ಮತ್ತು 5ನೇ ತರಗತಿ ಮಕ್ಕಳಿಂದ ವಸಿಷ್ಟ ಮತ್ತು ಶಬಲೆ ಪಾಠಗಳ ವಾಚನಾಭಿನಯ, 6ನೇ ತರಗತಿ ಮಕ್ಕಳಿಂದ ಎ ಚಾಟ್ ವಿತ್ ದ ಗ್ರಾಸ್ ಹಾಪರ್ ಪಾಠದ ಪಾತ್ರಾಭಿನಯ ಮತ್ತು 7ನೇ ತರಗತಿ ಮಕ್ಕಳಿಂದ ದ ವಂಡರ್ ಬೌಲ್ ಪಾಠದ ಕಥಾಭಿನಯ ಸಭಿಕರ ಮನಸೂರೆಗೊಂಡಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್. ಅಣ್ಣೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ಯಲ್ಲಪ್ಪ ಕಡೇಮನಿ, ಎನ್ .ಪಿ.ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಎಚ್. ಚಿನ್ನಪ್ಪ, ಎನ್.ಜಿ.ಸುಲೋಚನಮ್ಮ, ಇತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