ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಭೂಪ!
Team Udayavani, Sep 2, 2018, 4:44 PM IST
ಹುಬ್ಬಳ್ಳಿ: ತನ್ನ ಮನೆಯಲ್ಲೇ ಅಂದಾಜು 5.50 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳುವು ಮಾಡಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮೀಣ ಠಾಣೆ ಪೊಲೀಸರು ಕಳ್ಳತನ ಮಾಡಿದ್ದ ವಸ್ತುಗಳೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಭಂಡಿವಾಡ ಗ್ರಾಮದ ರೆಹಿಮಾನಸಾಬ ಸಿ. ದಂಡಿನ ಎಂಬಾತನೆ ಬಂಧನಕ್ಕೊಳಗಾಗಿದ್ದಾನೆ. ಈತ ತನ್ನ ಮನೆಯ ಬಾಗಿಲ ಬೀಗ ಮುರಿದು ಕಳುವು ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚಂದುಸಾಬ ದಂಡಿನ ಎಂಬುವರ ಮನೆಯ ಕಬ್ಬಿಣದ ಅಲ್ಮೇರಾದಲ್ಲಿಟ್ಟಿದ್ದ ನಗ-ನಾಣ್ಯ ಬುಧವಾರ ಕಳುವು ಆಗಿತ್ತು. ಈ ಕುರಿತು ಅವರು ತಮ್ಮ ಹಿರಿಯ ಮಗನ ಮೇಲೆ ಸಂಶಯವಿದೆ ಎಂದು ಗ್ರಾಮೀಣ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಎಸ್ಪಿ ಸಂಗೀತಾ ಜಿ., ಡಿಎಸ್ಪಿ ಬಿ.ಪಿ. ಚಂದ್ರಶೇಖರ ಹಾಗೂ ಠಾಣಾಧಿಕಾರಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುಳಾ ಸದಾರಿ ಹಾಗೂ ಸಿಬ್ಬಂದಿಯುಳ್ಳ ತನಿಖಾ ತಂಡ ರಚಿಸಲಾಗಿತ್ತು. ತಂಡವು ಪ್ರಕರಣದ ಜಾಡು ಹಿಡಿದು ರೆಹಿಮಾನಸಾಬನನ್ನು ಅಣ್ಣಿಗೇರಿಯ ಅಂಬಿಗೇರ ಕ್ರಾಸ್ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ, ಮನೆಯಲ್ಲಿದ್ದ ಅಂದಾಜು 2.40 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ 3.10 ಲಕ್ಷ ನಗದು ಕಳುವು ಮಾಡಿಕೊಂಡು, ಅಣ್ಣಿಗೇರಿ ಸಮೀಪದ ಸೈದಾಪುರ ಗ್ರಾಮದ ಸದ್ದಾಂಹುಸೇನ ಖುದಾವಂದ ಅವರ ದನದ ಕೊಟ್ಟಿಗೆ ಹಿಂದೆ ಮುಚ್ಚಿಟ್ಟಿದ್ದಾಗಿ ಬಾಯಿಬಿಟ್ಟಿದ್ದ. ನಂತರ ಆತನನ್ನು ಕಳುವಿನ ವಸ್ತುಗಳೊಂದಿಗೆ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