ರಾಗಿ ಮುದ್ದೆ ಬಿಟ್ಟು ಜೋಳದ ರೊಟ್ಟಿ ತಿಂದ ದೇವೇಗೌಡ!
Team Udayavani, Nov 19, 2018, 2:15 PM IST
ಧಾರವಾಡ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ರಾಗಿ ಮುದ್ದೆಗೂ ಅವಿನಾಭಾವ ಸಂಬಂಧ. ದೇವೇಗೌಡರನ್ನು ಟೀಕಿಸುವವರು ಮುದ್ದೆ ಜೋತೆ ಸೇರಿಸಿಕೊಂಡೇ ಟೀಕಿಸುತ್ತಾರೆ. ಹೊಗಳುವವರೂ ಗೌಡ್ರು ರಾಗಿ ಮುದ್ದೆಯಷ್ಟೇ ಗಟ್ಟಿ ಎಂದು ಹೊಗಳಿದ್ದುಂಟು. ಆದರೆ ದೇವೇಗೌಡರು ರಾಗಿ ಮುದ್ದೆ ಬಿಟ್ಟು ಉತ್ತರ ಕರ್ನಾಟಕದ ಅಪ್ಪಟ ದೇಶಿ ಆಹಾರ ಜೋಳದ ರೊಟ್ಟಿ ಸವಿದಿದ್ದಾರೆ.
ರವಿವಾರ ಧಾರವಾಡಕ್ಕೆ ಬಂದಿದ್ದ ದೇವೇಗೌಡರು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರು. ಗೌಡ್ರು ಬರುತ್ತಾರೆ
ಎಂದಾಕ್ಷಣ ಕೊನರಡ್ಡಿ ಅವರು ರಾಗಿ ಮುದ್ದೆ ಸಜ್ಜುಗೊಳಿಸಿದ್ದರು. ಆದರೆ ದೇವೇಗೌಡರು ಮಾತ್ರ ರಾಗಿ ಮುದ್ದೇನ ಸೈಲೆಂಟಾಗಿ ಸೈಡ್ಗೆ ಸರಿಸಿ ಬಿಸಿ ಬಿಸಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ, ಕೆನೆ ಮೊಸರು ಸವಿದರು. ಇದಲ್ಲದೇ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಒಂದು ತಿಂಗಳೊಳಗೆ ದೊಡ್ಡ ಸ್ಥಾನ ನೀಡಲಾಗುವುದು. ಯಾವ ಹುದ್ದೆ ನೀಡಬೇಕು ಎಂಬುದು ತೀರ್ಮಾನವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