ಔಷಧ ಮಾರಾಟ ಕ್ಷೇತ್ರ ಇನ್ನಷ್ಟು ಸುಧಾರಿಸಬೇಕು; ಬೆಲೆ ಕೈಗೆಟಕುವಂತಿರಲಿ


Team Udayavani, Mar 25, 2017, 3:50 AM IST

24-PTI-12.jpg

ಭಾರತದಲ್ಲಿ ಔಷಧಗಳ ಬೆಲೆ ತೌಲನಿಕವಾಗಿ ಇತರ ದೇಶಗಳಿಗಿಂತ ಕಡಿಮೆ ಎಂಬುದು ನಿಜ. ಆದರೆ ಇಲ್ಲಿನ ಜನರ ಆದಾಯ ಮಟ್ಟ, ಆರೋಗ್ಯ ಸ್ಥಿತಿ, ಜೀವನ ಮಟ್ಟಗಳನ್ನು ಗಮನದಲ್ಲಿ ಇರಿಸಿಕೊಂಡು ಔಷಧ ಮಾರಾಟ ಕ್ಷೇತ್ರದಲ್ಲಿ ಸರಕಾರ ಇನ್ನಷ್ಟು ಜನೋಪಯೋಗಿ ಸುಧಾರಣೆ ತರಬೇಕಾಗಿದೆ.

ಸ‌ಗಟು ಬೆಲೆ ಸೂಚ್ಯಂಕದಲ್ಲಿ ಬದಲಾವಣೆಗಳಿಗೆ ಅನುಗುಣವಾಗಿ ಬೆಲೆಯನ್ನು ಹೆಚ್ಚಿಸುವ ಔಷಧ ಮಾರಾಟಗಾರ ಕಂಪೆನಿಗಳ ಬೇಡಿಕೆಗೆ ಕೇಂದ್ರ ಸರಕಾರ ಸಮ್ಮತಿ ನೀಡಿರುವುದರಿಂದ ಕೆಲವಾರು ಅಗತ್ಯ ಔಷಧಗಳು ಏಪ್ರಿಲ್‌ 1ರಿಂದ ಶೇ.2ರಷ್ಟು ದುಬಾರಿಯಾಗಲಿವೆ. ರಾಷ್ಟ್ರೀಯ ಪಟ್ಟಿಯಲ್ಲಿರುವ 875 ಔಷಧಗಳ ಬೆಲೆಯನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ಪ್ರಾಧಿಕಾರದ ಮೂಲಕ ನೇರವಾಗಿ ನಿಯಂತ್ರಿಸುತ್ತಿದ್ದು, ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಇದು ಪ್ರತಿವರ್ಷವೂ ಏರಿಳಿಯುತ್ತಿರುತ್ತದೆ. ಇದರ ಪರಿಣಾಮವಿದು.

ಕಳೆದ ಮಾರ್ಚ್‌ 8ರಂದು ರಾಷ್ಟ್ರೀಯ ಔಷಧ ಪ್ರಾಧಿಕಾರವು 54 ಅವಶ್ಯಕ ಔಷಧಗಳ ಬೆಲೆಧಿಯನ್ನು ಶೇ.55ರಷ್ಟು ಇಳಿಸಿತ್ತು. ಆ ಬಳಿಕ ಹೃದ್ರೋಗ ಚಿಕಿತ್ಸೆಯಲ್ಲಿ ಉಪಯೋಗಿಸುವ ಸ್ಟೆಂಟ್‌ ಮಾರಾಟ ಬೆಲೆಯ ಗರಿಷ್ಠ ಮಿತಿ ಪ್ರಕಧಿಟಿಧಿಸಿತ್ತು. ಮಾರ್ಚ್‌ 2016ರಿಂದ ಈಚೆಗೆ ಕೆಲವು ಪ್ರಮುಖ ಕ್ಯಾನ್ಸರ್‌ ಔಷಧಗಳಲ್ಲಿ ಶೇ.86ಧಿರಷ್ಟು, ಮಧುಧಿಮೇಹ ಔಷಧಧಿಗಳಲ್ಲಿ ಶೇ.42ರಷ್ಟು ಮತ್ತು ಹೃದ್ರೋಗ ಸಂಬಂಧಿ ಔಷಧಗಳಲ್ಲಿ ಶೇ.55ರಷ್ಟು ಬೆಲೆ ಇಳಿಕೆಯಾಗಿದೆ. ಈಗ ಏಪ್ರಿಲ್‌ 1ರಿಂದ ಜಾರಿಯಾಗಲಿರುವ ಅಲ್ಪ ಏರಿಕೆಯಿಂದ ಸಂಬಂಧಿತ ಔಷಧಗಳನ್ನು ನಿಯಮಿತವಾಗಿ ಉಪಯೋಗಿಸುತ್ತಿರುವವರ ಜೇಬಿಗೆ ತುಸು ಹೆಚ್ಚುವರಿ ಹೊರೆ ಬೀಳುತ್ತದೆ.

