ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಯಶಸ್ಸು: ನಿಗಾ ಇರಲಿ


Team Udayavani, May 9, 2018, 6:00 AM IST

8.jpg

ಉಗ್ರರನ್ನು ಸದೆಬಡೆಯುವ ಜೊತೆಯಲ್ಲೇ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರಾಜ್ಯದ ಶಿಕ್ಷಣ ಸಂಸ್ಥೆಗಳು ಉಗ್ರಗಾಮಿಗಳ ಹೊಸ ಉಗಮಸ್ಥಾನಗಳಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ.

ಕಳೆದ ಕೆಲವು ತಿಂಗಳಿಂದ ನಮ್ಮ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಉಗ್ರವಾದಿಗಳನ್ನು ಹುಡುಕಾಡಿ ಹೊಸಕಿ ಹಾಕುವ ಕಾರ್ಯದಲ್ಲಿ ನಿರತ ವಾಗಿವೆ. ಸೇನೆಯ ಕಾರ್ಯಾಚರಣೆಯಲ್ಲಿ ಅನೇಕ ಉಗ್ರರು ಹತರಾಗಿದ್ದಾರೆ. ಕಳೆದ ಮೂರು ದಿನದಲ್ಲಿ ಭಾರತೀಯ ಸೇನೆ ಶೋಪಿಯಾನ್‌ನಲ್ಲಿ ಹಿಬ್ಜುಲ್‌ ಮುಜಾಹಿದ್ದೀನ್‌ನ ಐವರು ಮತ್ತು ಛತ್ತಬಾಲ್‌ನಲ್ಲಿ ಲಷ್ಕರ್‌ ಎ ತೈಯಬಾದ ಮೂವರು ಆತಂಕವಾದಿಗಳನ್ನು ಹೊಡೆದುರುಳಿಸಿದೆ. ಶೋಪಿ ಯಾನ್‌ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ನ ಸ್ಥಾನೀಯ ಕಮಾಂಡರ್‌ ಸದ್ದಾಮ್‌ ಪೈದರ್‌ ಕೂಡ ಸತ್ತಿದ್ದಾನೆ. ಈ ವ್ಯಕ್ತಿ ಬುರ್ಹನ್‌ ವಾನಿಯ ಆಪ್ತವಲಯದಲ್ಲಿ ಒಬ್ಬನಾಗಿದ್ದ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಸೇನೆಯ ಈ ಕಾರ್ಯಾಚರಣೆ ಕಾಶ್ಮೀರ ಕಣಿವೆಯ ಕ್ರೂರ ಸಂಘಟನೆಗಳ ಬೆನ್ನೆಲುಬಿಗೆ ಮತ್ತೂಮ್ಮೆ ಬಲವಾದ ಪ್ರಹಾರ ಮಾಡಿದೆ ಎನ್ನಬಹುದು. ಇದನ್ನು ನಿಸ್ಸಂದೇಹವಾಗಿ ಸುರಕ್ಷಾ ದಳಗಳ ದೊಡ್ಡ ಗೆಲುವು ಎಂದೂ ಕರೆಯಬಹುದು. ಆದರೆ ಕಾಶ್ಮೀರ ಕಣಿವೆಯಲ್ಲಿ ಯಾವೆಲ್ಲ ಆಯಾಮದಲ್ಲಿ ನಮ್ಮ ಸೈನಿಕರು ಆತಂಕವಾದಿಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ನೋಡಿದಾಗ, ಉಗ್ರ ಸಂಘಟನೆಗಳಿಗೆ ಸಿಗುತ್ತಿರುವ ಆರ್ಥಿಕ ಮತ್ತು ಇತರೆ ಸಂಪನ್ಮೂಲಗಳ ಪೂರೈಕೆಯನ್ನು ತಡೆಯುವಲ್ಲಿ ನಿರೀಕ್ಷಿಸಿದಷ್ಟು ಯಸಶು ನಮಗಿನ್ನೂ ಸಿಕ್ಕಿಲ್ಲ ಎನ್ನುವುದು ಅರ್ಥವಾಗುತ್ತದೆ. ಬುರ್ಹಾನ್‌ ವಾನಿಯ ಹತ್ಯೆಯ ನಂತರ ವಂತೂ ಕಾಶ್ಮೀರ ಕುದಿಯ ಲಾರಂಭಿಸಿತ್ತು. ತಿಂಗಳುಗಟ್ಟಲೇ ನಮ್ಮ ಸೇನೆ ಕಲ್ಲು ತೂರಾಟ ಗಾರರನ್ನು ಎದುರಿಸಬೇಕಾ ಯಿತು. ಆ ಹೊತ್ತಲ್ಲೇ ಅನೇಕ ಧರ್ಮಾಂಧ ಯುವಕರು ಹಿಬುjಲ್‌ ಸಂಘಟ ನೆ ಯನ್ನು ಹೆಚ್ಚಿನ ಸಂಖ್ಯೆಯಲ್ಲಿ  ಸೇರಿದ್ದರು ಎನ್ನಲಾಗು ತ್ತದೆ. ಇದನ್ನೆಲ್ಲ ತಡೆ ಯುವುದ ಕ್ಕಾಗಿಯೇ ಪ್ರತ್ಯೇಕ ತಾವಾದಿ ಸಂಘಟನೆಗಳಿಗೆ ಸೀಮೆಯಾಚೆ ಗಿರುವ ಸಂಬಂಧ ಮತ್ತು ಅವುಗಳ ಹಣದ ವಹಿವಾಟಿನ ಮೇಲೆ ಗಮನ ವಿಡಲಾಗಿತ್ತು. ಉಗ್ರ ಸಂಘಟನೆಗಳ ಬಲ ಕುಸಿಯಬೇಕೆಂದರೆ ಅವುಗಳಿಗೆ ಸಿಗುತ್ತಿರುವ ಆರ್ಥಿಕ ಬೆಂಬಲಕ್ಕೆ ಕೊಡಲಿಯೇಟು ಕೊಡಬೇಕು, ಆದರೆ ಇದೊಂದರಿಂದಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುವಂತಿಲ್ಲ. 

ಶೋಪಿಯಾನ್‌ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ಒಬ್ಬ ಸಹಾಯಕ ಪ್ರೊಫೆಸರ್‌ ಕೂಡ ಇದ್ದ. ಉಗ್ರನಾದ 36 ಗಂಟೆಗಳಲ್ಲೇ ಈ ವ್ಯಕ್ತಿಯ ಹತ್ಯೆಯಾಗಿದೆ. ಉಗ್ರ ಸಂಘಟನೆಗಳು ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಯಾವೆಲ್ಲ ಸಂಸ್ಥಾನಗಳಲ್ಲಿ ತಮ್ಮ ವ್ಯಕ್ತಿಗಳನ್ನು ಸೇರಿಸುತ್ತಿವೆ ಅಥವಾ ಸೃಷ್ಟಿಸುತ್ತಿವೆ ಎನ್ನುವುದಕ್ಕೆ ಇದು ನಿದರ್ಶನ. ಇಂಥ ಮತಾಂಧ ಪ್ರೊಫೆಸರ್‌ಗಳು ತಮ್ಮ ಎಷ್ಟು ವಿದ್ಯಾರ್ಥಿಗಳ ಬ್ರೇನ್‌ವಾಶ್‌ ಮಾಡಿರುತ್ತಾರೋ? ಅವಿದ್ಯಾವಂತ ಉಗ್ರನಿಗಿಂತ ವಿದ್ಯಾವಂತ ಉಗ್ರ ಬಹಳ ಅಪಾಯಕಾರಿ ಎನ್ನುವ ಮಾತು ಸುಳ್ಳೇನೂ ಅಲ್ಲ. ಇದು ಸಾಲದೆಂಬಂತೆ ನಿರುದ್ಯೋಗದ ಸಮಸ್ಯೆಯೂ ಕಣಿವೆಯಲ್ಲಿ ಕಾಡುತ್ತಿದೆ. ಪ್ರವಾಸೋದ್ಯಮದ ಮೇಲೆಯೇ ಕಾಶ್ಮೀರ ಹೆಚ್ಚು ಅವಲಂಬಿತವಾಗಿದೆ. ಆದರೆ ಉಗ್ರರ ಉಪಟಳ, ಕಲ್ಲು ತೂರಾಟಗಾರರ ಗದ್ದಲದಿಂದಾಗಿ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳುತ್ತಿದೆ. ಈ ಎಲ್ಲಾ ಸಂಗತಿಗಳೂ ಕೆಲಸವಿಲ್ಲದ ಯುವಕರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. 

ಅಂದರೆ ಇವರೆಲ್ಲ ತಮ್ಮ ಕಾಲ ಮೇಲೆ ತಾವೇ ಕಲ್ಲು ತೂರಿಕೊಳ್ಳುತ್ತಿದ್ದಾರೆ ಎಂದಾಯಿತು! ಉಗ್ರ ಸಂಘಟನೆಗಳು ಇಂಥ ಯುವಕರನ್ನೇ ಟಾರ್ಗೆಟ್‌ ಮಾಡಿ ಅವರಲ್ಲಿ ಆಕ್ರೋಶ ತುಂಬುತ್ತಿವೆ. ಗಡಿ ಭದ್ರತಾ ಪಡೆಗಳನ್ನು ಬಲಿಷ್ಠಗೊಳಿಸುವ ಮೂಲಕ ಗಡಿ ಆಚೆ ಯಿಂದ, ಅಂದರೆ, ಪಾಕಿಸ್ತಾನದಿಂದ ಉಗ್ರರಿಗೆ- ಪ್ರತ್ಯೇಕತಾವಾದಿಗಳಿಗೆ ಸಿಗುತ್ತಿರುವ ಸಹಾಯವನ್ನು  ಸಂಪೂರ್ಣವಾಗಿ ನಿಲ್ಲಿಸಬೇಕಿದೆ. ಆದರೆ ಇದೇ ವೇಳೆಯಲ್ಲೇ ಕಾಶ್ಮೀರದಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಶಾಂತಗೊಳಿಸಲು, ಯುವಕರನ್ನು ಅಡ್ಡದಾರಿ ಹಿಡಿಯದಂತೆ ಮಾಡಲು ಸಂಪೂರ್ಣವಾಗಿ ಭಿನ್ನ ಮಾರ್ಗದ ಅಗತ್ಯವೂ ಇದೆ. ಆಶಾದಾಯಕ ಸಂಗತಿಯೆಂದರೆ ಕಾಶ್ಮೀರಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವ, ಅವರನ್ನು ಮುಖ್ಯವಾಹಿನಿಯಲ್ಲಿ ತರುವ ಕೆಲಸ ಮೋದಿ ಸರ್ಕಾರದಡಿಯಲ್ಲಿ ತುಸು ವೇಗಪಡೆದಿದೆ. ಈ ಮಾತುಕತೆ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳಬೇಕು. ಉಗ್ರರನ್ನು ಸದೆಬಡೆಯುವ ಜೊತೆಯಲ್ಲೇ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರಾಜ್ಯದ ಶಿಕ್ಷಣ ಸಂಸ್ಥೆಗಳು ಉಗ್ರರ ಹೊಸ ಉಗಮಸ್ಥಾನಗಳಾಗದಂತೆ ಎಚ್ಚರ ವಹಿಸುವ ಅಗತ್ಯವೂ ಇದೆ.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.