ಜಟ್ಟಿಗಳ ಸಮಬಲ ಪ್ರದರ್ಶನ


Team Udayavani, Sep 6, 2018, 4:51 PM IST

6-september-23.jpg

ತೇರದಾಳ: ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭುದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಸಮಬಲ ಪ್ರದರ್ಶನ ನಡೆಯಿತು. ಎಂಇಜಿ ಸೆಂಟರ್‌ ಬೆಂಗಳೂರಿನ ಫೈಲವಾನ್‌ ಅಮೀತ್‌ ದಿಲ್ಲಿ ಹಾಗೂ ತಾಲೀಮ ಕ್ರೀಡಾ ಹಾಸ್ಟೆಲ್‌ ದಾವಣಗೆರೆಯ ಪೈಲವಾನ್‌ ಕಾರ್ತಿಕ ಕಾಟೆ ನಡುವೆ ನಡೆದ ಕೊನೆಯ ಪಂದ್ಯ ಸಮಬಲಗೊಂಡಿತು. ಇಬ್ಬರು ಕುಸ್ತಿಪಟುಗಳು 75ನಿಮಿಷವರೆಗೆ ತಮ್ಮ ಕೈ ಚಳಕ, ಯುಕ್ತಿ, ಶಕ್ತಿ ತೋರಿದರು. ಜಗಜಟ್ಟಿಗಳ ಕುಸ್ತಿ ಕಾಳಗ ಸಮಬಲಗೊಂಡಿದೆ ಎಂದು ತೀಪುಗಾರರು ನಿರ್ಣಯಿಸಿದರು.

ಕೊಲ್ಹಾಪುರದ ಗಣೇಶ ಕುಂಕುಳೆ ಹಾಗೂ ಶಿವಪುತ್ರ ಮಾಯಾನಟ್ಟಿ, ಬೆಳಗಾವಿಯ ಭೀಮಾ ಮುಗಳಖೋಡ, ಕುರ್ಡವಾಡದ ಮೋಯಿನ್‌ ಪಟೇಲ ಹಾಗೂ ಸುನೀಲ ನೌಲಿ, ಸಾಂಗಲಿಯ ಗಜಾನನ ಇಂಗಳಗಿ, ಹನಗಂಡಿಯ ಉದಯ ಹನಗಂಡಿ ಹಾಗೂ ಸಮೀರ, ಚಿಂಚಲಿಯ ಬಸು ಮಸರಗುಪ್ಪಿ, ಶ್ರೀಶೈಲ ಚಿಂಚಲಿ ಹಾಗೂ ಹೊನ್ನಪ್ಪ ಸಿಂದಗಿ, ಸಾಂವಗಾಂವದ ದಯಾನಂದ ಶಿರಗಾಂವ ಎದುರಾಳಿಯನ್ನು ಸೋಲಿಸಿ, ಕುಸ್ತಿ ಗೆದ್ದು, ದಾಖಲೆ ಮಾಡಿ, ನಗದು ಹಣ, ಢಾಲು, ಶಾಲು ಸನ್ಮಾನ ಪಡೆದರು. ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಹರಿಯಾಣ ಮುಂತಾದೆಡೆಗಳಿಂದ 65ಕ್ಕೂ ಹೆಚ್ಚು ಘಟಾನುಘಟಿ ಜೋಡಿ ಪೈಲವಾನರು ಸಾಹಸ-ಶಕ್ತಿ ಮತ್ತು ಯುಕ್ತಿ ತೋರಿಸಿ ಮೆರಗು ತಂದರು. ಚಿಕ್ಕಮಕ್ಕಳ ಕುಸ್ತಿ ಪ್ರದರ್ಶನ ನಡೆಯಿತು.

ಕುಸ್ತಿಪ್ರೇಮಿಗಳ ಜನಸಮೂಹದ ಚಪ್ಪಾಳೆಯ ಪ್ರೋತ್ಸಾಹ, ಸಂಭ್ರಮದ ನಡುವೆ ಅಖಾಡಕ್ಕೆ ಇಳಿದ ಜಗಜಟ್ಟಿಗಳು ಮದ್ದಾನೆಯಂತೆ ಗೋಚರಿಸಿ, ಕೆಲ ಹೊಸ ದಾಖಲೆ ಮಾಡಿದರು. 7ವರ್ಷದ ಪೈಲವಾನ ಪ್ರೀತಮ್‌ ಚನಾಳ, ಪುಟ್ಟ ಬಾಲಕಿ ಪ್ರಭಾವತಿ ಮುಧೋಳ ಗಮನ ಸೆಳೆದರು. ಈ ಬಾರಿ ಬೆಳಗಾವಿಯ ಪೈ. ಬಸು ಚಿಮ್ಮಡ ಹಾಗೂ ಕುರ್ಡವಾಡಿಯ ಪೈ. ಸಾಗರ ಮೋಟೆ, ಕೊಲ್ಲಾಪುರದ ಪೈ.ನಿಲೇಶ ತರಂಗೆ ಹಾಗೂ ಸಾಂವಗಾಂವದ ಪೈ. ಶಿವಯ್ಯ ಕಂಕಣವಾಡಿ ಸೇರಿದಂತೆ ಕೆಲವರ ಕುಸ್ತಿಗಳು ಸಮಬಲದಿಂದ ನಡೆದವು. ದಾವಣಗೆರೆಯ ಕಿರಣ ಭದ್ರಾವತಿ ಅವರು ಹಾರೂಗೇರಿಯ ಸತ್ಪಾಲ ಅವರನ್ನು ಸೋಲಿಸಿ ಪಾರಿತೋಷಕ ಪಡೆದರು. ಬೆಳಗಾವಿಯ ಮೂಗ(ಮಾತು ಬಾರದ) ತುಕಾರಾಮ ಅಥಣಿ ಅವರು ಕೋಲ್ಲಾಪುರದ ಶಿವಾನಂದ ನಿರ್ವಾನಟ್ಟಿ ಅವರನ್ನು ಸೋಲಿಸಿದರು. ವಿಜಯ ಮಹಾಂತೇಶ ನಾಡಗೌಡ, ಕ್ಷೇತ್ರದ ಶಾಸಕ ಸಿದ್ದು ಸವದಿ, ಬಾಹು ಸರಕಾರ ದೇಸಾಯಿ, ಡಾ| ಚಿದಾನಂದ ಸರಿಕರ, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಕಲ್ಲಪ್ಪ ಶಿರೋಳ, ಬಿ.ಕೆ. ಕೊಣ್ಣೂರ, ಬಾಬಾಗೌಡ ಪಾಟೀಲ, ನಾಗಪ್ಪ ಸನದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.