ಹು-ಧಾ ನಗರ ಸಾರಿಗೆ ಸದ್ಯದಲ್ಲೇ ನೇಪಥ್ಯಕ್ಕೆ 


Team Udayavani, Oct 21, 2018, 5:05 PM IST

21-october-21.gif

ಹುಬ್ಬಳ್ಳಿ: ಆರು ದಶಕಗಳಿಂದ ಅವಳಿ ನಗರದ ಸಂಪರ್ಕ ಕೊಂಡಿಯಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್‌ಗಳ ಸೇವೆ ಇನ್ನು ನೆನಪು ಮಾತ್ರ. ತ್ವರಿತ ಬಸ್‌ ಸಾರಿಗೆ (ಬಿಆರ್‌ಟಿಎಸ್‌) ಸೇವೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೊಳ್ಳುತ್ತಿದ್ದಂತೆ ಈ ಬಸ್‌ಗಳ ಸೇವೆ ನೇಪಥ್ಯಕ್ಕೆ ಸರಿಯಲಿದೆ.

ಶೇ.78 ಜನರು ‘ನಗರ ಸಾರಿಗೆ’ ನೆಚ್ಚಿಕೊಂಡಿದ್ದರು. ಬೆಳಗ್ಗೆ 4 ಗಂಟೆಯಿಂದ ರಸ್ತೆಗಿಳಿಯುವ ಬಸ್‌ಗಳು ಮಧ್ಯರಾತ್ರಿ 12:45 ರವರೆಗೂ ಅವಳಿ ನಗರದ ಜನರಿಗೆ ಸಾರಿಗೆ ಸೇವೆ ನೀಡುತ್ತಿವೆ. 108 ಬಸ್‌ ರದ್ದು: ಬಿಆರ್‌ಟಿಎಸ್‌ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಕಾಲ ಸಮೀಪಿಸುತ್ತಿದೆ. ಹಿಂದೆ ನಿರ್ಧರಿಸಿದಂತೆ ನ. 1ಕ್ಕೆ ಬಸ್‌ ಸಂಚಾರ ಆರಂಭವಾದರೆ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿರುವ 108 ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಿಲ್ಲಿಸಲಿವೆ. ಈ ಬಸ್‌ಗಳ ಮಾರ್ಗ ಪರವಾನಗಿ ಆಧಾರದ ಮೇಲೆ ಬಿಆರ್‌ಟಿಎಸ್‌ ಬಸ್‌ಗಳು ಸಂಚಾರ ಮಾಡಲಿವೆ.

ನಿತ್ಯ 30 ಸಾವಿರ ಕಿಮೀ: 108 ಬಸ್‌ಗಳು ನಿತ್ಯವೂ ಹು-ಧಾ ನಡುವೆ ಸುಮಾರು 660 ಟ್ರಿಪ್‌ ಗಳ ಸೇವೆ ನೀಡುತ್ತಿವೆ. ಪ್ರಯಾಣಿಕರ ಅಗತ್ಯತೆ ಹಾಗೂ ಬೇಡಿಕೆ ಮೇರೆಗೆ 100, 101, 102, 103, 104, 105 ಹೆಸರಿನ ಮೇಲೆ ಬಸ್‌ ಸೇವೆ ನೀಡಲಾಗುತ್ತಿದೆ. 660 ಟ್ರಿಪ್‌ ಗಳು ಮೂಲಕ ಪ್ರತಿನಿತ್ಯ 108 ಬಸ್‌ಗಳು ಸರಾಸರಿ 30 ಸಾವಿರ ಕಿಮೀ ಸಂಚಾರ ಮಾಡುತ್ತಿವೆ. ಅವಳಿ ನಗರದ ನಡುವೆ ಪ್ರತಿ ಒಂದೂವರೆ ನಿಮಿಷಕ್ಕೊಂದು ಬಸ್‌ ಸಂಚರಿಸುತ್ತಿದೆ. ಹಿಂದೆ ಇದಕ್ಕಿಂದ ಹೆಚ್ಚಿನ ಬಸ್‌ಗಳು ಅವಳಿ ನಗರದ ನಡುವೆ ಸಂಚಾರ ಮಾಡುತ್ತಿದ್ದವು.

