ಪರ್ಯಾಯ ನಾಯಕರು ಕಾಣಿಸುತ್ತಿಲ್ಲ


Team Udayavani, Aug 9, 2018, 6:00 AM IST

24.jpg

1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

ಮುಖಂಡರು ತೀರಿಕೊಂಡಾಗ ಶೂನ್ಯವೊಂದು ಸೃಷ್ಟಿಯಾಗಿದೆ ಮತ್ತು ಈ ಶೂನ್ಯವನ್ನು ತುಂಬುವುದು ಅಸಾಧ್ಯ ಎನ್ನುವುದು ಗೌರವ ಸಲ್ಲಿಸುವ ಒಂದು ವಾಡಿಕೆಯ ಹೇಳಿಕೆ ಎಂದಷ್ಟೆ ಪರಿಗಣಿಸಲ್ಪಡುತ್ತದೆ. ಆದರೆ ಕರುಣಾನಿಧಿ ವಿಚಾರದಲ್ಲಿ ಮಾತ್ರ ಇದು ಬರೀ ಔಪಚಾರಿಕ ಮಾತಲ್ಲ. ಅವರ ಅಗಲಿಕೆಯಿಂದ ಕನಿಷ್ಠ ತಮಿಳುನಾಡಿನ ರಾಜಕೀಯದಲ್ಲಾದರೂ ದೊಡ್ಡದೊಂದು ಶೂನ್ಯ ನಿರ್ಮಾಣವಾಗಿದ್ದು, ಅದನ್ನು ತುಂಬುವ ನಾಯಕ ಸದ್ಯ ಅಲ್ಲಿ ಕಾಣಿಸುತ್ತಿಲ್ಲ. ಜಯಲಲಿತಾ ಮತ್ತು ಕರುಣಾನಿಧಿ ತಮಿಳುನಾಡಿನ ರಾಜಕೀಯವನ್ನು ಆವರಿಸಿಕೊಂಡ ಪರಿ ಆ ರೀತಿಯಿತ್ತು. ಈಗ ಅವರಿಬ್ಬರೂ ಇಲ್ಲದಿರುವುದರಿಂದ ಅಲ್ಲಿನ ರಾಜಕೀಯ ಹೊಸ ಆಯಾಮದತ್ತ ಹೊರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ಎಂ.ಜಿ. ರಾಮಚಂದ್ರನ್‌ ನಿಧನರಾದಾಗ ಆ ಸ್ಥಾನವನ್ನು ತುಂಬಲು ಕರುಣಾನಿಧಿ ಇದ್ದರು. ಆದರೆ ಜಯಲಲಿತಾ ನಿಧನ ರಾದಾಗ ಅವರ ಪಕ್ಷದಲ್ಲಿ ಆ ಮಟ್ಟದ ಇನ್ನೋರ್ವ ನಾಯಕ ಇರಲಿಲ್ಲ. ಅದೇ ರೀತಿ ಈಗ ಕರುಣಾನಿಧಿ ನಿಧನರಾದಾಗ ಅವರ ಸರಿಸಮಾನ ನಾಯಕ ಇನ್ನೊಬ್ಬರಿಲ್ಲದಂತಾಗಿದೆ. ಮಗ ಸ್ಟಾಲಿನ್‌ ಉತ್ತರಾಧಿಕಾರಿಯ ಸ್ಥಾನದಲ್ಲಿ ಈಗಾಗಲೇ ಇದ್ದರೂ ಅವರಿಂದ ಕರುಣಾನಿಧಿಯ ರೀತಿಯಲ್ಲಿ ರಾಜಕೀಯ ದಾಳಗಳನ್ನು ಉರುಳಿಸುವ ಸಾಮರ್ಥ್ಯ ಇರುವುದು ಇನ್ನೂ ಸಾಬೀತಾಗಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭೆ ಸ್ಟಾಲಿನ್‌ ಸಾಮರ್ಥ್ಯ ಪರೀಕ್ಷಿಸುವ ವೇದಿಕೆ ಯಾಗಿತ್ತು. ಇದರಲ್ಲಿ ಅವರು ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ಜತೆಗೆ ಅಧಿಕಾರಕ್ಕಾಗಿ ಸಹೋದರರೊಳಗೆ ಕಚ್ಚಾಟವೂ ಇರುವುದರಿಂದ ಕ‌ರುಣಾನಿಧಿ ಬಳಿಕ ಯಾರು ಎಂಬ ಪ್ರಶ್ನೆ ಈಗಲೇ ಡಿಎಂಕೆಯಲ್ಲಿ ಮೂಡಿದೆ. 

