ಭೂಗತ ವಿದ್ಯುತ್‌ ಕೇಬಲ್‌: ಎಲ್ಲೆಡೆ ಅನುಷ್ಠಾನವಾಗಲಿ 


Team Udayavani, Jul 12, 2018, 6:00 AM IST

32.jpg

ಮಲೆನಾಡು ಭಾಗದಲ್ಲಿ ನೆಲದಡಿ ವಿದ್ಯುತ್‌ ತಂತಿಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಮಳೆಗಾಲದಲ್ಲಿ ಮರಗಳು ಉರುಳಿ ಬಿದ್ದು ದಿನಗಟ್ಟಲೆ ವಿದ್ಯುತ್‌ ವ್ಯತ್ಯಯವಾಗುವುದು ಮಲೆನಾಡಿನ ಪ್ರತಿ ವರ್ಷದ ಸಮಸ್ಯೆ. ಹಾಗೆಂದು ಇದು ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಮಲೆನಾಡಿನಲ್ಲಿ ಹೆಚ್ಚು ಅಷ್ಟೆ. ಹೀಗಾಗಿ ನೆಲದಡಿಯಲ್ಲಿ ವಿದ್ಯುತ್‌ ತಂತಿಗಳನ್ನು ಅಳವಡಿಸಿ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವುದು ಬಹಳ ಉತ್ತಮವಾದ ಚಿಂತನೆ. ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಈ ಯೋಜನೆ ಅನುಷ್ಠಾನಗೊಂಡರೆ ಇನ್ನೂ ಉತ್ತಮ. 

ಈ ಮಳೆಗಾಲದಲ್ಲಿ ಇಷ್ಟರ ತನಕ ಮಲೆನಾಡಿನಲ್ಲೇ 700ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಇಲ್ಲೆಲ್ಲ ಬದಲಿ ಕಂಬ ಹಾಕಲು ವಿದ್ಯುತ್‌ ಮಂಡಳಿ ಹಗಲೂ ರಾತ್ರಿ ದುಡಿಯಬೇಕು ಹಾಗೂ ಅಷ್ಟೇ ಖರ್ಚು ಮಾಡಬೇಕು. ವಿದ್ಯುತ್‌ ಕಂಬಗಳು ನೆಟ್ಟಗಾಗುವ ತನಕ ಮಲೆನಾಡು ವಾಸಿಗಳಿಗೆ ಕತ್ತಲೆವಾಸ. ಅದೇ ರೀತಿ ಉಳಿದೆಡೆಗಳಲ್ಲೂ ಮಳೆಗಾಳಿಗೆ ಮರ ಉರುಳಿಯೋ ಗೆಲ್ಲುಗಳು ಮುರಿದು ಬಿಧ್ದೋ ವಿದ್ಯುತ್‌ ವ್ಯತ್ಯಯವಾಗುವುದು ಮಾಮೂಲು ಸಮಸ್ಯೆ. ಈ ವರ್ಷ ವರುಣನ ಅಬ್ಬರ ಹೆಚ್ಚಾಗಿರುವುದರಿಂದ ಸಮಸ್ಯೆಯೂ ಬಿಗಡಾಯಿಸಿದೆ. 

