ಇಷ್ಟ ಲಿಂಗದಲ್ಲಿ ದೇವರ ಕಂಡಿದ್ದಾರೆ ಶರಣರು


Team Udayavani, Apr 18, 2018, 5:41 PM IST

18-April-29.jpg

ಬನಹಟ್ಟಿ: ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಜೊತೆಗೆ ಸುಗಮ ಹಾಗು ಸಂತೃಪ್ತಿ ಜೀವನ ನಡೆಯಲು ಕಾರಣವಾಗಲಿದೆ. ಇಷ್ಟಲಿಂಗದಲ್ಲಿಯೇ ದೇವರನ್ನು ಶರಣರು ಕಂಡಿದ್ದಾರೆ. ಇದರ ಪೂಜೆಯಿಂದ ಎಲ್ಲವೂ ಸಾಧ್ಯ ಎಂದು ಶಿರೂರ ಡಾ. ಬಸವಲಿಂಗ ಸ್ವಾಮಿಗಳು ಹೇಳಿದರು.

ಈಶ್ವರಲಿಂಗ ಮೈದಾನದ ಡಾ. ಎಂ.ಎಂ. ಕಲಬುರ್ಗಿ ವೇದಿಕೆಯಲ್ಲಿ ಸೋಮವಾರ ರಾತ್ರಿ ಬಸವ ಸಮಿತಿ ಆಶ್ರಯದಲ್ಲಿ ನಡೆದ ಬಸವ ಜಯಂತಿ ಉತ್ಸವ ನಿಮಿತ್ತ 41ನೇ ವಚನ ದರ್ಶನ ಪ್ರವಚನದ ಕಾರ್ಯಕ್ರಮ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ದೇವರು ಎಲ್ಲರ ಮನದಲ್ಲಿಯೂ ಇದ್ದಾನೆ. ಎಲ್ಲೆಲ್ಲೂ ಹುಡುಕುವ ಬದಲಾಗಿ ಮನದಲ್ಲಿಯೇ ದೇವರ ಸ್ಮರಣೆಯಿಂದ ಭಗವಂತನನ್ನು ಕಾಣಲು ಸಾಧ್ಯ ಎಂದರು. ಮುಮುಕ್ಷ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಮಾತನಾಡಿ, ಬಸವ ತತ್ವ ಪ್ರಾಬಲ್ಯವಾದುದು. ಇದನ್ನು ಜಯಂತಿಗಷ್ಟೇ ಸೀಮಿತಗೊಳಿಸದೆ ನಿತ್ಯ ಕೃತಿಯ ಮೂಲಕ ಆಚರಣೆಗೆ ಪ್ರತಿಯೊಬ್ಬರು ತರಬೇಕು. ಜಾತ್ಯತೀತ ಲಿಂಗಾಯತ ಧರ್ಮ ಲಿಂಗ ಕಟ್ಟಿಕೊಂಡವರೆಲ್ಲರೂ ಲಿಂಗಾಯತರೇ ಎಂದರು.

ಇದೇ ಸಂದರ್ಭ ಉನ್ನತ ಶಿಕ್ಷಣ ವಿಭಾಗದಲ್ಲಿ ಉಪವಿಭಾಗಾ ಧಿಕಾರಿಗಳಾದ ನಗರದ ಅಬಿದ್‌ ಇಸ್ಮಾಯಿಲ್‌ ಗದ್ಯಾಳ, ಪ್ರಶಾಂತ ಹಣಗಂಡಿ, ಮೋಹನ ಭಸ್ಮೆ, ಶಿಕ್ಷಣ ವಿಭಾಗದಲ್ಲಿ ಪಲ್ಲವಿ ಶಿರಹಟ್ಟಿ, ವೈದ್ಯಕೀಯ ವಿಭಾಗದಲ್ಲಿ ಡಾ. ಸಿದ್ಮಲ್ಲಪ್ಪ ಬಾವಲತ್ತಿ, ಕೃಷಿಯಲ್ಲಿ ಸದಾಶಿವ ಬಂಗಿ, ಪತ್ರಿಕಾ ಮಾಧ್ಯಮದಲ್ಲಿ ಮಲ್ಲಿಕಾರ್ಜುನ ತುಂಗಳ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಸತೀಶ ಹಜಾರೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚನಪರಪ್ಪ ಚಿಂಚಖಂಡಿ ಬಸವಭಾವ ಪೂಜೆ ನೆರವೇರಿಸಿದರು. ಮಲ್ಲಪ್ಪ ಜಗದಾಳ ಅನುಭಾವ ನೀಡಿದರು. ಶಂಕರ ಜಾಲಿಗಿಡದ, ಹುಚ್ಚಪ್ಪ ಬಾಗೇವಾಡಿ, ರಮೇಶ ಮಹಿಷವಾಡಗಿ ಇದ್ದರು.

ಶಂಕರ ಹೋಳಗಿ, ಶೇಖರ ಮಂಟೂರ, ಮಹೇಶ ಬಂಡಿಗಣ, ಶೇಖರ ಮುನ್ನೊಳ್ಳಿ, ಅಶೋಕ ಜೇವರೆ, ಸದಾಶಿವ ಕೋಪರ್ಡೆ, ಸಿದ್ದರಾಮ ಖಾನಾಪುರ, ಶಶಿಕಾಂತ ಮಹಾ ಜನ, ಜಯವಂತ ಕುಲಗೋಡ, ಶ್ರೀಶೈಲ ಮಡಿವಾಳ ಸೇರಿದಂತೆ ಅನೇಕರಿದ್ದರು. ಮಹಾನಂದಾ ಕುಳ್ಳಿ ವಚನ ಗಾಯನ ಹಾಡಿದರು. ಸದಾಶಿವ ಗಾಯಕವಾಡ ಸ್ವಾಗತಿಸಿದರು. ಮಹಾದೇವ ಗುಟ್ಲಿ ಹಾಗೂ ಈರಣ್ಣ ಬಾಣಕಾರ ನಿರೂಪಿಸಿದರು.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.