ಗುರುಗುಂಟಿರಾಯರಿಗೆ ಕ್ಯಾಪಿಟಲ್‌ ಗೈನ್ಸ್‌ನ ಕಾಕು ಚಾಲೆಂಜ್‌ 


Team Udayavani, Aug 20, 2018, 6:00 AM IST

30.jpg

ಸ್ಯಾಲರೀಡ್‌ ಎಂಪ್ಲಾಯಿಗಳು ಆಡುಭಾಷೆಯಲ್ಲಿ ಇಂಕಂ ಟ್ಯಾಕ್ಸ್‌ ಎನ್ನುವುದು ಸಂಬಳದ ಆದಾಯಕ್ಕೆ. ಸ್ಯಾಲರೀಡ್‌ ಕ್ಲಾಸಿನ ಬಹುತೇಕರಿಗೆ ಬೇರೆ ಏನೂ ಆದಾಯವಿರುವುದಿಲ್ಲ. ಅಂತಹವರಿಗೆ ಇತರ ಆದಾಯ ತೆರಿಗೆ‌ ಬಗ್ಗೆ ಮಾಹಿತಿ ಇರುವುದಿಲ್ಲ. 

ಗುರುಗುಂಟಿರಾಯರು ಮತ್ತೂಮ್ಮೆ ಚಿಂತೆಗೆ ಒಳಗಾಗಿದ್ದಾರೆ. ಬೇಡದ ಕೆಲ್ಸಕ್ಕೆ ಕೈ ಹಾಕಿದರೆ ಹೀಗೇನೇ ಆಗೋದು. ವಿಷಯ ಏನಪ್ಪಾ ಅಂತಂದ್ರೆ ಗುರುಗುಂಟಿರಾಯರು ಕಾಕು ಕಾಲಂನಲ್ಲಿ ಬರತೊಡಗಿದ ನಂತ್ರ ಒಂದು ರೀತಿಯ ವಿತ್ತ ಎಕ್ಸ್‌ಪರ್ಟ್‌ ಎಂದು ಜನರು ತಿಳಿದು ಕೊಂಡಿದ್ದಾರೆ. ಅವರು ಸಿಕ್ಕಾಗಲೆಲ್ಲಾ ಅಥವಾ ಸಿಗದಿದ್ದರೂ ಫೋನಾಯಿಸಿ ತಮ್ಮ ದೊಂದು ಕರಗೊಂದಲವನ್ನು ಅವರತ್ತ ಎಸೆದು ಪರಿಹಾರಕ್ಕಾಗಿ ಪ್ರಾರ್ಥಿಸುವುದು ಇತ್ತೀಚೆಗೆ ಕಾಮನ್‌ ಆಗ್ಬಿಟ್ಟಿದೆ. ತತ್ಪರಿಣಾಮವಾಗಿ, ತಾವೇ ಮಹಾ ಟ್ಯಾಕ್ಸ್‌ ಎಕ್ಸ್‌ಪರ್ಟ್‌ ಎನ್ನುವ ರೀತಿಯಲ್ಲಿ ಜನರಿಗೆ ಸಲಹೆ ನೀಡುತ್ತಾ ತಿರುಗು ವುದರಿಂದ ಅವರಿಗೆ ಸ್ವಲ್ಪ ಅಹಂ ಬಂದಿದೆ. ಆದರೀಗ ಅಹಂ ಟುಸ್ಸಾಗಿಸುವಂತಹ ಕರಗೊಂದಲವೊಂದು ಅವರನ್ನು ಆವರಿಸಿದೆ. “ಶೇರು, ಭೂಮಿ ಮತ್ತಿತರ ಆಸ್ತಿಗಳ ಮೇಲಿನ ಆದಾಯದ ಮೇಲೆ ತೆರಿಗೆ ಲೆಕ್ಕಾಚಾರ ಹೇಗ್ಸಾರ್‌? ಎಂಬ ಪ್ರಶ್ನೆಯನ್ನು ಒಬ್ಟಾತ ಓದುಗ ಎಸೆದು ಗುರುಗುಂಟಿರಾಯರಿಗೆ “ಕಾಕು ಚ್ಯಾಲೆಂಜ…’ ಹಾಕಿದ್ದಾರೆ. ಸದ್ಯಕ್ಕೆ ರಾಯರ ಸ್ಟೇಟಸ್‌ ಅಪ್ಡೆಟ್‌ – “ಬೆಚ್ಚಡುಳ್ಳೆ, ತಾಗೊಡಚಿ’… 