ಫೀಡರ್‌ ಸೇವೆಗೆ ಬಳಕೆ: ಅವಳಿ ನಗರ ಸಾರಿಗೆ ವ್ಯವಸ್ಥೆಯಲ್ಲಿರುವ 108 ಬಸ್‌ಗಳ ಪೈಕಿ ಒಂದಿಷ್ಟು ವಾಹನಗಳು ಗುಜರಿ ಸಾಲಿಗೆ ಸೇರಲಿದ್ದು, ಉತ್ತಮ ಬಸ್‌ಗಳನ್ನು ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆಗೆ ಪೂರಕವಾಗಿಫೀಡರ್‌ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಗಟ್ಟಿಮುಟ್ಟಾದ ಬಸ್‌ಗಳನ್ನು ಗುರುತಿಸಿ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿದೆ.

ಪ್ರತ್ಯೇಕ ಘಟಕವೂ ಸ್ಥಗಿತ: ಅವಳಿ ನಗರದ ಸಾರಿಗೆ ವ್ಯವಸ್ಥೆ ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಬಸ್‌ ನಿಲ್ದಾಣ (ಸಿಬಿಎಸ್‌) ಎಂದು ಆರಂಭಿಸಲಾಯಿತು. ಆಗ ಪ್ರತ್ಯೇಕವಾಗಿ 19 ಬಸ್‌ಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಯಿತು. ಗ್ರಾಮೀಣ ಘಟಕ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. 1994ರಲ್ಲಿ ಪ್ರತ್ಯೇಕ ನಗರ ಸಾರಿಗೆ ಘಟಕ-2 ಸ್ಥಾಪನೆ ಮಾಡಲಾಯಿತು. ಅಲ್ಲಿಂದ ಹು-ಧಾ ನಗರ ಸಾರಿಗೆ ಸೇವೆಗೆ ಪ್ರತ್ಯೇಕ ಘಟಕದ ಮೂಲಕ ಸೇವೆ ನೀಡಲಾರಂಭಿಸಿತು. ಸುದೀರ್ಘ‌ 24 ವರ್ಷಗಳ ಕಾಲ ಪರಿಣಾಮಕಾರಿ ಸೇವೆ ನೀಡಿದ ಹೊಸೂರಿನಲ್ಲಿರುವ 2ನೇ ನಗರ ಘಟಕವೂ ಇದೀಗ ಸ್ಥಗಿತಗೊಳ್ಳಲಿದೆ. ಘಟಕದ ಕಟ್ಟಡ ತೆರವುಗೊಳಿಸಿ ವಾಣಿಜ್ಯ ಉದ್ದೇಶ ಅಥವಾ ಖಾಸಗಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗೆ ಬಳಸುವ ಯೋಜನೆಯಿದೆ.

ಹೆಚ್ಚಲಿದೆ ಸಾರಿಗೆ ಸೇವೆ
ವಾಯವ್ಯ ಸಾರಿಗೆ ಸಂಸ್ಥೆಯ 108 ಬಸ್‌ಗಳ 660 ಟ್ರಿಪ್‌ ಗಳಿಂದ ಸರಾಸರಿ 1.5 ನಿಮಿಷಕ್ಕೊಂದು ಬಸ್‌ ಅವಳಿ ನಗರ ಮಧ್ಯೆ ಸಾರಿಗೆಗೆ ಲಭ್ಯವಿದೆ. ಇದೀಗ ಬಿಆರ್‌ಟಿಎಸ್‌ನ 130 ಬಸ್‌ಗಳು ಇರುವುದರಿಂದ ಬಸ್‌ನ ಲಭ್ಯತೆ ಸರಾಸರಿ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಪ್ರತ್ಯೇಕ ಕಾರಿಡಾರ್‌ ವ್ಯವಸ್ಥೆ, ಸಮರ್ಪಕ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಇರುವುದರಿಂದ ತ್ವರಿತ ಸಾರಿಗೆ ಜನರಿಗೆ ದೊರೆಯಲಿದೆ. ರಸ್ತೆ ರೈಲು ಎಂದು ಕರೆಯುತ್ತಿದ್ದ ಆರ್ಟಿಕ್ಯುಲೇಟೆಡ್‌ ಬಸ್‌ ಗಳು ಕೂಡ ರಸ್ತೆಗಿಳಿಯಲಿವೆ.