ದೇಶದಲ್ಲಿ ಸದ್ಯಕ್ಕೆ 875 ಅವಶ್ಯಕ ಔಷಧಗಳ ಮಾರಾಟ ಬೆಲೆಯನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ಪ್ರಾಧಿಕಾರದ ಮೂಲಕ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ. ಸಗಟು ಮಾರಾಟ ಸೂಚ್ಯಂಕಕ್ಕೆ ಅನುಗುಣವಾಗಿ ಅವುಗಳ ಬೆಲೆಯನ್ನು ಏರಿಳಿಸುತ್ತದೆ. ಅಗತ್ಯ ಔಷಧಗಳ ಬೆಲೆಗಳು ತೀರಾ ದುಬಾರಿಯಾಗಿದ್ದು, ಆ ಕಾರಣದಿಂದ ಜನರಿಗೆ ಹೊರೆಯುಂಟಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ. ಮೂಲಭೂತ ಹಕ್ಕಾಗಿರುವ ಉತ್ತಮ ಆರೋಗ್ಯ ಸೇವೆಯನ್ನು ಇದು ಖಾತರಿಪಡಿಸುತ್ತದೆ.
ಅಮೆರಿಕ, ಯುರೋಪ್‌ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಔಷಧ ಬೆಲೆಗಳು ಸಾಕಷ್ಟು ಕಡಿಮೆಯೇ ಎಂಬುದು ನಿಜ. ಅದನ್ನು ಜನರ ಕೈಗೆಟಕುವ ಮಟ್ಟದಲ್ಲಿಯೇ ಇರಿಸಲು ಸರಕಾರವೂ ಯೋಗ್ಯ ಕ್ರಮಗಳನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೂ, ಮಧುಮೇಹ, ಕ್ಯಾನ್ಸರ್‌, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಭಾರತೀಯರಲ್ಲಿ ನಡುವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಪ್ರಮಾಣವನ್ನು ಗಮನಿಸಿದರೆ ಈ ಔಷಧಗಳು ಇನ್ನಷ್ಟು ಸುಲಭ ದರದಲ್ಲಿ ಲಭ್ಯವಾಗಬೇಕಾಗಿದೆ. ಇದಲ್ಲದೆ, ಒಂದೇ ಆಕರ ಔಷಧ ದ್ರವ್ಯವನ್ನು ಹೊಂದಿರುವ ವಿವಿಧ ಕಂಪೆನಿಗಳ ಉತ್ಪನ್ನಗಳ ನಡುವೆ ಇರುವ ಬೆಲೆ ವ್ಯತ್ಯಾಸವೂ ಗಮನಿಸಬೇಕಾದ ವಿಚಾರ. ಬಹುತೇಕ ಔಷಧಗಳನ್ನು ತಯಾರಿಸಿ ಮಾರಾಟ  ಮಾಡುತ್ತಿರುವುದು ಅಥವಾ ಅಂತಹ ಮೂಲ ಔಷಧ ದ್ರವ್ಯಗಳ ಪೇಟೆಂಟನ್ನು ಹೊಂದಿರುವುದು ವಿದೇಶೀ ಕಂಪೆನಿಗಳು ಎಂಬುದು ಇದಕ್ಕೆ ಮೂಲ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಸ್ವಿಸ್‌ ಮೂಲದ ಔಷಧ ತಯಾರಕ ಕಂಪೆನಿಯೊಂದು ಸ್ತನ ಕ್ಯಾನ್ಸರ್‌ಗೆ ತಾನು ಪೇಟೆಂಟ್‌ ಹೊಂದಿರುವ ಔಷಧವನ್ನು ಭಾರತದಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದರ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆ ಒಡ್ಡಿದ್ದನ್ನು ಸ್ಮರಿಸಬಹುದಾಗಿದೆ. ಸರಕಾರ ಈಚೆಗೆ ಹೃದ್ರೋಗ ಚಿಕಿತ್ಸೆಯ ಸ್ಟೆಂಟ್‌ಗಳ ಗರಿಷ್ಠ ಮಾರಾಟ ಬೆಲೆ ನಿಗದಿ ಪಡಿಸುವುದಕ್ಕೆ ಮುನ್ನ ಅವುಗಳ ಬೆಲೆ ಲಕ್ಷದವರೆಗೂ ಇರುತ್ತಿತ್ತು.

