ಆಸ್ತಿಯಾಯ್ತು, ಈಗ ಸಿಬ್ಬಂದಿ ಇಬ್ಬಂದಿ !


Team Udayavani, Jul 2, 2018, 4:15 PM IST

2-july-18.jpg

ಹುಬ್ಬಳ್ಳಿ: ಬೇಷರತ್ತಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಿರ ಹಾಗೂ ಚರಾಸ್ತಿ ಕೇಳಲಿರುವ ಬಿಆರ್‌ಟಿಎಸ್‌ ಕಂಪನಿ ಇಲ್ಲಿನ ಸಿಬ್ಬಂದಿಯ ತಾತ್ಕಾಲಿಕ ನಿಯೋಜನೆಗೆ ಸಿದ್ಧತೆ ನಡೆಸಿದೆ. ಸಿಬ್ಬಂದಿ ವರ್ಗಾವಣೆಗೆ ಹತ್ತು ಹಲವು ಕರಾರುಗಳನ್ನು ಹಾಕಿದ್ದು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳ ಹೊಸ ನೇಮಕಾತಿಗೆ ಹೆಚ್ಚು ಆಸಕ್ತಿ ಹೊಂದಿರುವಂತೆ ಕಾಣುತ್ತಿದೆ.

ಅವಳಿ ನಗರ ತ್ವರಿತ ಸಾರಿಗೆ ವ್ಯವಸ್ಥೆಗೆ ವಾಯವ್ಯ ಸಾರಿಗೆ ಸಂಸ್ಥೆ ಅಡಿಯಲ್ಲೇ ಪ್ರತ್ಯೇಕ ನಗರ ವಿಭಾಗೀಯ ಕಚೇರಿ ಆರಂಭಿಸಿ, ಈ ಮೂಲಕ ನಿರ್ವಹಿಸುವುದು ಹಾಗೂ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸುವುದು ಹಿಂದಿನ ಸಭೆಗಳ ನಿರ್ಧಾರವಾಗಿತ್ತು. ಹೀಗಾಗಿಯೇ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಸಂಚರಿಸುವ ಬಸ್‌ಗಳ ಚಾಲನೆಗಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ಚಾಲಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಸಾರಿಗೆ ಸಂಸ್ಥೆಯ ಆಸ್ತಿಯನ್ನು ಯಾವುದೇ ಕರಾರು ಇಲ್ಲದೆ ಕೇಳುತ್ತಿರುವ ಬಿಆರ್‌ಟಿಎಸ್‌, ಸಿಬ್ಬಂದಿ ವರ್ಗಾವಣೆಗೆ ಹಲವು ನಿಯಮಗಳಿಟ್ಟಿರುವುದು ಕಾರ್ಮಿಕರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಹಳೇ ಒಪ್ಪಂದಕ್ಕೆ ತದ್ವಿರುದ್ಧವಾಗಿ ಸಂಸ್ಥೆಯ ಆಸ್ತಿ ಪಡೆಯಲು ಸರಕಾರದ ಮಟ್ಟದಲ್ಲಿ ಲಾಬಿ ನಡೆಸಿರುವುದೇ ತಪ್ಪು. ಈ ನಡುವೆಯೇ ಸಿಬ್ಬಂದಿಯನ್ನು ತಾತ್ಕಾಲಿಕ ನಿಯೋಜನೆ ಆಧಾರದಲ್ಲಿ ಪಡೆಯಲು ನಿರ್ಧರಿಸುವುದು ಎಷ್ಟು ಸೂಕ್ತ ಎನ್ನುವ ಆಕ್ರೋಶ ಕಾರ್ಮಿಕ ವಲಯದಿಂದ ವ್ಯಕ್ತವಾಗಿದೆ.

