29ರಿಂದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Team Udayavani, Jun 24, 2018, 3:36 PM IST
ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 29, 30ರಂದು ನಗರದ ಕವಿಸಂನಲ್ಲಿ ನಡೆಯಲಿದೆ. 29ರಂದು ಬೆಳಗ್ಗೆ 8:30 ಗಂಟೆಗೆ ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ರಾಷ್ಟ್ರ ಧ್ವಜಾರೋಹಣ, ಪರಿಷತ್ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ, ಡಾ| ಸದಾಶಿವ ಮರ್ಜಿ ಕನ್ನಡ ಧ್ವಜಾರೋಹಣ ನೆರವೇರಿಸುವರು. 9:30 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಜಿಪಂ ಸಿಇಒ ಸ್ನೇಹಲ್ ಆರ್. ಚಾಲನೆ ನೀಡುವರು. ಡಾ| ಎಂ.ಬಿ. ದಳಪತಿ, ನಿಂಗಣ್ಣ ಕುಂಟಿ ಹಾಗೂ ಎಸ್.ಬಿ. ಗಾಮನಗಟ್ಟಿ ಪಾಲ್ಗೊಳ್ಳುವರು.
10:30 ಗಂಟೆಗೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಆಶಯ ನುಡಿಗಳನ್ನಾಡುವರು. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಪ್ರಹ್ಲಾದ ಜೋಶಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಪುಸ್ತಕ ಮಳಿಗೆ ಹಾಗೂ ಶಾಸಕ ಜಗದೀಶ ಶೆಟ್ಟರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ನಿಕಟಪೂರ್ವ ಅಧ್ಯಕ್ಷ ಡಾ| ವಿ.ಸಿ. ಐರಸಂಗ, ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೊ| ಮಾಲತಿ ಪಟ್ಟಣಶೆಟ್ಟಿ ಮೊದಲಾದವರು ಪಾಲ್ಗೊಳ್ಳುವರು.
ಗೋಷ್ಠಿ ವೈವಿಧ್ಯ: 29ರಂದು ಮಧ್ಯಾಹ್ನ 12:30 ಗಂಟೆಗೆ ನಮ್ಮ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಮತ್ತು ಚರಿತ್ರೆ ದಾರಿ-ದಿಕ್ಕು-ದಿಗಂತ ಗೋಷ್ಠಿ ನಡೆಯಲಿದೆ.
ಡಾ|ಶ್ರೀನಿವಾಸ ಪಾಡಿಗಾರ, ಡಾ|ಶಿವಾನಂದ ಕೆಳಗಿನಮನಿ, ಡಾ|ಆರ್.ವಿ. ಪಾಟೀಲ, ಡಾ|ವೈ.ಎಂ. ಭಜಂತ್ರಿ ಪಾಲ್ಗೊಳ್ಳುವರು. ಡಾ| ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3 ಗಂಟೆಗೆ ಡಾ| ಕೆ.ಎಸ್. ಶರ್ಮಾ ಅಧ್ಯಕ್ಷತೆಯಲ್ಲಿ ನಡೆಯುವ ನಮ್ಮ ಜಿಲ್ಲೆಯ ಜನತೆಯ ತವಕ-ತಲ್ಲಣಗಳು ಗೋಷ್ಠಿಯಲ್ಲಿ ಡಾ| ಸಿದ್ದನಗೌಡ ಪಾಟೀಲ, ಶಾಸಕ ಬಸವರಾಜ ಬೊಮ್ಮಾಯಿ, ಬಿ.ಎಸ್. ಸೊಪ್ಪಿನ, ಡಾ| ಬಿ.ಜಿ. ಬಿರಾದಾರ ಭಾಗವಹಿಸುವರು.
ಸಂಜೆ 4:30 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಭಾಷೆಯ ಅಸ್ಮಿತೆ ಗೋಷ್ಠಿ ನಡೆಯಲಿದ್ದು, ಪ್ರೊ| ಜಿ.ಎಚ್. ಹನ್ನೆರಡುಮಠ, ಡಾ|ಸಿ. ರಾಮಸ್ವಾಮಿ, ಡಾ|ಧನವಂತ ಹಾಜವಗೋಳ, ಡಾ|ಶ್ರೀಶೈಲ ಹುದ್ದಾರ ಭಾಗವಹಿಸುವರು. ಡಾ|ಎಚ್.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. ಸಂಜೆ 6:30 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ|ಶಂಭು ಬಳಿಗಾರ ಚಾಲನೆ ನೀಡುವರು. ಎಸ್.ಕೆ. ರಂಗಣ್ಣವರ, ಗಣೇಶ ಅಮೀನಗಡ, ಕೃಷ್ಣ ಜೋಶಿ, ರಾಜಶೇಖರ ಬೆಳ್ಳಕ್ಕಿ ಆಗಮಿಸುವರು.