ಈ ದೃಷ್ಟಿಯಿಂದ ಸರಕಾರ ಆವಶ್ಯಕವೆಂದು ಪರಿಗಣಿಸಬಹುದಾದ ಇನ್ನಷ್ಟು ಔಷಧಗಳ ಬೆಲೆ ನಿಯಂತ್ರಣವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳಬೇಕಾಗಿದೆ ಹಾಗೂ ಅವು ಜನಸಾಮಾನ್ಯರ ಕೈಗೆ ಯಾವಾಗಲೂ ಎಟಕುವಂತೆ ನೋಡಿಕೊಳ್ಳಬೇಕಾಗಿದೆ. ತೌಲನಿಕವಾಗಿ ಇತರ ದೇಶಗಳಿಗಿಂತ ಭಾರತದಲ್ಲಿ ಔಷಧಗಳ ಬೆಲೆ ಕಡಿಮೆ ಇದೆ ನಿಜ. ಆದರೆ, ಭಾರತೀಯರ ಜೀವನ ಮಟ್ಟ, ಆದಾಯ ಮಟ್ಟ ಮತ್ತು ಆರೋಗ್ಯ ಸ್ಥಿತಿಗತಿಗಳನ್ನು ಗಮನಕ್ಕೆ ತೆಗೆದುಕೊಂಡು ಸರಕಾರ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮ ಇದು. ಇದರ ಜತೆಗೆ, ವಿವಿಧ ರಾಜ್ಯಗಳಲ್ಲಿ ಔಷಧಗಳ ಬೆಲೆ ಬೇರೆ ಬೇರೆ ಇರುವುದು, ಒಂದೇ ಆಕರ ದ್ರವ್ಯದ ಔಷಧಕ್ಕೆ ಬೇರೆ ಬೇರೆ ಕಂಪೆನಿಗಳ ಬೆಲೆ ಬೇರೆ ಬೇರೆ ಆಗಿರುವುದು ಅಥವಾ ತೀವ್ರ ವ್ಯತ್ಯಾಸ, ನಕಲಿ ಔಷಧಗಳ ಹಾವಳಿ, ವಿದೇಶೀ ಕಂಪೆನಿಗಳ ಲಾಭಕೋರತನ ಇತ್ಯಾದಿಗಳಿಗೂ ತಡೆ ಹಾಕಬೇಕಾಗಿದೆ. 

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.