ಕಲ್ಪವೃಕ್ಷ ವಾಗಿ ಅರಳಲಿದೆ ಫ‌ಲದಾಯಕ ಗಣೇಶ


Team Udayavani, Sep 9, 2018, 5:10 PM IST

9-sepctember-27.jpg

ಹುಬ್ಬಳ್ಳಿ: ಪರಿಸರಸ್ನೇಹಿ ಗಣೇಶಮೂರ್ತಿ ಜತೆಗೆ ವೃಕ್ಷಾರೋಹಣ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಹೆಜ್ಜೆ ಇರಿಸಿದೆ. ತೆಂಗಿನಕಾಯಿಯಲ್ಲಿ ಗಣೇಶಮೂರ್ತಿ ರಚಿಸಲು ಸುಮಾರು 60 ಜನರಿಗೆ ತರಬೇತಿ ನೀಡಲಾಗಿದ್ದು, ತೆಂಗಿನಲ್ಲಿ ರಚಿಸಲಾದ 2,500ಕ್ಕೂ ಹೆಚ್ಚು ಗಣೇಶನನ್ನು ಮಾರಾಟ ಮಾಡಲು ಮುಂದಾಗಿದೆ.

ಈಗ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನಲ್ಲಿ ಮಾಡಿದ, ರಾಸಾಯನಿಕ ಬಣ್ಣಗಳನ್ನು ಬಳಸದ ಗಣೇಶಮೂರ್ತಿಗಳ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದು ಹೆಜ್ಜೆ ಮುಂದೆ ಹೋಗಿ ಗಣೇಶಮೂರ್ತಿಯ ಜತೆಗೆ ಭವಿಷ್ಯದಲ್ಲಿ ಒಂದು ತೆಂಗಿನ ಮರ ಬೆಳೆಸುವ ಮಹತ್ವದ ಪರಿಸರ ಸ್ನೇಹಿ ಕಾರ್ಯ ಕೈಗೊಂಡಿದೆ.

ಪರಸರಸ್ನೇಹಿ ಮಣ್ಣಿನ ಗಣೇಶಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಅವುಗಳನ್ನು ಪ್ರತಿಷ್ಠಾಪಿಸುವ ಜನರು ನಂತರ ನೀರಿನಲ್ಲಿ ವಿಸರ್ಜಿಸುತ್ತಾರೆ. ಆದರೆ, ತೆಂಗಿನಕಾಯಿಯಲ್ಲಿ ತಯಾರಾಗುವ ಗಣೇಶಮೂರ್ತಿ ಸಂಪ್ರದಾಯದಂತೆ ವಿಸರ್ಜನೆ ನಂತರ ಅದನ್ನು ಮೊಳಕೆ ಬರುವಂತೆ ಮಾಡಿ ಹೊಲ, ದೇವಸ್ಥಾನ ಅಥವಾ ಮನೆ ಆವರಣದಲ್ಲಿ ನೆಡಬಹುದಾಗಿದೆ. ಮಟ್ಟೆಕಾಯಿಯಲ್ಲಿ ಗಣೇಶನಮೂರ್ತಿ ಕೆತ್ತನೆ ಮಾಡಲಾಗುತ್ತದೆ. ಕಾಯಿ ಮೇಲ್ಭಾಗದಲ್ಲಿ ಯಾವುದೇ ಧಕ್ಕೆಯಾಗದಂತೆ ಮೂರ್ತಿ ರಚಿಸಲಾಗುತ್ತದೆ. ಇದರಿಂದ ತೆಂಗಿನಕಾಯಿಗೆ ನೀರು ಹಾಕುತ್ತ ಇದ್ದರೆ ಅದು ಮೊಳಕೆಯೊಡೆದು ಸಸಿಯಾಗಿ, ಮುಂದೆ ಕಲ್ಪವೃಕ್ಷವಾಗಿ ತೆಂಗಿನಕಾಯಿಗಳನ್ನು ನೀಡುತ್ತದೆ. ಅಲ್ಲದೇ ಪರಿಸರಕ್ಕೂ ತನ್ನದೇ ಕೊಡುಗೆ ನೀಡಲಿದೆ.