ಹೀಗಿದೆ ಇತಿಹಾಸ
ಅವಳಿ ನಗರ ಸಾರಿಗೆ ಸೇವೆಗಾಗಿ ಅಂದಿನ ಮೈಸೂರು ರಾಜ್ಯ ಸಾರಿಗೆ ಸಂದರ್ಭದಲ್ಲಿ 120 ಬಸ್‌ಗಳಿಗೆ ಸಾರಿಗೆ ಇಲಾಖೆಯಿಂದ ಮಾರ್ಗ ಪರವಾನಗಿ ನೀಡಲಾಗಿತ್ತು. ಹುಬ್ಬಳ್ಳಿ ಹಾಗೂ ಧಾರವಾಡ ನಗರದಿಂದ ಪ್ರತ್ಯೇಕವಾಗಿ ಬಸ್‌ಗಳ ಸಂಚಾರ ಇತ್ತು. ದಿನದ 24 ಗಂಟೆಯೂ ಸಾರಿಗೆ ದೊರೆಯುತ್ತಿತ್ತು. 1983 ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಿಂದ ಮಧ್ಯರಾತ್ರಿಯ ನಗರ ಸಾರಿಗೆ ರದ್ದು ಪಡಿಸಲಾಯಿತು. 1977ರಲ್ಲಿ ಅವಳಿ ನಗರದ ನಡುವೆ 90 ಪೈಸೆ ಟಿಕೆಟ್‌ ದರವಿತ್ತು. ರಸ್ತೆ ರೈಲು (ಆರ್ಟಿಕ್ಯುಲೇಟೆಡ್‌ ) ಬಸ್‌ ಗಳಿದ್ದವು. ಇತ್ತೀಚಿನ ವರ್ಷಗಳಲ್ಲಿ ಸರಕಾರದ ತಪ್ಪು ನಿರ್ಧಾರಗಳಿಂದ ನಗರ ಸಾರಿಗೆ ಸಾಕಷ್ಟು ನಷ್ಟಕ್ಕೆ ಜಾರಿದೆ ಎಂದು ನಿವೃತ್ತ ಸಿಬ್ಬಂದಿಯೊಬ್ಬರು ಇತಿಹಾಸ ಮೆಲಕು ಹಾಕುತ್ತಾರೆ.

ಹಿಂದಿನ ನಿರ್ಧಾರದಂತೆ ಅವಳಿ ನಗರದ ನಡುವೆ ಓಡಾಡುತ್ತಿರುವ ವಾಯವ್ಯ ಸಾರಿಗೆ ಬಸ್‌ಗಳನ್ನು ಬಿಆರ್‌ಟಿಎಸ್‌ ಸಾರಿಗೆ ಸೇವೆಗೆ ಪೂರಕವಾಗಿ ಫೀಡರ್‌ ಸೇವೆಗೆ ಬಳಸಿಕೊಳ್ಳಲಾಗುವುದು. ಸೇವೆಗೆ ಉತ್ತಮವಾಗಿರುವ ಬಸ್‌ ಗಳಿಗೆ ಈಗಾಗಲೇ ಜಿಪಿಎಸ್‌ ಕೂಡ ಅಳವಡಿಸಲಾಗಿದೆ.
ರಾಜೇಂದ್ರ ಚೋಳನ್‌,
ಎಂಡಿ, ವಾಕರಸಾಸಂ

ಹೇಮರಡ್ಡಿ ಸೈದಾಪುರ 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.