ಹುಚ್ಚಾಟಕ್ಕೆ ಇಳಿಯುತ್ತಿರುವ ಯುವಜನರು: ಇನ್ನೊಂದು ಸವಾಲು 


Team Udayavani, Aug 2, 2018, 6:00 AM IST

22.jpg

ಚಲಿಸುತ್ತಿರುವಾಗಲೇ ಕಾರಿನಿಂದ ಜಿಗಿದು ನಡುರಸ್ತೆಯಲ್ಲಿ ಅದರೊಂದಿಗೆ ಕುಣಿಯುತ್ತಾ ಸಾಗುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಗೇಮ್‌. ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆಗಳಿಂದ ನಿತ್ಯ ಇದರ ಸಾವಿರಾರು ವೀಡಿಯೊಗಳು ಅಪ್‌ಲೋಡ್‌ ಆಗುತ್ತಿವೆ. ಇದೇ ವೇಳೆ ಈ ಹುಚ್ಚಾಟಕ್ಕೆ ಇಳಿಯುತ್ತಿರುವ ಕೆಲವು ಯುವಜನರು ಸಾಕಷ್ಟು ಸಮಸ್ಯೆಗಳನ್ನೂ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಈ ಗೇಮ್‌ನಿಂದ ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಅಮೆರಿಕದಲ್ಲಿ ಓರ್ವ ತರುಣಿ ತಲೆಯೊಡೆದುಕೊಂಡಿದ್ದಾಳೆ. ಹಲವು ಮಂದಿ ರಸ್ತೆ ಬದಿಯ ಕಂಬಗಳಿಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ರಸ್ತೆ ಹೊಂಡಗಳಿಗೆ ಬಿದ್ದು ಕೈ ಕಾಲು ಮುರಿದುಕೊಂಡವರು ನೂರಾರು ಮಂದಿ. ಆಟ ಎಷ್ಟು ಗಂಭೀರ ಸಮಸ್ಯೆಯಾಗಿದೆ ಎಂದರೆ ಮುಂಬಯಿ, ದಿಲ್ಲಿ, ಚಂಡೀಗಢ ಸೇರಿದಂತೆ ಹಲವು ನಗರಗಳಲ್ಲಿ ಪೊಲೀಸರು ಈ ಆಟ ಆಡದಂತೆ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಈ ಆಟವಾಡಿ ಅಪ್‌ಲೋಡ್‌ ಮಾಡಿದ ನಟಿಯೊಬ್ಬಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಸ್ವತಃ ಆಟಗಾರರು ಅವಘಡವನ್ನು ಆಹ್ವಾನಿಸಿಕೊಳ್ಳುವುದಲ್ಲದೆ ರಸ್ತೆಯಲ್ಲಿರುವ ಇತರ ವಾಹನಗಳು ಮತ್ತು ಜನರನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ.

ಕೀಕಿ ಚಾಲೆಂಜ್‌ ಎಂಬ ಇದು ಕೆಲ ಸಮಯದ ಹಿಂದೆ ಕೋಲಾಹಲ ಎಬ್ಬಿಸಿದ್ದ ಬ್ಲೂವೇಲ್‌ ಚಾಲೆಂಜ್‌ನಷ್ಟೇ ಅಪಾಯಕಾರಿಯಾದುದು. ಇದಕ್ಕೂ ಮೊದಲು ಪೋಕಿಮನ್‌ ಗೋ ಎಂಬ ಆಟವೊಂದು ಇಂಥದ್ದೇ ಅಪಾ ಯಕ್ಕೆ ದೂಡಿತ್ತು. ಬ್ಲೂವೇಲ್‌ ಚಾಲೆಂಜ್‌ನ ಗುಂಗಿನಿಂದ ಯುವ ಜನತೆ ಇನ್ನೂ ಹೊರಬಂದಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಬಾಲಕನೊಬ್ಬ ಗುರುವಾಯೂನಕೆರೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನ ಪ್ಪಿದ್ದಕ್ಕೂ ಇದಕ್ಕೂ ಸಂಬಂಧವಿದೆ ಎಂಬ ಅನುಮಾನವಿತ್ತು. 