ಭೂಗತ ವಿದ್ಯುತ್‌ ಕೇಬಲ್‌ಗ‌ಳನ್ನು ಅಳವಡಿಸುವುದು ಬಹಳ ದುಬಾರಿ ಕೆಲಸ ನಿಜ. ಆದರೆ ಇದರಿಂದ ಅನಂತರ ಬಹಳ ಪ್ರಯೋಜನಗಳು ಇವೆ. ಇದು ಹೊಸ ಯೋಜನೆಯೇನೂ ಅಲ್ಲ. ಮುಂದುವರಿದ ದೇಶಗಳಲ್ಲಿ ಎಂದೋ ವಿದ್ಯುತ್‌ ಕೇಬಲ್‌ಗ‌ಳನ್ನು ನೆಲದಡಿ ಹಾಕಿಯಾಗಿದೆ. ನಮ್ಮಲ್ಲೂ ಮುಂಬಯಿ, ದಿಲ್ಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಕೆಲಸ ಆಗಿದೆ. ಆದರೆ ಉಳಿದಂತೆ ವಿದ್ಯುತ್‌ ಪ್ರಸರಣ ಕಂಪೆನಿಗಳು ಏಕೋ ಈ ಕುರಿತು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಮಾಮೂಲಿ ಓವರ್‌ಹೆಡ್‌ ಕೇಬಲ್‌ ಅಳವಡಿಸುವುದಕ್ಕಿಂತ 8-10 ಪಟ್ಟು ಹೆಚ್ಚು ಖರ್ಚು ಬೀಳುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ವೇಳೆ ಇದರಿಂದ ಆಗುವ ಲಾಭಗಳು ಮತ್ತು ಪ್ರಯೋಜನಗಳನ್ನು ಕೂಡಾ ಪರಿಗಣಿಸಬೇಕು. ಇದು ಏನು ಎಂದು ತಿಳಿಯಬೇಕಾದರೆ ಪ್ರಧಾನಿ ಮೋದಿಯವರ ಚುನಾವಣಾ ಕ್ಷೇತ್ರ ವಾರಣಾಸಿಯತ್ತ ಒಮ್ಮೆ ನೋಡಬೇಕು. ಪುರಾತನ ನಗರಿಯಾಗಿರುವ ವಾರಣಾಸಿಯಲ್ಲಿ ಎಲ್ಲೆಂದರಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದ ದೃಶ್ಯ ಈಗ ಕಾಣಸಿಗುವುದಿಲ್ಲ. ಮೋದಿಯ ಮುತುವರ್ಜಿಯಿಂದಾಗಿ ಅಲ್ಲಿ ವಿದ್ಯುತ್‌ ಕೇಬಲ್‌ಗ‌ಳನ್ನು ಭೂಗತವಾಗಿ ಅಳವಡಿಸಲಾಗಿದೆ. ಸಂಪೂರ್ಣ ಭೂಗತ ಕೇಬಲ್‌ ಅಳವಡಿಕೆಯಾಗಿರುವ ಮೊದಲ ನಗರಿ ಎಂಬ ಹಿರಿಮೆಗೂ ವಾರಣಾಸಿ ಪಾತ್ರವಾಗಿದೆ. ಅಲ್ಲೀಗ ವಿದ್ಯುತ್‌ ಸೋರಿಕೆ ಶೇ. 45ರಷ್ಟು ಕಡಿಮೆಯಾಗಿದೆ. ದೇಶದ ದೊಡ್ಡ ಸಮಸ್ಯೆಯೇ ಪ್ರಸರಣದಲ್ಲಾಗುವ ವಿದ್ಯುತ್‌ ಸೋರಿಕೆ.ಉತ್ಪಾದನೆಯಾದ ಶೇ. 25ರಷ್ಟು ವಿದ್ಯುತ್‌ ಪ್ರಸರಣ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತವಾಗಿ ವಿದಾಯ ಹೇಳಲು ಸಾಧ್ಯವಿದೆ. 

 ಈಗಾಗಲೇ ಪ್ರತಿ ಹಳ್ಳಿಗೆ ವಿದ್ಯುತ್‌ ಸಂಪರ್ಕ ನೀಡಿದ ಸಾಧನೆಯನ್ನು ಕೇಂದ್ರ ಮಾಡಿದೆ. ಇದರ ಜತೆಗೆ ಪ್ರತಿ ಊರಿನಲ್ಲೂ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ವಿದ್ಯುತ್‌ ಕ್ಷೇತ್ರದಲ್ಲಿ ನಾವು ಗಮನಾರ್ಹವಾದ ಸಾಧನೆಯನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಹೀಗಾಗಿ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವಾಗ ವಿಶಾಲ ವ್ಯಾಪ್ತಿಯಲ್ಲಿ ಚಿಂತಿಸಬೇಕು. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.