ವಾಯವ್ಯ ಸಾರಿಗೆ ಸಂಸ್ಥೆ ಸ್ಥಿರ ಹಾಗೂ ಚರಾಸ್ತಿ ಕಬಳಿಸಲು ಬಿಆರ್‌ ಟಿಎಸ್‌ ಕಂಪನಿ ಹುನ್ನಾರ ನಡೆಸಿರುವ ಕುರಿತು ‘ಉದಯವಾಣಿ’ ವಿಸ್ತೃತ ವರದಿ ಪ್ರಕಟಿಸಿದ್ದು, ಕಾರ್ಮಿಕ ಸಂಘಟನೆಗಳು ಎಚ್ಚೆತ್ತಿವೆ. ಸದ್ಯ ಬಿಆರ್‌ಟಿಎಸ್‌ ನಡೆಯಿಂದ ಆಘಾತ ಹಾಗೂ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿದೆ.

ಸಿಬ್ಬಂದಿ ಬೇಡಿಕೆ: ಬಿಆರ್‌ಟಿಎಸ್‌ ಹಾಗೂ ಪೂರಕ ಸೇವೆಗೆ 775 ಚಾಲಕರು ಹಾಗೂ 665 ನಿರ್ವಾಹಕರು, 100 ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಅಗತ್ಯವಿದೆ. ಕೇವಲ 6 ಅಧಿಕಾರಿಗಳನ್ನು ನೀಡುವಂತೆ ಬೇಡಿಕೆಯಿದೆ. ಇವರೆಲ್ಲರ ಸೇವೆ ಕೇವಲ ಬಸ್‌ ನಿಲ್ದಾಣ ಹಾಗೂ ಘಟಕಗಳಿಗೆ ಮಾತ್ರ ಸೀಮಿತ. ಕೇಂದ್ರ ಕಚೇರಿಯ ಕಾರ್ಯನಿರ್ವಹಣೆ ಮಾಡಲು ಹೊಸ ನೇಮಕಾತಿಗೆ ಬಿಆರ್‌ ಟಿಎಸ್‌ ಮನಸ್ಸು ಮಾಡಿದಂತಿದೆ. ಮುಂದಿನ ದಿನಗಳಲ್ಲಿ ನಗರ ಹಾಗೂ ಉಪನಗರ ಸಾರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಮಾರ್ಗಗಳನ್ನು ಬಿಆರ್‌ಟಿಎಸ್‌ ಹೆಸರಲ್ಲಿ ನೀಡಬೇಕೆಂಬುದು ಪ್ರಮುಖವಾಗಿದೆ.

ಹೊಣೆಗಾರಿಕೆ ಇಲ್ಲ: ಬಿಆರ್‌ಟಿಎಸ್‌ ಇಷ್ಟೊಂದು ಸಂಖ್ಯೆಯಲ್ಲಿ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆ ಕೋರಿದ್ದು, ಈ ಸಿಬ್ಬಂದಿಗೆ ನೀಡಬೇಕಾದ ಹಿಂಬಾಕಿ ಹಾಗೂ ಬಾಕಿ ಉಳಿದಿರುವ ಸೌಲಭ್ಯಗಳ ಪಾವತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಈ ಸಿಬ್ಬಂದಿ ಹೊಣೆಗಾರಿಕೆ ವಾಯವ್ಯ ಸಾರಿಗೆ ಸಂಸ್ಥೆ ಮೇಲೆ ಬೀಳಲಿದೆ. ದುಡಿಯುವ ಸಿಬ್ಬಂದಿ, ವಾಹನಗಳು ಇಲ್ಲವಾದ ಮೇಲೆ ಸಿಬ್ಬಂದಿಯ ಬಾಕಿ ಕೊಡುವುದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆ. ಬಾಕಿ ಉಳಿದ ಸೌಲಭ್ಯಗಳನ್ನು ಪಡೆಯಲು ದೊಡ್ಡ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಬಿಆರ್‌ಟಿಎಸ್‌ ಸಂಸ್ಥೆಗೆ ಹೋದರೆ ನಮ್ಮ ಬಾಕಿ ಪಾವತಿಗೆ ಪಂಗನಾಮ ಎನ್ನುವ ಆತಂಕ ವಾಕರಸಾ ಸಿಬ್ಬಂದಿಯದ್ದು.