ಈಗ ಕ್ಯಾಪಿಟಲ್‌ ಗೈನ್ಸ್‌ ಬಗ್ಗೆ ಸ್ವಲ್ಪ ಕೊರೆಯೋಣ 
ಒಬ್ಬ ವ್ಯಕ್ತಿಗೆ ಈ ಕೆಳಗಿನ ಮೂಲಗಳಿಂದ ಆದಾಯ ಬರಬಹುದು 

1. ಸಂಬಳದ ಆದಾಯ
2. ಗೃಹ ಸಂಬಂಧಿ ಆದಾಯ 
3. ಬಿಸಿನೆಸ್‌ ಅಥವ ವೃತ್ತಿಯಲ್ಲಿ ಲಾಭ
4. ಕ್ಯಾಪಿಟಲ್‌ ಗೈನ್ಸ್‌
5. ಇತರ ಆದಾಯ 

ನಮ್ಮ ಗುರುಗುಂಟಿರಾಯರಂತಹ ಸ್ಯಾಲರೀಡ್‌/ಪೆನ್ಶನ್‌ ಎಂಪ್ಲಾಯಿಗಳು ಆಡುಭಾಷೆಯಲ್ಲಿ ಇಂಕಂ ಟ್ಯಾಕ್ಸ್‌ ಎನ್ನುವುದು ಸಂಬಳದ ಆದಾಯಕ್ಕೆ. ಅದು ಏಕೆಂದರೆ ಸ್ಯಾಲರೀಡ್‌ ಕ್ಲಾಸಿನ ಬಹುತೇಕ ಮಂದಿಗೆ ಅದು ಬಿಟ್ಟು ಬೇರೆ ಏನೂ ಆದಾಯವಿರುವುದಿಲ್ಲ. ಹಾಗಾಗಿ ಅಂತಹವರಿಗೆ ಬೇರೆ ಇತರ ಆದಾಯಗಳ ಬಗ್ಗೆ, ತತ್ಸಂಬಂಧಿ ತೆರಿಗೆಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಈ ಎಲ್ಲಾ ಆದಾಯಗಳನ್ನು ಒಟ್ಟಿಗೆ ನೋಡಿ ಆಯಾ ಸೆಕ್ಷನ್‌ ಪ್ರಕಾರ ಕರಲೆಕ್ಕ ಹಾಕಬೇಕು. 

ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌
ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವ ಮೂಲಧನವೆಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಅಗಾಗ್ಗೆ ಬರುವ ಬಡ್ಡಿ, ಡಿವಿಡೆಂಡ್‌ ಇತ್ಯಾದಿಗಳು ಮೇಲ್ಕಾಣಿಸಿದ “ಇತರ ಆದಾಯ’ ಆಗುತ್ತದೆ. ಅವಕ್ಕೆ ಆ ಪ್ರಕಾರ ತೆರಿಗೆ ಅನ್ವಯವಾಗುತ್ತದೆ. ಆದರೆ ಅದೇ ಆಸ್ತಿಯನ್ನು ಕೊನೆಗೊಮ್ಮೆ ಮಾರಿಬಿಟ್ಟಾಗ ಬರುವ ಲಾಭವನ್ನು ಕ್ಯಾಪಿಟಲ್‌ ಗೈನ್ಸ್‌ (ಕ್ಯಾಪಿಟಲ್‌ ಗಳಿಕೆ) ಅನ್ನುತ್ತಾರೆ. ಕರ ಲೆಕ್ಕಾಚಾರದ ದೃಷ್ಟಿಯಿಂದ ಕ್ಯಾಪಿಟಲ್‌ ಗಳಿಕೆಯನ್ನು ಇತರ 4 ರೀತಿಯ ಆದಾಯಗಳ ರೀತಿಯಲ್ಲಿ ಲೆಕ್ಕ ಹಾಕುವುದಿಲ್ಲ. ಅದಕ್ಕೆ ಅದರದ್ದೇ ಪ್ರತ್ಯೇಕವಾದ ವಿಶೇಷ ಲೆಕ್ಕಾಚಾರವಿದೆ. 