ಧಾರವಾಡದ ಕೆಲಗೇರಿಯ ಮಲ್ಲಪ್ಪ ಬಾವಿಕಟ್ಟಿ ಎಂಬುವರು ಹವ್ಯಾಸವಾಗಿ ತೆಂಗಿನಕಾಯಿಯಲ್ಲಿ ಗಣೇಶ, ಈಶ್ವರ ಸೇರಿದಂತೆ ಇನ್ನಿತರ ದೇವರ ಮೂರ್ತಿಗಳನ್ನು ರಚಿಸಿರುವುದನ್ನು ಗಮನಿಸಿದ ಗ್ರಾಮಾಭಿವೃದ್ಧಿ ಯೋಜನೆಯವರು ತಮ್ಮ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಈ ಕುರಿತು ತರಬೇತಿಗೆ ನಿರ್ಧರಿಸಿದರು. ಆರಂಭದಲ್ಲಿ ಕೆಲವರನ್ನು ಮಲ್ಲಪ್ಪ ಅವರ ಬಳಿ ಕೆತ್ತನೆ ತರಬೇತಿಗೆ ಕಳುಹಿಸಿದ್ದರು. ನಂತರ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಕಳೆದ ವರ್ಷ ಸುಮಾರು 30 ಜನರಿಗೆ ತರಬೇತಿ ನೀಡಲಾಗಿತ್ತು. ಈ ವರ್ಷ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ಸುಮಾರು 25-30 ಜನರಿಗೆ ತರಬೇತಿ ನೀಡಲಾಗಿದೆ. ಒಂದು ವಾರದ ತರಬೇತಿ ಪಡೆದ ಅನೇಕರು, ಸ್ವತಃ ಗಣೇಶಮೂರ್ತಿ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ.

ಒಬ್ಬರು ದಿನಕ್ಕೆ 4-5 ತೆಂಗಿನಕಾಯಿ ಗಣೇಶಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದು, ವಿಶೇಷವೆಂದರೆ ಈಶ್ವರನ ಮುಖದಲ್ಲಿಯೇ ಗಣೇಶಮೂರ್ತಿಯನ್ನು ಕೆತ್ತನೆ ಮಾಡಲಾಗುತ್ತದೆ. ಒಂದು ಗಣೇಶಮೂರ್ತಿಯನ್ನು 400ರೂ. ಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಸುಮಾರು 870 ತೆಂಗಿನಕಾಯಿ ಗಣೇಶಮೂರ್ತಿಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 2,500ಕ್ಕೂ ಹೆಚ್ಚು ಗಣೇಶಮೂರ್ತಿಗಳ ಮಾರಾಟದ ಗುರಿ ಹೊಂದಲಾಗಿದೆ. ಇದಕ್ಕಾಗಿ ಶಾಂತಾ ಗಡಕರ ಸೇರಿದಂತೆ ಅನೇಕರನ್ನೊಳಗೊಂಡ ಫ‌ಲದಾಯಕ ಗಣಪತಿ ಕೆತ್ತನೆಗಾರರ ಸಮಿತಿ ರಚಿಸಲಾಗಿದ್ದು, ಸಮಿತಿ ಮೂಲಕ ಮಾರಾಟ ಮಾಡಲಾಗುತ್ತದೆ. ಮುಂದಿನ ವರ್ಷ ಇದರ ಪ್ರಮಾಣ ಮೂರ್‍ನಾಲ್ಕು ಪಟ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. 

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಂತೆ ಪರಿಸರಸ್ನೇಹಿ ಆಗಿರಬೇಕು, ಗಣೇಶಮೂರ್ತಿ ಫ‌ಲದಾಯಕವೂ ಆಗಿರಬೇಕೆಂದು ಕಳೆದ ವರ್ಷದಿಂದ ತೆಂಗಿನಕಾಯಿಯಲ್ಲಿ ಗಣೇಶಮೂರ್ತಿ ಕೆತ್ತನೆ ತರಬೇತಿ-ಮಾರಾಟ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಯವರು ಈ ಬಾರಿ ತರಬೇತಿ ಪಡೆದಿದ್ದು, ಮುಂದಿನ ವರ್ಷ ಉಕದ ಅನೇಕ ಜಿಲ್ಲೆಗಳಲ್ಲಿ ತೆಂಗಿನ ಗಣೇಶಮೂರ್ತಿ ತಯಾರು ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಇದೇ ವರ್ಷವೇ ಸುಮಾರು 1 ಸಾವಿರ ತೆಂಗಿನ ಗಣೇಶಮೂರ್ತಿಗಳು ಬೇಕು ಎಂದು ಮೈಸೂರಿನಿಂದ ಬೇಡಿಕೆ ಬಂದಿದೆ. ಈ ಬಾರಿ ನೀಡಲು ಸಾಧ್ಯವಾಗದು. ಮುಂದಿನ ವರ್ಷದಿಂದ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮೂಲಕ ರಾಜ್ಯಾದ್ಯಂತ ಮಾರಾಟಕ್ಕೆ ಪೂಜ್ಯರ ಪ್ರೇರಣೆಯಾಗಿದೆ.
ದಿನೇಶ, ಜಿಲ್ಲಾ ನಿರ್ದೇಶಕ, ಗ್ರಾಮಾಭಿವೃದ್ಧಿ ಯೋಜನೆ 

ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

8-

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.