ನೇಮಕಾತಿಗೆ ಒಲವು: ಪ್ರತ್ಯೇಕ ಸಂಸ್ಥೆ ಮಾಡಿದರೆ ಲಾಭ ಗಳಿಸಬಹುದೆಂಬ ನಿರೀಕ್ಷೆಯಲ್ಲಿ ಬಿಆರ್‌ಟಿಎಸ್‌ ಅಧಿಕಾರಿಗಳು ಇದ್ದಂತೆ ಕಾಣುತ್ತಿದೆ. ಆದರೆ ರಾಜ್ಯ ಸಾರಿಗೆ ಇತಿಹಾಸದಲ್ಲಿ ಸರಕಾರಿ ಒಡೆತನದ ಸಂಸ್ಥೆಗಳು ಲಾಭ ಗಳಿಸಿದ ಉದಾಹರಣೆಗಳಿಲ್ಲ. ಆದರೆ ಪ್ರತ್ಯೇಕ ನಿಗಮದ ಪ್ರಸ್ತಾವನೆಗೆ ಮುಂದಾಗಿರುವ ಬಿಆರ್‌ ಟಿಎಸ್‌ ಕೇಂದ್ರ ಕಚೇರಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲು ಹೊಸ ಹುದ್ದೆಗಳಾದ ಎಂಡಿ, ಹಣಕಾಸು, ಕಾನೂನು, ಸಂಚಾರ, ತಾಂತ್ರಿಕ, ಕಾಮಗಾರಿ, ಆಡಳಿತ ಸೇರಿದಂತೆ 13 ಶಾಖೆಗಳಿಗೆ ದೊಡ್ಡ ಸಂಬಳದ ಹಿರಿಯ ಅಧಿಕಾರಿಗಳು ಹಾಗೂ ಆಡಳಿತಾತ್ಮಕ ಸಿಬ್ಬಂದಿ ನೇಮಕಕ್ಕೆ ಒತ್ತು ನೀಡಿದಂತಿದೆ. ಪ್ರತ್ಯೇಕ ನಿಗಮ ಸರಕಾರಕ್ಕೆ ಹೆಚ್ಚುವರಿ ಹೊರೆ ವಿನಃ ಲಾಭ ದೂರದ ಮಾತು ಎಂಬುದು ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರ ಅಭಿಪ್ರಾಯ.

ಪ್ರತ್ಯೇಕ ನಿಗಮಕ್ಕೆ ಮಹಾಮಂಡಳ ಎಂದಿಗೂ ಬೆಂಬಲ ನೀಡುವುದಿಲ್ಲ. ಯಾವುದೇ ಕರಾರು ಇಲ್ಲದೆ ಯಥಾಸ್ಥಿತಿಯಲ್ಲಿ ಸಂಸ್ಥೆ ಆಸ್ತಿ ಬಿಟ್ಟುಕೊಡಬೇಕು ಎಂದು ಕೇಳುವ ಬಿಆರ್‌ಟಿಎಸ್‌ ಕಂಪೆನಿ, ಸಿಬ್ಬಂದಿ ವಿಚಾರದಲ್ಲಿ ಕರಾರುಗಳನ್ನಿಟ್ಟಿರುವುದು ಮುಂದಿನ ಖಾಸಗೀಕರಣದ ಸುಳಿವು ನೀಡುತ್ತವೆ. ಜು.4ರಂದು ನಡೆಯುವ ಮಹಾಮಂಡಳದ ಸಾಮಾನ್ಯ ಸಭೆಯಲ್ಲಿ ಸಾರಿಗೆ ಸಂಸ್ಥೆ ಆಸ್ತಿ ವರ್ಗಾಯಿಸದಂತೆ ಠರಾವು ಪಾಸ್‌ ಮಾಡಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತೇವೆ.
ಡಾ| ಕೆ.ಎಸ್‌. ಶರ್ಮಾ, ಕಾರ್ಮಿಕ ಹೋರಾಟಗಾರ

„ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.