ಭರವಸೆ ತ್ವರಿತವಾಗಿ ಈಡೇರಲಿ; ಗ್ರಾಮೀಣ ಅಂಚೆ ನೌಕರರ ಮುಷ್ಕರ


Team Udayavani, Jun 8, 2018, 4:24 PM IST

post.jpg

ಗ್ರಾಮೀಣ ಅಂಚೆ ನೌಕರರು 16 ದಿನ ನಡೆಸಿದ ಮುಷ್ಕರದ ಫ‌ಲವಾಗಿ ಕೇಂದ್ರ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. 2016ರಿಂದ ಪೂರ್ವಾನ್ವಯವಾಗುವಂತೆ ಅವರ ವೇತನದಲ್ಲಿ ಮೂರು ಪಟ್ಟು ಏರಿಕೆಯಾಗಲಿದೆ. ಹಾಗೆಂದು ಇದು ಭಾರೀ ಎನ್ನುವ ಮೊತ್ತವೇನಲ್ಲ. ಆದರೂ ಒಂದು ಗೌರವಯುತವಾದ ವೇತನ ಗ್ರಾಮೀಣ ಅಂಚೆ ನೌಕರರಿಗೆ ಸಿಗಲಿದೆ ಎನ್ನುವುದು ಸಮಾಧಾನ ಕೊಡುವ ಸಂಗತಿ.ಇದಕ್ಕಾಗಿ ಮೇ 22ರಿಂದೀಚೆಗೆ ದೇಶದ ಸುಮಾರು ಮೂರು ಲಕ್ಷ ಗ್ರಾಮೀಣ ಅಂಚೆ ನೌಕರರು ಪಟ್ಟು ಬಿಡದೆ ಮುಷ್ಕರ ಹೂಡಿದ್ದರು.

ನಮ್ಮ ದೇಶದಲ್ಲಿ ಸರಕಾರಕ್ಕೆ ಅರ್ಥವಾಗುವುದು ಮುಷ್ಕರದ ಭಾಷೆಯೊಂದೇ ಎನ್ನುವುದು ಇದರಿಂದ ಮತ್ತೂಮ್ಮೆ ಸಾಬೀತಾಗಿದೆ. ಅರೆ ಸರಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು 16 ದಿನ ಮುಷ್ಕರ ಹೂಡುವುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಯ ಎದುರು ಅವರು ಅಸಹಾಯಕರಾಗುತ್ತಾರೆ. ಹಾಗೆಂದು ಅಂಚೆ ನೌಕರರು ಮುಷ್ಕರ ಹೂಡುತ್ತಿರುವುದು ಇದೇ ಮೊದಲೇನಲ್ಲ. 22 ವರ್ಷಗಳ ಹಿಂದೆ ಸಂಬಳ ಏರಿಕೆಗಾಗಿ 13 ದಿನ ಮುಷ್ಕರ ಹೂಡಿದ್ದರು.

ದೇಶದಲ್ಲಿ ತೀರಾ ಕಡೆಗಣಿಸಲ್ಪಟ್ಟ ಇಲಾಖೆಯೊಂದಿದ್ದರೆ ಅಂಚೆ ಇಲಾಖೆ. ಆಧುನಿಕ ಸಂವಹನ ಆವಿಷ್ಕಾರಗಳಿಂದಾಗಿ ಅಂಚೆ ಇಲಾಖೆ ಅಪ್ರಸ್ತುತವಾಗುತ್ತಿದೆ ಎನ್ನುವುದು ನಿಜ. ಆದರೆ ಜನೋಪಯೋಗಿ ಸೇವೆಯೊಂದನ್ನು ಸರಕಾರ ಈ ದೃಷ್ಟಿಯಿಂದ ನೋಡಬಾರದು. ಅದೇ ರೀತಿ ಅತೀ ಕಡಿಮೆ ವೇತನ ಪಡೆಯುವ ಸರಕಾರಿ ನೌಕರರಿದ್ದರೆ ಅವರು ಅಂಚೆ ನೌಕರರು ಎಂಬ ಅಭಿಪ್ರಾಯವಿದೆ.

