ಬಡ ಕಲಾವಿದರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ: ನಿಂಬಣ್ಣವರ
Team Udayavani, Nov 16, 2018, 5:31 PM IST
ಕಲಘಟಗಿ: ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ದುರ್ಬಲ ಮತ್ತು ಬಡ ಕಲಾವಿದರಿಗೆ ವಿಳಂಬ ಮಾಡದೇ ಮಾಸಾಶನ ಶಾಸನ ಮತ್ತು ಇತರೇ ಸೌಲಭ್ಯ ಒದಗಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಹಿರೇಹೊನ್ನೀಹಳ್ಳಿಯಲ್ಲಿ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯೋತ್ಸವ, ಕನ್ನಡ ನಾಡು-ನುಡಿ ಚಿಂತನಾ ಸಮಾವೇಶ ಹಾಗೂ ಶ್ರೀ ಗಜಾನನ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಸಹದೇವಪ್ಪ ಧನಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ ದೀಪ ಬೆಳಗಿಸಿದರು. ಸಮಾವೇಶಕ್ಕೆ ಕನ್ನಡ-ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಚಾಲನೆ ನೀಡಿದರು. ಕೆಎಂಎಫ್ ನಿರ್ದೇಶಕ ವೈ.ಬಿ. ದಾಸನಕೊಪ್ಪ ಮಾತನಾಡಿದರು. ಪ್ರಶಸ್ತಿ ಪ್ರದಾನ: ಶಿವಲಿಂಗಪ್ಪ ಜೋಡಳ್ಳಿ, ಶಾಸಕ ಸಿ.ಎಂ. ನಿಂಬಣ್ಣವರ, ಕಿರಣಗೌಡ್ರ ಪಾಟೀಲಕುಲಕರ್ಣಿ, ಬಿ.ಡಿ. ಹಿರೇಗೌಡರ, ಪದ್ಮಾಕ್ಷಿ ಸೋಮಲಿಂಗ ಒಡೆಯರ, ಮೋಹನ ಬಾಂಬೂಲೆ, ದ್ಯಾಮಣ್ಣ ಬಡಿಗೇರ, ಚಂದ್ರಶೇಖರ ಕುಸುಗಲ್, ಎಂ.ಆರ್. ತೋಟಗಂಟಿ, ಅಣ್ಣಪ್ಪ ಓಲೇಕಾರ, ಬಸವರಾಜ ಮಾದಿ, ಗುರುಸಿದ್ಧಪ್ಪ ಬಡಿಗೇರ, ಪರಮಾನಂದ ಒಡೆಯರ, ಪ್ರಭು ಕಿಚಡಿ, ಸಿದ್ರಾಮಪ್ಪ ಶಿವಳ್ಳಿ, ಪ್ರಭುಲಿಂಗ ರಂಗಾಪುರ, ವಿರೂಪಾಕ್ಷಪ್ಪ ಶಿರಕೋಳ, ಜಯವಂತ ಬಾಂಬೂಲೆ, ಸಹದೇವಪ್ಪ ಧನಿಗೊಂಡ, ಶ್ರೀ ಗ್ರಾಮದೇವಿ ಕೋಲಾಟದ, ಜಾನಪದ ಕಲಾ ಸಂಘದ ಕಲಾವಿದರಿಗೆ ಶ್ರೀ ಗಜಾನನ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಭಾಕರ ನಾಯಕ, ಗದಿಗೆಪ್ಪ ಕಳ್ಳಿಮನಿ, ಸಿದ್ದಪ್ಪ ಪಟ್ಟಣಶೆಟ್ಟಿ, ಮಂಜುನಾಥಗೌಡ್ರ ಮುರಳ್ಳಿ, ಶಂಕ್ರವ್ವ ಮಡ್ಲಿ, ಚೆನ್ನಪ್ಪ ಕೊಟಗೊಣಸಿ, ಶಂಕ್ರಣ್ಣ ಮನಗುಂಡಿ, ವೈ.ಎನ್. ರಾಮನಾಳ, ಬಸವರಾಜ ಕೆಲಗೇರಿ, ಪ್ರಭು ರಾಮನಾಳ, ನಿಂಗಪ್ಪ ಬೆಳ್ಳಿವಾಲಿ, ಸದಾಶಿವ ರಾಮನಾಳ, ಷಣ್ಮುಖಪ್ಪ ತಾರಿಹಾಳ, ಷಣ್ಮುಖಪ್ಪ ಬಡಿಗೇರ, ಶಂಕರಲಿಂಗ ಕೆಲಗೇರಿ, ಅಡಿವೆಪ್ಪ ಬಡಿಗೇರ, ವಿಜಯ ಧನಿಗೊಂಡ, ಮಲ್ಲೇಶಪ್ಪ ರಾಮನಾಳ, ಹರೀಶ ಚಳಮಟ್ಟಿ, ರಫಿಕ ಸುಂಕದ ಇದ್ದರು. ಪ್ರಭು ಕಿಚಡಿ, ಮಹೇಶ ಹಡಪದ, ಮಂಜುನಾಥ ಧನಿಗೊಂಡ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಕು| ಪಲ್ಲವಿ ಬಳ್ಳಾರಿ, ಸಂತೋಷ ಹಾಗೂ ಮೃತ್ಯುಂಜಯ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದ್ಯಾಮಣ್ಣ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಗುರುಸಿದ್ದಪ್ಪ ಬಡಿಗೇರ ನಿರೂಪಿಸಿದರು. ಜಿ.ಎಸ್. ಬಡಿಗೇರ ಸ್ವಾಗತಿಸಿದರು. ಉಮೇಶ ನೆನಕ್ಕಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