ಭೂಗತ ವಿದ್ಯುತ್‌ ಕೇಬಲ್‌: ಎಲ್ಲೆಡೆ ಅನುಷ್ಠಾನವಾಗಲಿ 


Team Udayavani, Jul 12, 2018, 6:00 AM IST

32.jpg

ಮಲೆನಾಡು ಭಾಗದಲ್ಲಿ ನೆಲದಡಿ ವಿದ್ಯುತ್‌ ತಂತಿಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಮಳೆಗಾಲದಲ್ಲಿ ಮರಗಳು ಉರುಳಿ ಬಿದ್ದು ದಿನಗಟ್ಟಲೆ ವಿದ್ಯುತ್‌ ವ್ಯತ್ಯಯವಾಗುವುದು ಮಲೆನಾಡಿನ ಪ್ರತಿ ವರ್ಷದ ಸಮಸ್ಯೆ. ಹಾಗೆಂದು ಇದು ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಮಲೆನಾಡಿನಲ್ಲಿ ಹೆಚ್ಚು ಅಷ್ಟೆ. ಹೀಗಾಗಿ ನೆಲದಡಿಯಲ್ಲಿ ವಿದ್ಯುತ್‌ ತಂತಿಗಳನ್ನು ಅಳವಡಿಸಿ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವುದು ಬಹಳ ಉತ್ತಮವಾದ ಚಿಂತನೆ. ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಈ ಯೋಜನೆ ಅನುಷ್ಠಾನಗೊಂಡರೆ ಇನ್ನೂ ಉತ್ತಮ. 

ಈ ಮಳೆಗಾಲದಲ್ಲಿ ಇಷ್ಟರ ತನಕ ಮಲೆನಾಡಿನಲ್ಲೇ 700ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಇಲ್ಲೆಲ್ಲ ಬದಲಿ ಕಂಬ ಹಾಕಲು ವಿದ್ಯುತ್‌ ಮಂಡಳಿ ಹಗಲೂ ರಾತ್ರಿ ದುಡಿಯಬೇಕು ಹಾಗೂ ಅಷ್ಟೇ ಖರ್ಚು ಮಾಡಬೇಕು. ವಿದ್ಯುತ್‌ ಕಂಬಗಳು ನೆಟ್ಟಗಾಗುವ ತನಕ ಮಲೆನಾಡು ವಾಸಿಗಳಿಗೆ ಕತ್ತಲೆವಾಸ. ಅದೇ ರೀತಿ ಉಳಿದೆಡೆಗಳಲ್ಲೂ ಮಳೆಗಾಳಿಗೆ ಮರ ಉರುಳಿಯೋ ಗೆಲ್ಲುಗಳು ಮುರಿದು ಬಿಧ್ದೋ ವಿದ್ಯುತ್‌ ವ್ಯತ್ಯಯವಾಗುವುದು ಮಾಮೂಲು ಸಮಸ್ಯೆ. ಈ ವರ್ಷ ವರುಣನ ಅಬ್ಬರ ಹೆಚ್ಚಾಗಿರುವುದರಿಂದ ಸಮಸ್ಯೆಯೂ ಬಿಗಡಾಯಿಸಿದೆ. 

