ಚೆಕ್ಪೋಸ್ಟ್ ಗಳಲ್ಲಿ ತಡರಾತ್ರಿವರೆಗೂ ತಪಾಸಣೆ
Team Udayavani, Apr 19, 2018, 5:19 PM IST
ಗುಳೇದಗುಡ್ಡ: ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕಮತಗಿ ನಾಕಾ ಚೆಕ್ಪೋಸ್ಟ್ನಲ್ಲಿ ತಡರಾತ್ರಿವರೆಗೂ ವಾಹನಗಳ ತಪಾಸಣೆ ನಡೆಯಿತು.
ಚೆಕ್ಪೋಸ್ಟ್ನಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಬಿಡುಬಿಟ್ಟಿದ್ದು, ನಿತ್ಯ ಬೆಳಗಿನ ಜಾವದವರೆಗೂ ಚೆಕ್ಪೋಸ್ಟ್ ತಪಾಸಣೆ ನಡೆಯುತ್ತಿದೆ. ಆದರೆ ಕಳೆದ ಹದಿನೈದು ದಿನಗಳಿಂದ ನಿತ್ಯವೂ ಚೆಕ್ಪೋಸ್ಟ್ನಲ್ಲಿ ಕಠಿಣ ಕ್ರಮಕೈಗೊಳ್ಳಲಾಗಿದ್ದು, ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ.
ದಾಖಲೆ ಇಲ್ಲದ ಬಾಂಡೆ ಸಾಮಗ್ರಿ ವಶ
ಬಾಗಲಕೋಟೆ: ಸೂಕ್ತ ದಾಖಲೆ ಇಲ್ಲದೇ ಬಾಂಡೆ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಇಲ್ಲಿನ ಹೊಸೂರ ಚೆಕ್ಪೋಸ್ಟ್ನಲ್ಲಿ ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸುಮಾರು 2 ಲಕ್ಷ ಮೊತ್ತದ ಬಾಂಡೆ ಸಾಮಗ್ರಿಗಳನ್ನು ಹುಬ್ಬಳ್ಳಿಯಿಂದ ಹುಣಸಗಿಗೆ ಸಾಗಿಸಲಾಗುತ್ತಿತ್ತು. ಹೊಸೂರ ಕ್ರಾಸ್ ಬಳಿ ತಹಶಿಲ್ದಾರ ವಿನಯ ಕುಲಕರ್ಣಿ ನೇತೃತ್ವದ ಅಧಿಕಾರಿಗಳ ತಂಡ, ಗೂಡ್ಸ ವಾಹನ, ಚಾಲಕ ಹಾಗೂ 2 ಲಕ್ಷ ಮೊತ್ತದ ಬಾಂಡಗೆ ಸಾಮಾನು ವಶಕ್ಕೆ ಪಡೆದಿದ್ದಾರೆ.ಪ್ರಕರಣ ದಾಖಲಿಸಲು ಎಂಸಿಸಿ ಕಮೀಟಿಗೆ ಶಿಫಾರಸು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