ಸಂತ್ರಸ್ತರ ನೆರವಿಗೆ ಕರ್ನಾಟಕ ಥಿಂಕರ್ ಫೋರಂ ಸಾಥ್‌


Team Udayavani, Aug 20, 2018, 4:14 PM IST

20-agust-16.jpg

ಧಾರವಾಡ: ಅನಿರೀಕ್ಷಿತ ಅತಿವೃಷ್ಟಿಯಿಂದ ತೀವ್ರ ತೊಂದರೆಗೆ ಸಿಲುಕಿರುವ ಕೊಡುಗು ಜಿಲ್ಲೆಯ ಜನರಿಗೆ ನಾಡಿನ ಜನರ ಸಹಾಯದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಥಿಂಕರ್ ಫೋರಂ (ರಿ) ಕೊಡಗು ಜಿಲ್ಲೆಯ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈ ಉದ್ದೇಶಕ್ಕಾಗಿ ಫೋರಂ, ಸಾರ್ವಜನಿಕರು ನೀಡುವ ವಸ್ತುಗಳನ್ನು ಕೊಡಗು ಜಿಲ್ಲೆಯ ಜನರಿಗೆ ತಲುಪಿಸುವ ಹೊಣೆ ನಿಭಾಯಿಸಲು ಸಜ್ಜಾಗಿದೆ.

ಆದ್ದರಿಂದ ಸಾರ್ವಜನಿಕರು ಧವಸ-ಧಾನ್ಯ, ಬಟ್ಟೆಗಳು, ಬ್ರೆಡ್‌, ಹಾಸಿಗೆ, ಹೊದಿಕೆ, ದಿಂಬು, ಬೆಂಕಿಪೊಟ್ಟಣ, ಮೇಣಬತ್ತಿ, ಔಷಧಿ ಸಾಮಗ್ರಿ, ಡೆಟಾಲ್‌, ವಾಶಿಂಗ್‌ ಪೌಡರ್‌, ಕೊಬ್ಬರಿ ಎಣ್ಣೆ, ಸಾಬೂನು ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಚೀಲ ಅಥವಾ ಡಬ್ಬಿಯಲ್ಲಿ ಪ್ಯಾಕ್‌ ಮಾಡಿ ಕೊಡಬೇಕು. ಹಣಕಾಸಿನ ರೂಪದಲ್ಲಿ ಸಹಾಯ ಮಾಡಲು ಬಯಸುವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯ ಮಾಡಲು ಅವಕಾಶವಿದೆ. ದಾನಿಗಳು ತಮ್ಮ ಚೆಕ್‌ ಅಥವಾ ಡಿ.ಡಿ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಕಚೇರಿ, ಕರ್ನಾಟಕ ಸರ್ಕಾರ ಈ ವಿಳಾಸಕ್ಕೆ ಬರೆದು ಸಲ್ಲಿಸಬೇಕು. ಸಾರ್ವಜನಿಕರು ತಾವು ನೀಡಿದ ವಸ್ತುಗಳ ಬಗ್ಗೆ ಸಂಬಂಧಿಸಿದವರ ಬಳಿ ರಶೀದಿ ಪಡೆಯಬೇಕು.

ಆಸಕ್ತ ಸಾರ್ವಜನಿಕರು ಜೆ.ಸಿ. ಕಂಬಾರ, ಅಧ್ಯಾಪಕರು, ಆರ್‌.ಎಲ್‌.ಎಸ್‌. ಕಾಲೇಜು, ಮಹಾನಗರ ಪಾಲಿಕೆ ಕಚೇರಿ ಹತ್ತಿರ, ಧಾರವಾಡ (ಮೊ:8296756966), ದೂ:0836-2441185 ಅಥವಾ ಪ್ರಕಾಶ ಶ್ಯಾಡ್ಲಗೇರಿ, ಕರ್ನಾಟಕ ಥಿಂಕರ್ ಫೋರಂ (ರಿ) ಕಚೇರಿ, ಕಿಲ್ಲಾ ಧಾರವಾಡ (ಮೊ:9945720037) ಆ.25ರೊಳಗಾಗಿ ತಲುಪಿಸಬೇಕು. ಮಾಹಿತಿಗಾಗಿ ಪಿ.ಎಚ್‌. ನೀರಲಕೇರಿ, ಅಧ್ಯಕ್ಷರು, ಕರ್ನಾಟಕ ಥಿಂಕರ್ ಫೋರಂ ಅಥವಾ ಕರಣ ದೊಡವಾಡ (ಮೊ: 7760965110) ಸಂಪರ್ಕಿಸಬಹುದು. 