ಈ ಪೈಕಿ ನಗರ ಭಾಗದ ಅಂಚೆ ನೌಕರರಿಗೆ ಕಳೆದ ವರ್ಷವೇ ವೇತನ ಏರಿಕೆ ಮಾಡಲಾಗಿತ್ತು. ಆದರೆ ಗ್ರಾಮೀಣ ಅಂಚೆ ನೌಕರರ ವೇತನ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ ಗ್ರಾಮೀಣ ಅಂಚೆ ನೌಕರರು ವೇತನ ಏರಿಕೆಗಾಗಿ ಹೂಡಿದ ಮುಷ್ಕರ ನ್ಯಾಯಯುತವೇ ಆಗಿತ್ತು. ಈ ಕಾಲದಲ್ಲೂ ಅವರಿಗೆ ಗರಿಷ್ಠ ಎಂದರೆ 4115 ರೂ. ವೇತನ ನೀಡಲಾಗುತ್ತಿದೆ. 2295 ರೂ. ಕನಿಷ್ಠ ವೇತನ ಪಡೆಯುವ ಅಂಚೆ ನೌಕರರೂ ಇದ್ದಾರೆ. ಒಬ್ಬ ವ್ಯಕ್ತಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕಲು ಸಾಧ್ಯವೇ ಎನ್ನುವುದನ್ನಾದರೂ ಆಡಳಿತ ಮಾಡುವವರು ಚಿಂತಿಸಬೇಕು.ಇದೀಗ ಕನಿಷ್ಠ ವೇತನ 10,000 ರೂ. ಮತ್ತು ಗರಿಷ್ಠ ವೇತನ 35,480 ರೂ. ಎಂದು ನಿಗದಿಪಡಿಸಿ, ಜತೆಗೆ ಭತ್ತೆ ಹಾಗೂ ವಾರ್ಷಿಕ ಶೇ. 3 ವೇತನ ಏರಿಕೆಗೂ ಒಪ್ಪಿಕೊಳ್ಳಲಾಗಿದೆ.

ಇದೊಂದು ಯೋಗ್ಯ ನಿರ್ಧಾರ. ಈ ಮೂಲಕ ಕಮಲೇಶ್‌ ಚಂದ್ರ ಆಯೋಗದ ವರದಿಯನ್ನು ಆಂಶಿಕವಾಗಿಯಾದರೂ ಅನುಷ್ಠಾನಗೊಳಿಸಿದಂತಾಗಿದೆ. ಮಹಿಳಾ ನೌಕರರಿಗೆ ಆರು ತಿಂಗಳ ಹೆರಿಗೆ ರಜೆ,180 ದಿನಗಳ ರಜೆ ಒಟ್ಟುಗೂಡಿಸಿ ನಗದೀಕರಿಸುವಂಥ ಇನ್ನಿತರ ಕೆಲವು ಶಿಫಾರಸುಗಳನ್ನು ಸರಕಾರ ಇನ್ನಷ್ಟೇ ಪರಿಗಣಿಸಬೇಕಿದೆ. ಆದರೆ ಇಷ್ಟಕ್ಕೆ ಅಂಚೆ ನೌಕರರ ಸಮಸ್ಯೆ ಮುಗಿಯಿತು ಎಂದು ಭಾವಿಸುವಂತಿಲ್ಲ. ನಗರ, ಪಟ್ಟಣಗಳಲ್ಲಿ ಅಂಚೆಗೆ ಪರ್ಯಾಯವಾಗಿ ಬೇರೆ ಸೇವೆಗಳು ಲಭ್ಯವಿರಬಹುದು. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ಅಂಚೆ ಸೇವೆ ಅನಿವಾರ್ಯ ಅಂಗ. ಪತ್ರ ಬಟವಾಡೆ ಮಾತ್ರವಲ್ಲದೆ, ಮಾಸಾಶನ, ಪಿಂಚಣಿ ವಿತರಣೆ ಇತ್ಯಾದಿ ಸೇವೆಗಳೆಲ್ಲ ಅಂಚೆ ಮೂಲಕವೇ ಆಗಬೇಕು. 16 ದಿನಗಳ ಮುಷ್ಕರದ ಪರಿಣಾಮವಾಗಿ ಈ ಸೇವೆಗಳೆಲ್ಲ ಸ್ಥಗಿತಗೊಂಡು ಜನರಿಗೆ ಸಮಸ್ಯೆಯಾಗಿತ್ತು. ಆದರೆ ಇಂಥ ಪ್ರಮುಖ ಸೇವೆ ಒದಗಿಸುವ ನೌಕರರ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂಬ ಅಂದಾಜು ಜನರಿಗಿರಲಿಲ್ಲ.

