ಲಿಂಚಿಂಗ್‌ ವಿರುದ್ಧ ಕಾನೂನು ತ್ವರಿತವಾಗಿ ಪಾಲನೆಯಾಗಲಿ


Team Udayavani, Jul 19, 2018, 6:00 AM IST

10.jpg

ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ. 

ಅಕ್ರಮ ಗೋ ಸಾಗಣೆ ಮತ್ತು ಮಕ್ಕಳ ಕಳ್ಳರು ಎಂದು ಶಂಕಿಸಿ ಅಮಾಯಕರನ್ನು ಥಳಿಸಿ ಸಾಯಿಸುವ ಭೀಕರ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಕಾಲಿಕವೂ, ಸಮುಚಿತವೂ ಹೌದು. ಕಳೆದ ಕೆಲ ವರ್ಷಗಳಿಂದೀಚೆಗೆ ಜನರ ಗುಂಪು ವದಂತಿಗಳನ್ನು ನಂಬಿ ಅಮಾಯಕರನ್ನು ಬಡಿದು ಸಾಯಿಸುವ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ್ದು, ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ದೇಶ ತಲೆತಗ್ಗಿಸುವಂತಾಗಿದೆ. ಇಂಗ್ಲೀಶ್‌ನಲ್ಲಿ ಲಿಂಚಿಂಗ್‌ ಎಂಬುದಾಗಿ ಕರೆಯಲಾಗುವ ಈ ಕೃತ್ಯದ ಹಿಂದಿರುವುದು ಅಸಹನೆ ಮತ್ತು ಆತಂಕ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ಈ ಮಾದರಿಯ ಕೃತ್ಯಗಳು ಸಂಭವಿಸಿವೆ. ಅದರಲ್ಲೂ ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಐದು ಮಂದಿಯನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಿ ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ. 

ಸಾಮೂಹಿಕವಾಗಿ ಥಳಿಸಿ ಕೊಲ್ಲುವುದನ್ನು ಸರ್ವೋತ್ಛ ನ್ಯಾಯಾಲಯ° ಭಯಾನಕ ಕೃತ್ಯ ಎಂಬುದಾಗಿ ವ್ಯಾಖ್ಯಾನಿಸಿರುವುದು ಪರಿಸ್ಥಿಯ ಗಂಭೀರತೆಯನ್ನು ತಿಳಿಸುತ್ತದೆ. ಇಂಥ ಕೃತ್ಯಗಳನ್ನು ನಿಯಂತ್ರಿಸದಿದ್ದರೆ ಅದು ಬಿರುಗಾಳಿಯಂತೆ ದೇಶಾದ್ಯಂತ ಹರಡಬಹುದು ಎಂದು ಸಕಾಲಿಕವಾದ ಎಚ್ಚರಿಕೆಯನ್ನು ಇದೇ ವೇಳೆ ನೀಡಿದೆ. ಇಂತಹ ಘಟನೆಗಳನ್ನು ತಡೆಯಲು ಕೇಂದ್ರವಾಗಲಿ, ರಾಜ್ಯ ಸರಕಾರಗಳಾಗಲಿ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖೀಸಿದೆ. ದೇಶದ ಪ್ರಜೆಗಳ ಪ್ರಾಣ ಮತ್ತು ಸೊತ್ತುಗಳನ್ನು ರಕ್ಷಿಸಬೇಕಾದದ್ದು ಚುನಾಯಿತ ಸರಕಾರಗಳ ಆದ್ಯ ಕರ್ತವ್ಯ. ಲಿಂಚಿಂಗ್‌ ತಡೆಯಲು ವಿಫ‌ಲವಾಗುವುದು ಎಂದರೆ ಸರಕಾರ ಈ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫ‌ಲವಾಗಿದೆ ಎಂದೇ ಅರ್ಥ. ಹೀಗಾಗಿ ಸರಕಾರಗಳು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕು. 