ಭೂಗತ ವಿದ್ಯುತ್‌ ಕೇಬಲ್‌ಗ‌ಳನ್ನು ಅಳವಡಿಸುವುದು ಬಹಳ ದುಬಾರಿ ಕೆಲಸ ನಿಜ. ಆದರೆ ಇದರಿಂದ ಅನಂತರ ಬಹಳ ಪ್ರಯೋಜನಗಳು ಇವೆ. ಇದು ಹೊಸ ಯೋಜನೆಯೇನೂ ಅಲ್ಲ. ಮುಂದುವರಿದ ದೇಶಗಳಲ್ಲಿ ಎಂದೋ ವಿದ್ಯುತ್‌ ಕೇಬಲ್‌ಗ‌ಳನ್ನು ನೆಲದಡಿ ಹಾಕಿಯಾಗಿದೆ. ನಮ್ಮಲ್ಲೂ ಮುಂಬಯಿ, ದಿಲ್ಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಕೆಲಸ ಆಗಿದೆ. ಆದರೆ ಉಳಿದಂತೆ ವಿದ್ಯುತ್‌ ಪ್ರಸರಣ ಕಂಪೆನಿಗಳು ಏಕೋ ಈ ಕುರಿತು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಮಾಮೂಲಿ ಓವರ್‌ಹೆಡ್‌ ಕೇಬಲ್‌ ಅಳವಡಿಸುವುದಕ್ಕಿಂತ 8-10 ಪಟ್ಟು ಹೆಚ್ಚು ಖರ್ಚು ಬೀಳುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ವೇಳೆ ಇದರಿಂದ ಆಗುವ ಲಾಭಗಳು ಮತ್ತು ಪ್ರಯೋಜನಗಳನ್ನು ಕೂಡಾ ಪರಿಗಣಿಸಬೇಕು. ಇದು ಏನು ಎಂದು ತಿಳಿಯಬೇಕಾದರೆ ಪ್ರಧಾನಿ ಮೋದಿಯವರ ಚುನಾವಣಾ ಕ್ಷೇತ್ರ ವಾರಣಾಸಿಯತ್ತ ಒಮ್ಮೆ ನೋಡಬೇಕು. ಪುರಾತನ ನಗರಿಯಾಗಿರುವ ವಾರಣಾಸಿಯಲ್ಲಿ ಎಲ್ಲೆಂದರಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದ ದೃಶ್ಯ ಈಗ ಕಾಣಸಿಗುವುದಿಲ್ಲ. ಮೋದಿಯ ಮುತುವರ್ಜಿಯಿಂದಾಗಿ ಅಲ್ಲಿ ವಿದ್ಯುತ್‌ ಕೇಬಲ್‌ಗ‌ಳನ್ನು ಭೂಗತವಾಗಿ ಅಳವಡಿಸಲಾಗಿದೆ. ಸಂಪೂರ್ಣ ಭೂಗತ ಕೇಬಲ್‌ ಅಳವಡಿಕೆಯಾಗಿರುವ ಮೊದಲ ನಗರಿ ಎಂಬ ಹಿರಿಮೆಗೂ ವಾರಣಾಸಿ ಪಾತ್ರವಾಗಿದೆ. ಅಲ್ಲೀಗ ವಿದ್ಯುತ್‌ ಸೋರಿಕೆ ಶೇ. 45ರಷ್ಟು ಕಡಿಮೆಯಾಗಿದೆ. ದೇಶದ ದೊಡ್ಡ ಸಮಸ್ಯೆಯೇ ಪ್ರಸರಣದಲ್ಲಾಗುವ ವಿದ್ಯುತ್‌ ಸೋರಿಕೆ.ಉತ್ಪಾದನೆಯಾದ ಶೇ. 25ರಷ್ಟು ವಿದ್ಯುತ್‌ ಪ್ರಸರಣ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತವಾಗಿ ವಿದಾಯ ಹೇಳಲು ಸಾಧ್ಯವಿದೆ. 

 ಈಗಾಗಲೇ ಪ್ರತಿ ಹಳ್ಳಿಗೆ ವಿದ್ಯುತ್‌ ಸಂಪರ್ಕ ನೀಡಿದ ಸಾಧನೆಯನ್ನು ಕೇಂದ್ರ ಮಾಡಿದೆ. ಇದರ ಜತೆಗೆ ಪ್ರತಿ ಊರಿನಲ್ಲೂ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ವಿದ್ಯುತ್‌ ಕ್ಷೇತ್ರದಲ್ಲಿ ನಾವು ಗಮನಾರ್ಹವಾದ ಸಾಧನೆಯನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಹೀಗಾಗಿ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವಾಗ ವಿಶಾಲ ವ್ಯಾಪ್ತಿಯಲ್ಲಿ ಚಿಂತಿಸಬೇಕು. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.