ಕ್ಯಾಪಿಟಲ್‌ ಗಳಿಕೆಯನ್ನು ದೀರ್ಘ‌ಕಾಲಿಕ (Long term Capital Gains) ಹಾಗೂ ಅಲ್ಪ ಕಾಲಿಕ (Short Term Capital gains) ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ನಮೂನೆಯ ಕ್ಯಾಪಿಟಲ್‌ ಎನ್ನುವುದರ ಮೇಲೆ ಭೌತಿಕ ಮತ್ತು ವಿತ್ತೀಯ ಎಂಬ ಇನ್ನೆರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿತ್ತೀಯದ ಒಳಗೂ ಈಕ್ವಿಟಿ ಮತ್ತು ಈಕ್ವಿಟಿಯೇತರ ಹಾಗೂ ಈಕ್ವಿಟಿಯ ಒಳಗೆ ಎಸ್‌.ಟಿ.ಟಿ ಕರ (Securities Transaction Tax)ತೆತ್ತ ಹಾಗೂ ತೆರದ – ಹೀಗೆ ಇನ್ನೆರಡು ಕೆಟಗರಿಯಾನುಸಾರ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಬೇರೆ ಬೇರೆ ದರಗಳಲ್ಲಿ ವಿಧಿಸಲ್ಪಡುತ್ತದೆ. (ಟೇಬಲ್‌ ನೋಡಿ)

ಕ್ಯಾಪಿಟಲ್‌ ಗೈನ್ಸ್‌ ಲೆಕ್ಕ ಹೇಗೆ?
ಮೂಲಧನದಲ್ಲಿ ವೃದ್ಧಿ ಅಂದ ಮೇಲೆ ಕ್ಯಾಪಿಟಲ್‌ ಗೈನ್ಸ್‌ ಆದಾಯಕ್ಕೆ ಮಾರಾಟದ ಬೆಲೆ ಕಳೆ ಮೂಲ ಹೂಡಿಕೆ ಎಂಬ ಸರಳ ಸಮೀಕರಣ ಬಳಸಬಹುದು. 
ಕ್ಯಾಪಿಟಲ್‌ ಗೈನ್ಸ್‌= ಮಾರಾಟ ಬೆಲೆ – (ಮೂಲ ವೆಚ್ಚ+ಅಭಿವೃದ್ಧಿ ವೆಚ್ಚ)
ಅಲ್ಪಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಲೆಕ್ಕಾಚಾರ ಈ ರೀತಿಯೇ ಹಾಕಲಾಗುತ್ತದೆ. 
ಆದರೆ ಕ್ಯಾಪಿಟಲ್‌ ಗೈನ್ಸ್‌ ಕೇವಲ ಹಣದುಬ್ಬರದಿಂದಲೂ ಉಂಟಾಗಬಹುದಲ್ಲವೇ? ಅದರ ಮೇಲೂ ಕರ ವಿಧಿಸುವುದು ಸಾಧುವೇ ಎಂಬ ಪ್ರಶ್ನೆ ಬರುತ್ತದೆ.  ಹಾಗಾಗಿ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಲೆಕ್ಕ ಹಾಕುವಲ್ಲಿ ಸರಕಾರ ಹಣದುಬ್ಬರದ ಪಾಲಿಸಿ ವೃದ್ಧಿಯನ್ನು ಹೊರತಾಗಿಸಿ ಉಳಿದ ನೈಜವಾದ ಧನವೃದ್ಧಿಯ ಮೇಲೆ ಮಾತ್ರ ಕರ ಬೀಳುವಂತೆ ಅನುಕೂಲ ಮಾಡಿಕೊಟ್ಟಿದೆ. ಹಣದುಬ್ಬರದ ಭಾಗವನ್ನು ಹೊರತಾಗಿಸಲು ಹಣದುಬ್ಬರ ಆಧಾರಿತ ಇಂಡೆಕ್ಸೇಶನ್‌ ಬಳಸಬೇಕು. 

ಇಂಡೆಕ್ಸೇಶನ್‌
ಈ ಪದ್ಧತಿಯಲ್ಲಿ ಪ್ರತಿ ವರ್ಷವೂ ಬೆಲೆಯೇರಿಕೆ ಸೂಚ್ಯಂಕಾ ಧಾರಿತ ಇಂಡೆಕ್ಸ್‌ ಸಂಖ್ಯೆಯನ್ನು (CII= Cost Inflation Index)ಸರಕಾರ ಘೋಷಿಸುತ್ತದೆ. ಆ ಸಂಖ್ಯೆಯಿಂದ ಆ ಆಸ್ತಿಯ ಖರೀದಿ ಮತ್ತು ಅಭಿವೃದ್ಧಿ ವೆಚ್ಚವನ್ನು ಗುಣಾಕಾರ ಮೂಲಕ ಹೆಚ್ಚಿಸಿಕೊಂಡ ಮೇಲೆಯೇ ಮಾರಾಟ ಬೆಲೆಯಿಂದ ಕಳೆದು ಕ್ಯಾಪಿಟಲ್‌ ಗಳಿಕೆಯನ್ನು ಲೆಕ್ಕ ಹಾಕಬೇಕು. ಈ ರೀತಿ ಬೆಲೆಯೇರಿಕೆಯ ಅಂಶವನ್ನು ತೆಗೆದುಹಾಕಿ ಶುದ್ಧ ಲಾಭಕ್ಕೆ ಮಾತ್ರ ಕರ ನೀಡಿದಂತಾಗುತ್ತದೆ. 

