ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ
Team Udayavani, Feb 17, 2019, 7:25 AM IST
ದಾವಣಗೆರೆ: ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವ ನಿಟ್ಟಿನಲ್ಲಿ ಜಿಲ್ಲೆಯ ಕ್ರೀಡಾಪಟುಗಳನ್ನು ಬೆಳೆಸಲು ದೊಡ್ಡ ದೊಡ್ಡ ಉದ್ಯಮಗಳು, ದಾನಿಗಳು ಮುಂದೆ ಬರಬೇಕು ಎಂದು ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಹೇಳಿದರು.
ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶನಿವಾರ ದಾವಣಗೆರೆ ಕ್ರೀಡಾ ಸಂಸ್ಥೆ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಆಹ್ವಾನಿತ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಆದರೆ, ಅವರಿಗೆ ಅಗತ್ಯ ಆರ್ಥಿಕ ನೆರವು, ಮನೆಯಲ್ಲಿ ಪ್ರೋತ್ಸಾಹ ಸಿಗದೇ ಹಿಂದೆ ಬೀಳುತ್ತಿದ್ದಾರೆ. ಹಾಗಾಗಿ ಅಂತಹ ಕ್ರೀಡಾಪಟುಗಳ ನೆರವಿಗೆ ದೊಡ್ಡ ದೊಡ್ಡ ಉದ್ಯಮಗಳು, ದಾನಿಗಳು ಧಾವಿಸಬೇಕು. ಆಗ ಜಿಲ್ಲೆಯ ಕ್ರೀಡಾಪಟುಗಳು
ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರಲು ಸಾಧ್ಯವಾಗುತ್ತದೆ ಎಂದರು. ಕಳೆದ ಏಳೆಂಟು ವರ್ಷಗಳಿಂದ ದಾವಣಗೆರೆ ನಗರದಲ್ಲಿ ಖೋ-ಖೋ ಕ್ರೀಡಾಕೂಟಗಳು ನಡೆಯುವುದೇ ಕಡಿಮೆ ಆಗಿತ್ತು. ಇಂತಹ ಸಂದರ್ಭದಲ್ಲಿ ದೇಶಿಯ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ದಾವಣಗೆರೆ ಕ್ರೀಡಾಸಂಸ್ಥೆ ಮುಂದಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಕ್ರೀಡಾಪಟುಗಳು ಕೇವಲ ಕ್ರೀಡೆಗೆ ಸೀಮಿತವಾಗದೇ ವಿದ್ಯಾಭ್ಯಾಸದಲ್ಲೂ ಆಸಕ್ತಿ ವಹಿಸಬೇಕು. ಆಗ ಕ್ರೀಡೆಯಲ್ಲಿನ ಸಾಧನೆ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದರು. ಪಂದ್ಯಾವಳಿಯಲ್ಲಿ ಮೂಡಬಿದರೆ ಆಳ್ವಾಸ್, ಕೋಲಾರ ಕೆ.ಕೆ.ಸಿ, ಬೆಂಗಳೂರಿನ ಪಯನಿಯರಸ್, ಯಂಗ್
ಪಯನಿಯರಸ್, ಬಿ.ಸಿ.ಕೆ.ಎಚ್, ಭಜರಂಗ್ಬಲಿ, ಹಾಸನದ ಹಾಸನಾಂಬ, ಮೆಸೂರು ಜಿಲ್ಲಾ ತಂಡ, ಭದ್ರಾವತಿಯ ಸರ್. ಎಂ.ವಿ, ದಾವಣಗೆರೆಯ ನ್ಪೋಟ್ಸ್ ಕ್ಲಬ್, ನವ ಭಾರತ್ ನ್ಪೋಟ್ಸ್ ಕ್ಲಬ್ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 12 ತಂಡಗಳು ಭಾಗವಹಿಸಿದ್ದವು.
ಸಂಸ್ಥೆ ಅಧ್ಯಕ್ಷ ಎ.ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯೆ ರೇಖಾ ನಾಗರಾಜ್, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಎ.ಎಸ್. ಮೃತ್ಯುಂಜಯ, ಉಪಾಧ್ಯಕ್ಷ ಎಸ್. ಪ್ರದೀಪ್ಕುಮಾರ್, ಎಸ್.ಎನ್. ಚಿದಂಬರ್, ಮುಕುಂದ್, ಸುರೇಶ್, ಧರ್ಮರಾಜ್, ಟಾರ್ಗೆಟ್ ಅಸ್ಲಾಂ, ವಾಟಾಳ್
ನಾಗರಾಜ್, ಜೆ.ಜಿ. ಶಿವಪ್ರಕಾಶ್, ಇ.ಎಂ. ಮಂಜುನಾಥ್, ಮೂರ್ತಿ, ಜೆ.ಕೆ. ಕೊಟ್ರಬಸಪ್ಪ ಸೇರಿದಂತೆ ಹಿರಿಯ ಕ್ರೀಡಾಪಟುಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