ಕೊಡಗು ಸಂತ್ರಸ್ತರಿಗೆ ಆಹಾರ ಪದಾರ್ಥ ಸಂಗ್ರಹ
ನವಲಗುಂದ: ಪಟ್ಟಣದಲ್ಲಿ ಜನರಿಂದ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಖಾಸಗಿ ವಾಹನಿ ಮೂಲಕ ಕೊಡಗು ಸಂತ್ರಸ್ತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮಂಜುನಾಥ ಬೇಲೂರು, ಉಮೇಶ ಹಕ್ಕರಕ್ಕಿ, ನಿಂಗಪ್ಪ ಕುಂಬಾರ, ಜಯಪ್ರಕಾಶ ಬದಾಮಿ, ವಿನಾಯಕ ದಾಡಿಬಾಯಿ, ರಾಮು ಭೋವಿ, ಮಹೇಶ ಪೂಜಾರ, ಆಸೀಫ್‌ ಉಮಚಗಿ, ರವಿ ಬ್ಯಾಹಿಟಿ, ರಾಘು ಮಲ್ಲಾಪೂರ, ಸೋಮಯ್ಯ ಪೂಜಾರ, ರಾಮಕೃಷ್ಣ ಬಡಿಗೇರ, ಬಾಲಾಜಿ ಆನೇಗುಂದಿ, ಗುರು ವಿಠಲ ರಾಯಬಾಗಿ, ಮಂಜು ಮಟಗೇರ, ಮಾರುತಿ ಗುಡಿಸಾಗರ, ಪುಟ್ಟು ಹೀರಗಣ್ಣನವರ ಇದ್ದರು.

ಪ್ರವಾಹ ಇಳಿಮುಖಕ್ಕೆ ಆಗ್ರಹಿಸಿ ದೀರ್ಘ‌ ದಂಡ ನಮಸ್ಕಾರ
ಧಾರವಾಡ: ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಇಳಿಮುಖವಾಗುವಂತೆ ಪ್ರಾರ್ಥಿಸಿ ನಗರದಲ್ಲಿ ರವಿವಾರ ಸಾಮೂಹಿಕ ದೀರ್ಘ‌ ದಂಡ ನಮಸ್ಕಾರ ಸೇವೆ ಸಲ್ಲಿಸುವ ಮೂಲಕ ದೇವರ ಮೊರೆ ಹೋದ ಘಟನೆ ನಡೆದಿದೆ. ರಾಜೀವಗಾಂಧಿ  ನಗರದ ಕೆಲ ಭಕ್ತ ಸಮೂಹವು ಹೊಳೆಮ್ಮದೇವಿ ದೇವಸ್ಥಾನದಿಂದ ಸೋಮೇಶ್ವರ ದೇವಸ್ಥಾನದವರೆಗೆ ದೀರ್ಘ‌ದಂಡ ನಮಸ್ಕಾರ ಹಾಕಿದ್ದು, ಅಲ್ಲದೇ ಆ ಬಳಿಕ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಹೊಳೆಮ್ಮದೇವಿ ದೇವಸ್ಥಾನದ ಮೈಲಾರ ಅಜ್ಜ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ದೀರ್ಘ‌ ದಂಡ ನಮಸ್ಕಾರ ಸೋಮೇಶ್ವರ ದೇವಸ್ಥಾನದವರೆಗೂ ಬಂದು ಪುನಃ ದೀಡ ನಮಸ್ಕಾರ ಮೂಲಕವೇ ಹೊಳೆಮ್ಮದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಮಕ್ಕಳು ಸಹ ಈ ದೀರ್ಘ‌ ದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.