ಲಿಂಗನಮಕ್ಕಿ ಜಲಾನಯನದಲ್ಲಿ ಭಾರೀ ಮಳೆ
Team Udayavani, Aug 17, 2018, 4:32 PM IST
ಹೊನ್ನಾವರ: ರಿಪ್ಪನಪೇಟೆ, ಸಾಗರ, ಹೊಸನಗರಗಳಲ್ಲಿ ಬುಧವಾರ ಭಾರೀ ಮಳೆಯಾದ ಕಾರಣ ಗುರುವಾರ ಬೆಳಗ್ಗೆ ಲಿಂಗನಮಕ್ಕಿಯ 7 ಗೇಟ್ಗಳನ್ನು ತೆರೆದು ಮತ್ತೆ ನೀರು ಬಿಡಲಾಗಿದೆ. ಮಳೆ ಕಡಿಮೆಯಾದ್ದರಿಂದ ಬುಧವಾರ ಮುಂಜಾನೆ ಲಿಂಗನಮಕ್ಕಿ ಅಣೆಕಟ್ಟಿನ ಮತ್ತು ಟೇಲರೀಸ್ ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ಮುಚ್ಚಲಾಗಿತ್ತು. ಟೇಲರೀಸ್ ಅಣೆಕಟ್ಟಿನಿಂದ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಮಳೆ ಮುಂದುವರಿದ ಕಾರಣ ಲಿಂಗನಮಕ್ಕಿ ಅಣೆಕಟ್ಟಿನಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು ವಿದ್ಯುತ್ ಉತ್ಪಾದನೆ ಮಾಡಿ 23 ಸಾವಿರ ಕ್ಯೂಸೆಕ್ ನೀರು ಹೊರಬರುತ್ತಿದೆ.
ಈ ನೀರು ಜಲಪಾತದಲ್ಲಿ ಧುಮುಕಿ ಟೇಲರೀಸ್ ಅಣೆಕಟ್ಟಿಗೆ ಮಳೆ ನೀರಿನೊಂದಿಗೆ ಸೇರಿಕೊಂಡು 42 ಸಾವಿರ ಕ್ಯೂಸೆಕ್ ನೀರಾಗಿ ತುಂಬಿಕೊಂಡ ಕಾರಣ ಗುರುವಾರ ಮಧ್ಯಾಹ್ನ ಟೇಲರೀಸ್ ಅಣೆಕಟ್ಟಿನ ಗೇಟು ತೆರೆದು 20 ಸಾವಿರ ಕ್ಯೂಸೆಕ್ ಮತ್ತು ವಿದ್ಯುತ್ ಉತ್ಪಾದಿಸಿ 22 ಸಾವಿರ ಕ್ಯೂಸೆಕ್ ಸೇರಿ ಒಟ್ಟೂ 42 ಸಾವಿರ ಕ್ಯೂಸೆಕ್ ಗೇರುಸೊಪ್ಪೆಗೆ ಬಂದು ಜನವಸತಿ ಪ್ರದೇಶದಲ್ಲಿ ಹರಿಯತೊಡಗಿದೆ. ಶರಾವತಿಯಲ್ಲಿ ನೀರಿನ ಮಟ್ಟ ಮತ್ತೆ ಏರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
Online Bitcoin Gambling Enterprises: An Overview to Betting with Cryptocurrency