ಪರಿಸರ ಉಳಿವಿಗೆ ಒಂದಾಗಿ ಶ್ರಮಿಸಿ
Team Udayavani, Sep 21, 2018, 5:01 PM IST
ಧಾರವಾಡ: ಸಂಗೀತದ ಮಧುರ ನಾದವು ಗೊಂದಲವನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸುವಂತಹ ದೈವೀಕಲೆಯಾಗಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಜೆ.ಎಚ್. ಕುಲಕರ್ಣಿ ಹೇಳಿದರು. ಇಲ್ಲಿನ ಶ್ರೀನಗರದಲ್ಲಿರುವ ಪರಿಸರ ಭವನದಲ್ಲಿ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಹು-ಧಾ ನಾಗರಿಕ ಪರಿಸರ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದ್ಮಭೂಷಣ ಡಾ| ಪುಟ್ಟರಾಜ ಗವಾಯಿಗಳ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ, ಸಂಗೀತೋತ್ಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರದ ಉಳಿವಿಗೂ ನಾವೆಲ್ಲ ಜೊತೆಗೂಡಿ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಡಾ| ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ ವಿದ್ಯಾರ್ಥಿಗಳಿಗೆ ಬದುಕಲು ತೋರಿಸಿಕೊಟ್ಟಿದಲ್ಲದೆ, ಸಂಗೀತದ ಜ್ಞಾನ ಅವರಲ್ಲಿ ಬರುವಂತೆ ಪ್ರೇರಣೆ ನೀಡಿದ ಮಹಾನ್ ವ್ಯಕ್ತಿ. ಅಲ್ಲದೆ ಈಗ ಅವರ ಅನೇಕ ಶಿಷ್ಯರು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ ಎಂದರು. ಕಲಾವಿದ ಸದಾಶಿವ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ| ಸಾತಲಿಂಗಪ್ಪ ದೇಸಾಯಿ ಸಾಥ್ ನೀಡಿದರು. ಬಸವರಾಜ ಹಿರೇಮಠ ಸಂವಾದಿನಿ ಪ್ರಸ್ತುತಪಡಿಸಿದರೆ, ಅಕ್ಕಮಹಾದೇವಿ ಮಠ ಅವರ ವಯಲಿನ್ ಜುಗಲ್ಬಂದಿ ಗಮನ ಸೆಳೆಯಿತು.
ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು. ಪಂ| ಎಂ. ವೆಂಕಟೇಶಕುಮಾರ, ಡಾ| ವಿಲಾಸ ಕುಲಕರ್ಣಿ, ಪಂ|ಡಾ| ಶಾಂತಾರಾಮ ಹೆಗಡೆ, ಪಂ| ಶಿವಾನಂದ ತರರ್ಲ ಘಟ್ಟ, ಪಂ| ರಘುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ್, ಉದಯಕುಮಾರ್ ದೇಸಾಯಿ, ನಿಜಗುಣಿ ರಾಜಗುರು, ಶಾಂತವೀರ ಬೆಟಗೇರಿ, ಅನಿಲ ಅಂಗಡಿ, ಆರತಿ ಪಾಟೀಲ, ಡಾ| ಎ.ಎಲ್. ದೇಸಾಯಿ, ಗಂಗಾವತಿಯ ನಾಗನಗೌಡ ಪಾಟೀಲ, ಪ್ರತಿಷ್ಠಾನ ಸದಸ್ಯ ಬಸವರಾಜ ಹಿರೇಮಠ, ರಮೇಶ ಕೋಲಕುಂದ, ಅಯ್ಯಪ್ಪಯ್ಯ ಹಲಗಲಿಮಠ, ಡಾ| ಗುರುಬಸವ ಹಿರೇಮಠ, ಪಂ| ಬಸವರಾಜ ಎಡಿಗೊಂಡ ಇದ್ದರು. ಕಲಾವಿದರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಡಾ| ಅರ್ಜುನ ವಠಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ
ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್
ರಾಜ್ಯದಲ್ಲಿ ಎನ್ಕೌಂಟರ್ ಕಾನೂನು ಜಾರಿ ಅವಶ್ಯ: ಸಂತೋಷ್ ಲಾಡ್
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