ಗ್ರಾಮೀಣ ಭಾಗಗಳಲ್ಲಿ ಈಗಲೂ ಎಷ್ಟೋ ಅಂಚೆ ಕಚೇರಿಗಳು ನಡೆಯುತ್ತಿರುವುದು ಬಾಡಿಗೆ ಕಟ್ಟಡಗಳಲ್ಲಿ. ಇದನ್ನೂ ಅಂಚೆ ನೌಕರರೇ ವ್ಯವಸ್ಥೆ ಮಾಡಿಕೊಳ್ಳಬೇಕೇ ಹೊರತು ಸರಕಾರ ಯಾವುದೇ ನೆರವು ನೀಡುವ ಸ್ಥಿತಿಯಲ್ಲಿಲ್ಲ. ಎಷ್ಟೋ ಕಡೆ ಪಂಚಾಯಿತಿಯೋ ಅಥವಾ ಯಾರಾದರೂ ಖಾಸಗಿಯವರು ಉದಾರವಾಗಿ ನೀಡಿದ ಜಾಗದಲ್ಲಿ ಅಂಚೆ ನೌಕರರು ದೇಣಿಗೆ ಎತ್ತಿ ನಿರ್ಮಿಸಿದ ಕಟ್ಟಡಗಳಲ್ಲಿ ಅಂಚೆ ಕಚೇರಿಗಳು
ಕಾರ್ಯನಿರ್ವಹಿಸುವ ಪರಿಸ್ಥಿತಿಯೂ ಇದೆ. ಶೌಚಾಲಯ, ಕುಡಿಯುವ ನೀರಿನಂತಹ ಕನಿಷ್ಠ ಮೂಲಸೌಕರ್ಯಗಳು ಹೆಚ್ಚಿನ ಅಂಚೆ  ಕಚೇರಿಗಳಲ್ಲಿಲ್ಲ.

ಈಗ ತುರ್ತಾಗಿ ಆಗಬೇಕಿರುವುದು ಅಂಚೆ ಕಚೇರಿಗಳಿಗೆ ಸ್ವಂತ ಕಟ್ಟಡ ಮತ್ತು ಮೂಲಸೌಕರ್ಯ ಒದಗಿಸುವ ಕೆಲಸ. ಇದರ ಜತೆಗೆ ಅಂಚೆ ಕಚೇರಿಗಳನ್ನು ಇನ್ನಿತರ ಕಾರ್ಯಕ್ರಮಗಳಿಗೆ ಬಳಸಿಕೊಂಡು ಜನಸ್ನೇಹಿಯಾಗಿಸುವುದು ಸೂಕ್ತ. ಇದಕ್ಕೂ ಮೊದಲು ಇದೀಗ ನೀಡಿರುವ ವೇತನ ಏರಿಕೆಯ ಭರವಸೆಯನ್ನು ವಿಳಂಬವಿಲ್ಲದೆ ಜಾರಿಗೊಳಿಸಿ ಅಂಚೆ ನೌಕರರ ಬಾಳಿನಲ್ಲಿ ಅಚ್ಛೇದಿನ ಬರುವಂತೆ ಮಾಡಬೇಕು. 

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.