ಕೆನಡದ ರ್ಯಾಪ್‌ ಸಂಗೀತಗಾರ ಡ್ರೇಕ್‌ನ ಹೊಸ ಆಲ್ಬಂನಲ್ಲಿರುವ ಇನ್‌ ಮೈ ಫೀಲಿಂಗ್ಸ್‌ ಎಂಬ ಹಾಡಿನಿಂದ ಸ್ಫೂರ್ತಿ ಪಡೆದು ಹುಟ್ಟಿಕೊಂಡ ದ್ದು ಕೀಕಿ ಚಾಲೆಂಜ್‌. ಇಂಟರ್‌ನೆಟ್‌ ಹಾಸ್ಯ ಕಲಾವಿದ ಶಿಗ್ಗಿ ಇನ್‌ ಮೈ ಫೀಲಿಂಗ್‌ ಹಾಡಿನ ಧಾಟಿಗೆ ತಕ್ಕಂತೆ ಕುಣಿಯುವ ಹಾಡನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಈ ಚಾಲೆಂಜ್‌ ವೈರಲ್‌ ಆಗಿದೆ. ವಿಲ್‌ ಸ್ಮಿತ್‌, ಸಿಯಾರ ಮತ್ತಿತರ ಸೆಲೆಬ್ರಿಟಿಗಳು ಈ ಸವಾಲಿನಲ್ಲಿ ಸಹಭಾಗಿಗಳಾದ ಬಳಿಕ ಆಟ ವಿಪರೀತ ವೈರಲ್‌ ಆಗಿದೆ. ಸೆಲೆಬ್ರಿಟಿಗಳು, ಸಿನೆಮಾ ತಾರೆಯರಂಥ ಕೆಲವು ಜನಪ್ರಿಯ ವ್ಯಕ್ತಿಗಳು ಈ ಮಾದರಿಯ ಪ್ರಾಣಕ್ಕೆ ಸಂಚಕಾರ ತರುವ ಆಟಗಳ ರಾಯಭಾರಿಗಳೆನಿಸುವಂತೆ ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. 

ಜನಪ್ರಿಯ ಹಾಡು, ನೃತ್ಯ ಅಥವಾ ಆಟಗಳು ಜನರನ್ನು ಸಮೂಹ ಸನ್ನಿಗೊಳಪಡಿಸುವ ಸಾಮರ್ಥ್ಯ ಹೊಂದಿವೆ. ಕೆಲವು ವಿಚಿತ್ರ ಖಯಾಲಿಗಳ ವ್ಯಕ್ತಿಗಳು ಪರಿಣಾಮವನ್ನು ಲೆಕ್ಕಿಸದೆ ಇವುಗಳನ್ನು ಯಾವುದೋ ಸಾಹಸ ಕೃತ್ಯಕ್ಕೆ ಬಳಸುವುದು ಆನ್‌ಲೈನ್‌ ಯುಗದಲ್ಲಿ ಬಹುದೊಡ್ಡ ಸಮಸ್ಯೆ ಎನ್ನುತ್ತಾರೆ ಮನಶಾಸ್ತ್ರಜ್ಞರು. ನಿಜವಾಗಿ ನೋಡಿದರೆ ಕೀಕಿ ಚಾಲೆಂಜ್‌ನಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ಥ್ರಿಲ್‌ ಬಯಸುವ ಯುವ ಜನತೆಯ “ಈಗೊ’ ಸಂತೃಪ್ತವಾಗಬಹುದೇನೋ. ಈ ರೀತಿಯ ಅಪಾಯ ಕಾರಿ ಆಟಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಮೆಚ್ಚುಗೆಗಳು ಅವರೊಳಗೆ ತಾವೇನೋ ದೊಡ್ಡ ಸಾಹಸ ಮಾಡಿ ಕೃತಾರ್ಥರಾಗಿದ್ದೇವೆ ಎಂಬ ಭಾವನೆ ಮೂಡಿಸುತ್ತದೆ. ಇದು ನಿಜದ ಯಶಸ್ಸಲ್ಲ. 

ಕೀಕಿ ಚಾಲೆಂಜ್‌ ಆಡುವವರು ಸದ್ಯಕ್ಕೆ ಕಾರನ್ನು ಬಳಸುತ್ತಿರುವವರು. ಆದರೆ ಇದುವೇ ಮುಂದೆ ಚಲಿಸುತ್ತಿರುವ ಬೈಕಿನಿಂದಲೋ, ಬಸ್ಸಿನಿಂದಲೋ ಜಿಗಿದು ಕುಣಿದು ಮತ್ತೆ ಹತ್ತುವಂಥ ವಿಚಿತ್ರ ಆಟಗಳಾಗಿ ಬದಲಾದರೆ ನಿರ್ವಹಿಸಲಾಗದು. ಇದಕ್ಕೂ ಮಿಗಿಲಾಗಿ ಇವು ತಂದೊಡ್ಡುತ್ತಿರುವ ಹಲವು ಸಮಸ್ಯೆಗಳನ್ನು ನಿರ್ವಹಿಸಲು ಸರಕಾರ ಆರಂಭದಲ್ಲೇ ತಡೆಯುವುದು ಸೂಕ್ತ.

ಟಾಪ್ ನ್ಯೂಸ್

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.