ಸಿನೆಮಾ ನಟರಾದ ಕಮಲಹಾಸನ್‌ ಮತ್ತು ರಜನೀಕಾಂತ್‌ ಪ್ರವೇಶದ ಬಳಿಕ ತಮಿಳುನಾಡಿನ ರಾಜಕೀಯ ಹೊಸ ಆಯಾಮದತ್ತ ಹೊರಳಿದೆ. ಜತೆಗೆ ಟಿಟಿವಿ ದಿನಕರನ್‌ ಬಲಾಡ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಎಐಎಡಿಎಂಕೆಯಲ್ಲಿರುವ ಅಸ್ಥಿರತೆಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿಯೂ ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಡಿಎಂಕೆಯನ್ನು ಉಳಿಸಿಕೊಳ್ಳಲು ಯಾವ ತಂತ್ರಗಾರಿಕೆಯನ್ನು ಸ್ಟಾಲಿನ್‌ ಉಪಯೋಗಿಸುತ್ತಾರೆ ಎನ್ನುವುದರ ಮೇಲೆ ಅವರ ಮತ್ತು ಪಕ್ಷದ ಭವಿಷ್ಯವಿದೆ. 

ಕರುಣಾನಿಧಿ ಪ್ರಾದೇಶಿಕ ಪಕ್ಷವೊಂದರ ನಾಯಕರಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಚೆನ್ನೈಯಲ್ಲಿ ದ್ದುಕೊಂಡೇ ದಿಲ್ಲಿಯ ರಾಜಕೀಯವನ್ನು ನಿರ್ದೇಶಿಸುವ ಕಲೆಯನ್ನು ಅವರು ಸಿದ್ಧಿಸಿಕೊಂಡಿದ್ದರು. ಹಾಗೆ ನೋಡಿದರೆ 1969ರಲ್ಲಿ ಅಣ್ಣಾದೊರೆ ನಿಧನರಾಗಿ ಅಧಿಕಾರದ ಚುಕ್ಕಾಣಿ ಕೈಗೆ ಬಂದಾಗಲೇ ರಾಷ್ಟ್ರ ರಾಜಕಾರಣಕ್ಕೆ ಕರುಣಾನಿಧಿಯವರ ಪ್ರವೇಶವಾಗಿತ್ತು. ಆ ಸಂದರ್ಭದಲ್ಲಿ ವಿ. ವಿ.ಗಿರಿಯನ್ನು ರಾಷ್ಟ್ರಪತಿ ಮಾಡಲು ಇಂದಿರಾ ಗಾಂಧಿಗೆ ಕರುಣಾನಿಧಿ ಬೆಂಬಲ ನೀಡಿದ್ದರು. 

1940ರಿಂದ 1960ರ ತನಕ ಹಿಂದಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಹೊರತಾಗಿಯೂ 1996ರಲ್ಲಿ ಸಂಯುಕ್ತ ರಂಗ, 1999ರಲ್ಲಿ ಎನ್‌ಡಿಎ ಮತ್ತು 2004ರಲ್ಲಿ ಯುಪಿಎ ಮೈತ್ರಿಕೂಟದಲ್ಲಿ ಕರುಣಾನಿಧಿ ಸೇರಿಕೊಂಡಿದ್ದರು. ಹಿಂದಿ ವಿರೋಧಿ ನಿಲುವು ರಾಷ್ಟ್ರ ರಾಜಕಾರಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಮೈತ್ರಿಕೂಟದಲ್ಲಿ ಸೇರಿಕೊಳ್ಳುವುದು ಮತ್ತು ಅದರಿಂದ ತನ್ನ ರಾಜ್ಯಕ್ಕೆ ಗರಿಷ್ಠ ಪ್ರಯೋಜನವಾಗುವಂತೆ ನೋಡಿಕೊಳ್ಳುವುದರಲ್ಲಿ ಕರುಣಾನಿಧಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. 1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.