ಗೀತ ಗಾಯನ ವೈಭವ: 30ರಂದು ಬೆಳಗ್ಗೆ 9:30 ಗಂಟೆಗೆ ಡಾ|ಜ್ಯೋತಿಲಕ್ಷ್ಮೀ ಡಿ.ಪಿ. ಅವರಿಂದ ಪ್ರೊ| ಮಾಲತಿ ಪಟ್ಟಣಶೆಟ್ಟಿ ಅವರ ಕವನಗಳ ಗೀತ ಗಾಯನ ನಡೆಯಲಿದೆ. 10 ಗಂಟೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತರ ಕರ್ನಾಟಕ ಲೇಖಕಿಯರ ಕೊಡುಗೆ ಗೋಷ್ಠಿ ನಡೆಯಲಿದ್ದು, ಡಾ| ಮೀನಾಕ್ಷಿ ಬಾಳಿ, ಡಾ|ವಿನಯಾ ವಕ್ಕುಂದ, ಡಾ| ವೀಣಾ ಸಂಕನಗೌಡರ, ಡಾ| ಪುಷ್ಪಲತಾ ಶಲವಡಿಮಠ ಪಾಲ್ಗೊಳ್ಳುವರು. ಡಾ|ಶಾಂತಾ ಇಮ್ರಾಪುರ ಅಧ್ಯಕ್ಷತೆ ವಹಿಸುವರು.
11 ಗಂಟೆಗೆ ಜರುಗುವ ಇಂದಿನ ಯುವ ಬರಹಗಾರರ ಒಳಗುದಿಗಳು ಗೋಷ್ಠಿಯಲ್ಲಿ ಡಾ|ತಾರಿಣಿ ಶುಭದಾಯಿನಿ, ಡಾ|ವೆಂಕಟಗಿರಿ ದಳವಾಯಿ, ಮಲ್ಲಿಕಾರ್ಜುನ ಗುಮ್ಮಗೋಳ, ಚನ್ನಪ್ಪ ಅಂಗಡಿ ಭಾಗವಹಿಸುವರು. ಡಾ|ಸರಜೂ ಕಾಟಕರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1 ಗಂಟೆಗೆ ನಡೆಯುವ ಮಹಿಳೆಯ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳು ಕುರಿತ ಗೋಷ್ಠಿಯಲ್ಲಿ ಡಾ|ಆನಂದ ಪಾಂಡುರಂಗಿ, ಪ್ರಫುಲ್ಲಾ ನಾಯಕ, ರಜನಿ ಗರುಡ, ಅರುಣಾ ಶಿರಗುಪ್ಪಿ ಭಾಗವಹಿಸುವರು. ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಅಧ್ಯಕ್ಷತೆ ವಹಿಸುವರು.
ಸಮಾರೋಪ: ಮಧ್ಯಾಹ್ನ 3 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, 4 ಗಂಟೆಗೆ ಕವಿಗೋಷ್ಠಿ, 5:30 ಗಂಟೆಗೆ ಬಹಿರಂಗ ಅಧಿವೇಶನ, ನಿರ್ಣಯಗಳ ಮಂಡನೆ ನಡೆಯಲಿದೆ. 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ|ಚಂದ್ರಶೇಖರ ಪಾಟೀಲ ಸಮಾರೋಪ ಭಾಷಣ ಮಾಡುವರು. ಮಾಜಿ ಸಚಿವ ವಿನಯ ಕುಲಕರ್ಣಿ, ಕೃವಿವಿ ಕುಲಪತಿ ಡಾ|ವಿ.ಐ. ಬೆಣಗಿ, ಡಾ| ಗಣನಾಥ ಶೆಟ್ಟಿ, ಪ್ರಕಾಶ ಉಡಕೇರಿ ಆಗಮಿಸುವರು. ಡಾ|ಪಂಚಾಕ್ಷರಿ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ಪ್ರೊ|ಮಾಲತಿ ಪಟ್ಟಣಶೆಟ್ಟಿ ಮೊದಲಾದವರು ಉಪಸ್ಥಿತರಿರುವರು. ಸಂಜೆ 7 ಗಂಟೆಗೆ
ಇಮಾಮಸಾಬ್ ವಲ್ಲೆಪ್ಪನವರ ತಂಡದಿಂದ ಭಾವೈಕ್ಯತೆ ಗೀತೆ, ಪ್ರಭು ಕುಂದರಗಿ ಸಂಗಡಿಗರಿಂದ ಸುಗಮ ಸಂಗೀತ ಹಾಗೂ ಸ್ನೇಹ ರಂಗ ಕಾಲ ಬಳಗದ ಸದಸ್ಯರು ಜಾಗೃತ ಗೀತೆಗಳನ್ನು ಪ್ರಸ್ತುಪಡಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