ಉದಾ: 1990ರಲ್ಲಿ (ವರ್ಷದ ಇಂಡೆಕ್ಸ್‌ 172) ರೂ. 100 ಕೊಟ್ಟು ಖರೀದಿಸಿ ಅಭಿವೃದ್ಧಿ ಪಡಿಸಿದ ಆಸ್ತಿಯನ್ನು 2010ರಲ್ಲಿ (ವರ್ಷದ ಇಂಡೆಕ್ಸ್‌ 632) ರೂ. 400ಕ್ಕೆ ಮಾರಿದರೆ ಸರಳವಾಗಿ ರೂ. 300 (ಅಂದರೆ 400-100) ಕ್ಯಾಪಿಟಲ್‌ ಗೈನ್ಸ್‌. ಆದರೆ ಇಂಡೆಕ್ಸೇಶನ್‌ ಪ್ರಕಾರ 400- (100*632/172) = ರೂ. 33 ಮಾತ್ರ ಕ್ಯಾಪಿಟಲ್‌ ಗೈನ್ಸ್‌. 

set & off  ಮತ್ತು ನಷ್ಟದ Carry & Forward 
ಅಲ್ಪಕಾಲಿಕ ಕ್ಯಾಪಿಟಲ್‌ ನಷ್ಟವನ್ನು ಅಲ್ಪ ಅಥವಾ ದೀರ್ಘ‌ ಕಾಲಿಕ ಕ್ಯಾಪಿಟಲ್‌ ಲಾಭದೊಡನೆ ಸೆಟ್‌-ಆಫ್ ಅಥವಾ ವಿಲೀನಗೊಳಿಸಬಹುದಾಗಿದೆ. ಆದರೆ ದೀರ್ಘ‌ಕಾಲಿಕ ನಷ್ಟವನ್ನು ಮಾತ್ರ ಇನ್ನೊಂದು ದೀರ್ಘ‌ಕಾಲಿಕ ಲಾಭದೊಡನೆ ಮಾತ್ರ ಸೆಟ್‌-ಆಫ್ ಮಾಡಬಹುದಾಗಿದೆ. ಅಲ್ಲದೆ ಯಾವುದೇ ಕ್ಯಾಪಿಟಲ್‌ ಗೈನ್‌ ನಷ್ಟವನ್ನು ಇತರ ಯಾವುದೇ ಆದಾಯದ ಕೆಟಗರಿಯೊಂದಿಗೆ ಸೆಟ್‌-ಆಫ್ ಮಾಡಲೂ ಆಗುವುದಿಲ್ಲ. ಒಂದು ವರ್ಷದಲ್ಲಿ ಸೆಟ್‌-ಆಫ್ ಆಗದ ನಷ್ಟವನ್ನು 8 ವರ್ಷಗಳವರೆಗೆ ಪೇರಿಸಿಗೊಂಡು ಹೋಗಿ (Carry forward) ಮುಂದಿನ ವರ್ಷಗಳಲ್ಲಿ ಬರುವ ಕ್ಯಾಪಿಟಲ್‌ ಲಾಭದೊಂದಿಗೆ ಮೇಲೆ ಹೇಳಿದಂತೆ ಸೆಟ್‌ – ಆಫ್ ಮಾಡಬಹುದಾಗಿದೆ. 

ಕಾಪಿಟಲ್‌ ಗೈನ್ಸ್‌ ತೆರಿಗೆ ವಿನಾಯಿತಿ 
1    ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗಳಿಕೆ (3 ವರ್ಷ ಮೀರಿ) ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆಗೆ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವಾ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕ್ಯಾಪಿಟಲ್‌ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚು ಮಾಡಿದರೆ ಅಷ್ಟೇ ಭಾಗದ (Pto rata) ವಿನಾಯತಿ ಸಿಗುತ್ತದೆ. ಖರೀದಿ ಮಾಡುವವರೆಗೆ ದುಡ್ಡನ್ನು ಕ್ಯಾಪಿಟಲ್‌ ಗೈನ್ಸ್‌ ಎಕೌಂಟ್‌ ಸ್ಕೀಂ (CGAS)ನಲ್ಲಿ ಇಡಬೇಕು.

