ಹಣವೂ ಹೋಯ್ತು, ಪ್ರಾಣವೂ ಹೋಯ್ತು
Team Udayavani, Mar 22, 2019, 11:18 AM IST
ಧಾರವಾಡ: ಕಾಂಪ್ಲೆಕ್ಸ್ ಧರಾಶಾಹಿಯಾಗಿ 13 ಜನರನ್ನು ಬಲಿ ಪಡೆದಿದ್ದು ಆಯಿತು. ಆದರೆ, ಈ ಕಾಂಪ್ಲೆಕ್ಸ್ನಲ್ಲಿ ಮಳಿಗೆ ಕೊಂಡ ಕುಟುಂಬಗಳ ಸ್ಥಿತಿ ಏನು ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಈಗಾಗಲೇ ಎಲ್ಲಾ ಬಗೆಯ ಕಚೇರಿಗಳು, ಹೋಟೆಲ್, ಔಷಧಿ ಮಳಿಗೆ, ಇಂಟರ್ನೆಟ್ ಕೇಂದ್ರಗಳು ಕಾರ್ಯ ಆರಂಭಿಸಿದ್ದವು. ಇವರೆಲ್ಲರೂ ಕೂಡ ನೇರವಾಗಿ ಮಾಲೀಕರಿಗೆ ಹಣ ಕೊಟ್ಟು ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು.
ನೆಲಮಹಡಿಯಲ್ಲಿದ್ದ ಹೋಟೆಲ್ ಮಾಲೀಕರು ತಿಂಗಳಿಗೆ 6 ಸಾವಿರ ರೂ. ನಂತೆ ಬಾಡಿಗೆ ಕಟ್ಟುತ್ತಿದ್ದು, 10 ತಿಂಗಳ ಅಡ್ವಾನ್ಸ್ ಹಣ ಕೊಟ್ಟಿದ್ದರು ಎನ್ನಲಾಗಿದೆ. ಅದೇ ರೀತಿ ಅಪೋಲೋ ಔಷಧಿ ಮಳಿಗೆ ಕಂಪನಿ ನೇರವಾಗಿ ಮಾಲೀಕರ ಜೊತೆಗೆ ಒಪ್ಪಂದ ಮಾಡಿಕೊಂಡು ಮಳಿಗೆಯನ್ನು ಬಾಡಿಗೆಗೆ ಪಡೆದುಕೊಂಡಿತ್ತು. ಜಿಲ್ಲಾಡಳಿತಕ್ಕೆ ಸಿಕ್ಕ ಮಾಹಿತಿ ಅನ್ವಯ ನೆಲ ಮತ್ತು ಮೊದಲ ಮಹಡಿಯಲ್ಲಿನ 35ಕ್ಕೂ ಹೆಚ್ಚು ಮಳಿಗೆಗಳು ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದವು ಎನ್ನಲಾಗಿದೆ. ಖರೀದಿ ಸತ್ಯವೇ?: ಕೆಲವರು ಹೇಳುವಂತೆ ಆಯಾ ಮಹಡಿಯಲ್ಲಿನ ಮಳಿಗೆಗಳನ್ನು ಚದರಡಿ ಆಧಾರದಲ್ಲಿ ಖರೀದಿ ಕೂಡ ಮಾಡಿದ್ದರು ಎನ್ನಲಾಗಿದೆ. ಪ್ರತಿ ಚದುರಡಿಗೆ 6 ಸಾವಿರ ರೂ.ನಂತೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಈ ಕುರಿತು ಅಂಗಡಿ ಕೊಂಡುಕೊಂಡವರಾರೂ ಜಿಲ್ಲಾಡಳಿತಕ್ಕೆ ಈವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಕೆಲ ಮಳಿಗೆಗಳನ್ನು ಕೊಂಡುಕೊಂಡು ಇತರರಿಗೆ ಭೋಗ್ಯಕ್ಕೆ ಕೊಟ್ಟಿದ್ದರು ಎನ್ನಲಾಗಿದೆ. ನಾಲ್ಕುಕ್ಕೂ ಹೆಚ್ಚು ಮಳಿಗೆಗಳನ್ನು ಮಾಲೀಕರಿಂದ ಖರೀದಿಸಿ ಬಾಡಿಗೆಗೆ ನೀಡಿಲಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ಬೆವರು ಹರಿಸಿ ದುಡಿದು ಗಳಿಸಿದ ಹಣವನ್ನು ಕೊಟ್ಟು ಮಳಿಗೆ ಖರೀದಿಸಿದ ಮಧ್ಯಮ ವರ್ಗದವರ ಹಣವೂ ಹೋಯಿತು, ಪ್ರಾಣವೂ ಹೋದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು