ಬೇನಾಮಿ ಆಸ್ತಿ ಕಾಯ್ದೆ ಸೋಲಬಾರದು 


Team Udayavani, Jun 5, 2018, 5:11 PM IST

benami.jpg

ಕಾಳಧನದ ಪ್ರವಾಹ ಮತ್ತು ಹಣಕಾಸು ಸಂಬಂಧಿ ಅಕ್ರಮಗಳು ಹಾಗೂ ಶಿಸ್ತಿನ ಉಲ್ಲಂಘನೆಯನ್ನು ತಡೆಯುವ ದೃಷ್ಟಿಯಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತೆಗೆದುಕೊಂಡಿರುವ ಬಹುಮುಖ್ಯ ಕ್ರಮಗಳಲ್ಲಿ ನೋಟು ರದ್ದತಿ ಒಂದು. ಇನ್ನೊಂದು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು. ನೋಟು ರದ್ದತಿಗಿಂತ ಒಂದು ವಾರ ಮುನ್ನ ಜಾರಿಗೆ ಬಂದಿರು ವ ಈ ಕಾನೂನು ಹಲ್ಲಿಲ್ಲದ ಹಾವಾಗುವ ಸ್ಥಿತಿ ಒದಗಿರುವುದು ಶೋಚನೀಯ. ಈ ಕಾನೂನು ಪರಿಣಾಮವಾಗಿ ಅನುಷ್ಠಾನಗೊಳ್ಳುವಂತೆ ಮಾಡುವ ತುರ್ತು ಈಗ ಸರಕಾರಕ್ಕಿದೆ. 

2016ರ ನವೆಂಬರ್‌ 1ರಂದು ಕೇಂದ್ರ ಸರಕಾರ ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾಯಿದೆಯನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳು ಈಗ ಅಂತಿಮ ಹಂತದ ತೀರ್ಮಾನಕ್ಕೆ ಕಾದು ಕುಳಿತಿವೆ. ಈ ಹಿಂದೆ ಇದ್ದ ಕಾನೂನನ್ನು ಬಿಗಿಗೊಳಿಸಿದ ಪರಿಣಾಮ ವಾಗಿ 860 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 80 ಪ್ರಕರಣಗಳು ಮಾತ್ರ ಇತ್ಯರ್ಥ  ಗೊಂಡಿದ್ದು, 780 ಹಾಗೆಯೇ ಉಳಿದಿವೆ.

ಸಮಸ್ಯೆಯಾಗಿರುವುದು ಇವುಗಳನ್ನುವಿಲೇವಾರಿ ಮಾಡುವುದಕ್ಕೆ ಬೇಕಾದ ತ್ರಿಸದಸ್ಯ ನಿರ್ಧರಣ ಸಮಿತಿಯನ್ನು ನೇಮಕ ಮಾಡದೆ ಇರುವಲ್ಲಿ. ಕಳೆದ ಒಂದೂವರೆ ವರ್ಷದಿಂದ ಪ್ರಕರಣಗಳು ಇತ್ಯರ್ಥ ಗೊಳ್ಳದೆ ಇವೆ. ಒಂದು ವರ್ಷದೊಳಗೆ ಪ್ರಕರಣಗಳನ್ನು ಅಂತಿಮಗೊಳಿಸದೆ ಇದ್ದರೆ ಅವು ಖುಲಾಸೆಯಾಗಿ ಕಾನೂನಿನ ಆಶಯವೇ ವಿಫ‌ಲವಾಗುತ್ತದೆ. ಯಾವುದೇ ಕಾನೂನನ್ನು ರೂಪಿಸಿ ಜಾರಿಗೊಳಿಸುವುದಕ್ಕೆ ಮುಂಚಿತವಾಗಿ ಅದರ ಜಾರಿಗೆ ಸೂಕ್ತವಾದ ಉಪಕ್ರಮಗಳನ್ನು ನಿರ್ಮಿಸದೆ ಇದ್ದರೆ ಎದುರಾಗುವ ಸಮಸ್ಯೆಗಳಿವು. ನೋಟು ರದ್ದತಿಯ ಸೀಮಿತ ಯಶಸ್ಸಿಗೂ
ಕಾರಣವಾಗಿರುವುದು ಇಂಥದ್ದೇ ಕೊರತೆ. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ತಕ್ಕ ವ್ಯವಸ್ಥೆಗಳನ್ನು ಮಾಡದೇ ಇದ್ದರೆ ಬೇನಾಮಿ ಆಸ್ತಿ ಮುಟ್ಟುಗೋಲು ಕಾಯಿದೆಯೂ ಇದೇ ಹಾದಿ ಹಿಡಿಯುತ್ತದೆ. ಜಾರಿ ಮತ್ತು ಅನುಷ್ಠಾನ ಹಂತದಲ್ಲಿ ನಡೆಯುವ ಈ ವೈಫ‌ಲ್ಯ ಹಲವು ವಿಧವಾದ ಪಶ್ಚಾತ್‌ ಪರಿಣಾಮಗಳನ್ನು ಉಂಟು ಮಾಡುತ್ತದೆ. ಭ್ರಷ್ಟರು, ಅಪ್ರಾಮಾಣಿಕರು ಇದರಿಂದ ಲಾಭವನ್ನೇ ಹೊಂದುತ್ತಾರೆ. ಅದರ ಜತೆಗೆ ಪ್ರಾಮಾಣಿಕರಿಗೂ ಇದು ನಿರುತ್ಸಾಹ, ನಿರುತ್ತೇಜನವನ್ನು ತಂದೊಡ್ಡಿ ಹತ್ತರ ಜತೆಗೆ ಹನ್ನೊಂದಾಗುವ ಮನೋಸ್ಥಿತಿಯನ್ನು ಉಂಟು ಮಾಡುತ್ತದೆ.

ಇಂತಹ ವೈಫ‌ಲ್ಯಗಳು ನಿಧಾನವಾಗಿ ಎಲ್ಲ ಅಕ್ರಮ, ಭ್ರಷ್ಟಾಚಾರದ ಬಗೆಗೆ ಅಭೇದದ ಸ್ಥಿತಿಯನ್ನು ನಿರ್ಮಾಣ ಮಾಡುತ್ತವೆ. ಇದೆಲ್ಲದಕ್ಕಿಂತ ಮಿಗಿಲಾದ ಅಪಾಯ ಇಂತಹ ವೈಫ‌ಲ್ಯಗಳು ಜನಮಾನಸದಲ್ಲಿ ಉಂಟು ಮಾಡಬಹುದಾದ ಸಿನಿಕತನ. ಎಲ್ಲ ಸರಕಾರಗಳ ಬಗ್ಗೆ ಜನರು ಅಪಾರ ನಿರೀಕ್ಷೆ ಹೊಂದಿರುತ್ತಾರೆ. ಅದರಲ್ಲೂ ಭ್ರಷ್ಟಾಚಾರ, ಕಾಳಧನದ ವಿಚಾರದಲ್ಲಿ ಮೋದಿ ಸರಕಾರದ ಬಗ್ಗೆ ತುಂಬು ಆಶಯದಿಂದಿದ್ದಾರೆ. ಅವುಗಳನ್ನು ತಡೆಯುವ ಕಾನೂನು ಕ್ರಮಗಳು ಒಂದರ ಮೇಲೊಂದು ಅನುಷ್ಠಾನ ಹಂತದಲ್ಲಿ ವಿಫ‌ಲವಾದರೆ ಎಲ್ಲ ಸರಕಾರಗಳಂತೆ ಇದೂ ಒಂದು ಎಂಬ ಭಾವನೆ ಜನರಲ್ಲಿ ಮೂಡಿತಾದರೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ಈ ಎಲ್ಲ ಕಾರಣಗಳಿಂದ ಬೇನಾಮಿ ಆಸ್ತಿ ಮುಟ್ಟುಗೋಲು ಕಾಯಿ ದೆಯ ಮೂಲಕ ವಶವಾದ ಆಸ್ತಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಬೇಕಾದ ವ್ಯವಸ್ಥೆಗಳನ್ನು ಸರಕಾರ ತುರ್ತಾಗಿ ರೂಪಿಸಬೇಕು. ಮುಂದಿನ ದಿನಗಳಲ್ಲೂ ಅನುಷ್ಠಾನ ವ್ಯವಸ್ಥೆಗಳನ್ನು ಸೂಕ್ತವಾಗಿ ರೂಪಿಸಿಯೇ ಕಾನೂನುಗಳ ಜಾರಿಗೆ ಮುಂದಾಗಬೇಕು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

7-rbi

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.