2    ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು ಮನೆಯೇತರ ಬೇರೆ ಯಾವುದಾದರೂ ಕ್ಯಾಪಿಟಲ್‌ ಆಸ್ತಿಯನ್ನು ಮಾರಾಟ ಮಾಡಿ ಕ್ಯಾಪಿಟಲ್‌ ಗೈನ್ಸ್‌ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್‌ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು. ಅಲ್ಲದೆ, ಇಲ್ಲೂ CGAS clause ಇದೆ.
 
3    ಯಾವುದೇ ಕ್ಯಾಪಿಟಲ್‌ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕ್ಯಾಪಿಟಲ್‌ ಗಳಿಕೆಯನ್ನು ರೂರಲ್‌ ಎಲೆಕ್ಟ್ರಿಫಿಕೇಶನ್‌ ಕಾರ್ಪೋರೇಶನ್‌ (REC) ಅಥವಾ ನ್ಯಾಶನಲ್‌ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಕನಿಷ್ಟ 3 ವರ್ಷಕ್ಕೆ ಹೂಡಿದರೆ (ವಾರ್ಷಿಕ ಮಿತಿ 50 ಲಕ್ಷ) ಅಂತಹ ಕ್ಯಾಪಿಟಲ್‌ ಗಳಿಕೆ ಸಂಪೂರ್ಣವಾಗಿ ಕರಮುಕ್ತ. 
ಕರ ಪಾವತಿ ಮೇಲೆ ಹೇಳಿದ ರೀತಿಯಲ್ಲಿ ಲೆಕ್ಕ ಹಾಕಿದ ನಂತರ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಗಳಿಕೆಯ ಮೇಲೆ 80ಸಿ ಇತ್ಯಾದಿ ಸೆಕ್ಷನ್‌ ಅಡಿಯಲ್ಲಿ ಪುನಃ ಕರ ವಿನಾಯಿತಿ ಸಿಗುವುದಿಲ್ಲ. ಹಾಗಾಗಿ ನಿಮ್ಮ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗಳಿಕೆಯ ಮೇಲೆ ಕೋಷ್ಟಕದ ಪ್ರಕಾರ ತೆರಿಗೆ ಪಾವತಿ ಮಾಡತಕ್ಕದ್ದು. 

ನಿವಾಸಿ ಭಾರತೀಯರು ಬೇಸಿಕ್‌ ಕರ ವಿನಾಯಿತಿಯ ಮಿತಿಯಾದ ರೂ. 2.5 ಲಕ್ಷ (ಹಿರಿಯ ನಾಗರಿಕರಿಗೆ ರೂ.3 ಲಕ್ಷ ಹಾಗೂ ಅತಿ ಹಿರಿಯ ನಾಗರಿಕರಿಗೆ ರೂ. 5 ಲಕ್ಷ) ವಾರ್ಷಿಕದ ಲಾಭವನ್ನು ಪಡೆಯಬಹುದು. ಆ ಮಿತಿಯನ್ನು ಮೀರಿದ ಮೊತ್ತಕ್ಕೆ ಮಾತ್ರ ಕೋಷ್ಟಕದ ಪ್ರಕಾರ ಕರ ಕಟ್ಟಿದರೆ ಸಾಕು. ಆದರೆ ಈ ಸೌಲಭ್ಯ ಎನ್ನಾರೈಗಳಿಗೆ ಇಲ್ಲ. ಅವರು ಪೂರ್ತಿ ಧನವೃದ್ದಿಯ ಮೇಲೆ ಕರಕಟ್ಟಬೇಕು.

(ಗಮನಿಸಿ: ಈ ಲೇಖನವನ್ನು ನಾವೀಗ ಆಗಸ್ಟ್‌ 31, 2018ರ ಒಳಗಾಗಿ ರಿಟರ್ನ್ ಫೈಲಿಂಗ್‌ ಮಾಡಬೇಕಾಗಿರುವ ವಿತ್ತ ವರ್ಷ 2017-18 ಅಂದರೆ ಅಸೆನ್ಮೆಂಟ್‌ ವರ್ಷ 2018-19ರ ಅನುಸಾರ ತಯಾರಿಸಲಾಗಿದೆ. 2018 ಬಜೆಟಿನಲ್ಲಿ ಘೋಷಣೆಯಾದ ಬದಲಾವಣೆಗಳು ಪ್ರಸ್ತುತ ವಿತ್ತ ವರ್ಷ 2017-18 ಕ್ಕೆ ಅನ್ವಯವಾಗುವುದಿಲ್ಲ.)

 ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.