ಆರಂಭದಲ್ಲೇ ಕಠಿನ ಕ್ರಮ ಕೈಗೊಂಡಿದ್ದರೆ ಜನರಿಗೆ ಕಾನೂನಿನ ಭಯ ಮೂಡುತ್ತಿತ್ತು. ಅಂದರೆ ತತ್‌ಕ್ಷಣ ಸರಕಾರ ಪ್ರತಿಸ್ಪಂದಿಸಿ ಆರೋಪಿಗಳನ್ನು ಹಿಡಿದು ಕಠಿನ ಸಂದೇಶ ರವಾನಿಸುವ ಕೆಲಸವನ್ನು ಮಾಡಬೇಕಿತ್ತು.ಆದರೆ ಗುಂಪು ಸೇರಿ ಸಾಯಿಸುವ ಕೃತ್ಯಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಮರ್ಪಕವಾದ ಕಾನೂನೇ ಇಲ್ಲ. ಪ್ರಸ್ತುತ ಭಾರತೀಯ ದಂಡಸಂಹಿತೆಯ 302 ಮತ್ತು 34ನೇ ಸೆಕ್ಷನ್‌ ಪ್ರಕಾರ ಈ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಭಯ ಇಲ್ಲ ಎಂದಾದರೆ ಜನರು ತಾವು ಮಾಡಿದ್ದೇ ಸರಿ ಎಂದು ಭಾವಿಸುವ ಅಪಾಯವಿದೆ. ಸಮಾಜ ಈ ಹಂತಕ್ಕೆ ತಲುಪಿದರೆ ಅದು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ.ಇಷ್ಟರ ತನಕ ಸರಕಾರ ಇಂಥ ಕಾಠಿನ್ಯವನ್ನು ತೋರಿಸದಿರುವುದೇ ಪರಿಸ್ಥಿತಿ ಉಲ್ಬಣಿಸಲು ಕಾರಣ. ಈ ಕಠಿನತೆಯನ್ನೀಗ ಆಳುವವರು ತೋರಬೇಕಾಗಿದೆ. ನ್ಯಾಯಾಲಯವೂ ಇದೇ ದಾಟಿಯಲ್ಲಿ ಸರಕಾರಕ್ಕೆ ಚಾಟಿ ಬೀಸಿದೆ. 

ಲಿಂಚಿಂಗ್‌ ತಡೆಯಲು ಸಂಸತ್‌ನಲ್ಲಿ ವಿಶೇಷ ಕಾನೂನು ರಚನೆಯಾಗ ಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ವಿಳಂಬವಿಲ್ಲದೆ ಪಾಲಿಸುವ ವಿವೇಚನೆಯನ್ನು ಸರಕಾರ ತೋರಬೇಕು. ಸಮೂಹದಲ್ಲಿ ಸೇರಿ ಹೊಡೆದು ಸಾಯಿಸಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಂಡ ಧೈರ್ಯ ಮೂಡಿದರೆ ಕಾನೂನು ಅರ್ಥ ಕಳೆದುಕೊಳ್ಳುತ್ತದೆ. ಸಾಯಿಸುವವರು ಮತ್ತು ಸಾಯಿಸಲು ಕುಮ್ಮಕ್ಕು ನೀಡುವವರು ಇಬ್ಬರನ್ನೂ ಗುರುತಿಸಿ ಶಿಕ್ಷಿಸುವ ಕಾನೂನು ರಚನೆಯಾಗುಬೇಕಿರುವುದು ಸದ್ಯದ ಅಗತ್ಯ. ನಾಗರಿಕ ಸಮಾಜದಲ್ಲಿ ಒಂದು ಲಿಂಚಿಂಗ್‌ ಘಟನೆಯೇ ಎಚ್ಚೆತ್ತುಕೊಳ್ಳಲು ಸಾಕು. ಆದರೆ ನಾವು ಪದೇ ಪದೇ ಲಿಂಚಿಂಗ್‌ ಸಂಭವಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ ಎನ್ನುವುದೇ ನಮ್ಮ ರಾಜಕೀಯ ಇಚ್ಛಾಶಕ್ತಿಯ ಎದುರು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಇಡುತ್ತದೆ. ಇದರಲ್ಲಿ ಪೊಲೀಸರ ಪಾಲೂ ಇದೆ. ಹಲವು ಘಟನೆಗಳು ಪೊಲೀಸರ ಕಣ್ಮುಂದೆಯೇ ನಡೆದಿವೆ. ಕೃತ್ಯವನ್ನು ತಡೆಯುವುದಾಗಲಿ, ಆರೋಪಿಗಳನ್ನು ಬಂಧಿಸುವುದಾಗಲಿ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. 

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.