ವಾಟ್ಸ್‌ಆ್ಯಪ್‌ಗೆ ಎಚ್ಚರಿಕೆ ಸ್ವಾಗತಾರ್ಹ


Team Udayavani, Aug 23, 2018, 6:00 AM IST

s-12.jpg

ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳು ಸುದ್ದಿಗಳು ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ವಾಟ್ಸ್‌ಆ್ಯಪ್‌ ಸೃಷ್ಟಿಸುತ್ತಿರುವ ಅವಾಂತರಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಡುವ ಮಕ್ಕಳ ಕಳ್ಳರೆಂಬ ಸುಳ್ಳು ಸುದ್ದಿಗಳನ್ನು ನಂಬಿ ಜನರು ಗುಂಪುಗೂಡಿ ಥಳಿಸಿ ಸಾಯಿಸಿದ ಹಲವು ಪ್ರಕರಣಗಳು ದೇಶದ ಹಲವೆಡೆಗಳಲ್ಲಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ಲಗಾಮು ಹಾಕುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ವಾಟ್ಸ್‌ಆ್ಯಪ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ಕರೆಸಿಕೊಂಡು ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆಹಚ್ಚಲು ತಾಂತ್ರಿಕವಾದ ದಾರಿಯನ್ನು ಹುಡುಕಬೇಕೆಂದು ಕಟ್ಟುನಿಟ್ಟಾಗಿ ಹೇಳಿರುವುದು ಸ್ವಾಗತಾರ್ಹ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ತನ್ನನ್ನು ಭೇಟಿಯಾದ ವಾಟ್ಸ್‌ಆ್ಯಪ್‌ ಸಿಇಒ ಕ್ರಿಸ್‌ ಡೇನಿಯಲ್ಸ್‌ಗೆ ಭಾರತದಲ್ಲಿ ಕಾರ್ಪೋರೇಟ್‌ ಘಟಕ ಸ್ಥಾಪಿಸಿ ಸ್ಥಳೀಯ ಕಚೇರಿ ತೆರೆಯಬೇಕೆಂದು ಹೇಳಿದ್ದಾರೆ ಹಾಗೂ ಜೊತೆಗೆ ಭಾರತೀಯ ಗ್ರಾಹಕರ ಅಹವಾಲುಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಲೂ ಸೂಚಿಸಿದ್ದಾರೆ. 

ಸುಳ್ಳು ಸುದ್ದಿಗಳು ಹರಡುವುದನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ತಾಕೀತು ಮಾಡಿದ ಬೆನ್ನಿಗೆ ದಿಲ್ಲಿಗೆ ದೌಡಾಯಿಸಿದ ಡೇನಿಯಲ್ಸ್‌ಗೆ ಪ್ರಸಾದ್‌ ನೆಲದ ಕಾನೂನು ಪಾಲಿಸಬೇಕೆಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತದಲ್ಲಿ ಕಚೇರಿ ಆರಂಭಿಸಿದರೆ ನೆಲದ ಕಾನೂನು ವ್ಯಾಪ್ತಿಗೆ ಈ ಕಚೇರಿಯೂ ಒಳಪಡುವುದರಿಂದ ಕಾನೂನು ಪಾಲನೆ ಸಾಧ್ಯವಾಗುತ್ತದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಜನಪ್ರಿಯ ಸೋಷಿಯಲ್‌ ಮೀಡಿಯಾಗಳ ಕಚೇರಿಗಳಿರುವುದು ವಿದೇಶಗಳಲ್ಲಿ. ಹೀಗಾಗಿ ಅವುಗಳಿಗೆ ಮೂಗುದಾರ ತೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಸುಳ್ಳು ಸುದ್ದಿ ಸೃಷ್ಟಿಸಿದ್ದು ಯಾರೆಂದು ತಿಳಿಯಬೇಕಿದ್ದರೆ ಈ ಕಚೇರಿಗಳಿಗೆ ಮನವಿ ಮಾಡಬೇಕಿತ್ತು. ವಿದೇಶ ಗಳಲ್ಲಿರುವ ಅಧಿಕಾರಿಗಳು ಇಷ್ಟವಿದ್ದರೆ ಮಾಹಿತಿ ಕೊಡುತ್ತಿದ್ದರು ಇಲ್ಲದಿದ್ದರೆ ನಿರ್ಲಕ್ಷಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಈ ಮಾಧ್ಯಮವನ್ನು ಉತ್ತರದಾಯಿ ಮಾಡುವ ಅವಕಾಶ ಸರಕಾರಕ್ಕಿರಲಿಲ್ಲ. ಹೀಗಾಗಿ ಇದು ಒಂದು ಉತ್ತಮ ಕ್ರಮ. ವಾಟ್ಸ್‌ಆ್ಯಪ್‌ ಮಾತ್ರವಲ್ಲದೆ ಫೇಸ್‌ಬುಕ್‌ ಸೇರಿದಂತೆ ಉಳಿದ ಸೋಷಿಯಲ್‌ ಮೀಡಿಯಾಗಳಿಗೂ ಕಚೇರಿಯನ್ನು ಸ್ಥಾಪಿಸಲು ಹೇಳಬೇಕು. 

ಲಿಂಚಿಂಗ್‌ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ ಬಳಿಕ ವಾಟ್ಸ್‌ಆ್ಯಪ್‌ ಕೇಂದ್ರದ ದೂರಿನ ಮೇರೆಗೆ ಸಂದೇಶದಲ್ಲಿ ಫಾರ್‌ವರ್ಡೆಡ್‌ ಎಂದು ತೋರಿಸುವ ಫೀಚರ್‌ ಸೇರಿಸಿಕೊಂಡಿದೆ ಹಾಗೂ ಸಂದೇಶ ವಿನಿಮಯವನ್ನು ಐದು ಗ್ರೂಪುಗಳಿಗೆ ಸೀಮಿತಗೊಳಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ಈ ನಿಯಮ ಬಂದ ಬಳಿಕವೂ ಗುಂಪು ಥಳಿತ ಪ್ರಕರಣ ಸಂಭವಿಸಿದೆ. 

ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲೂ ನಿರ್ದಿಷ್ಟವಾಗಿ ವಾಟ್ಸ್‌ಆ್ಯಪ್‌ ಕುರಿತಾದ ದೂರುಗಳು ಹೆಚ್ಚೇ ಇವೆ. 12 ದೇಶಗಳಲ್ಲಿ ವಾಟ್ಸ್‌ಆ್ಯಪ್‌ಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿಷೇಧ ಹೇರಲಾಗಿತ್ತು. ಉಗಾಂಡದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಪ್ರತ್ಯೇಕ ತೆರಿಗೆಯೇ ಇದೆ. ವಾಟ್ಸ್‌ಆ್ಯಪ್‌ ಈ ಪರಿಯಲ್ಲಿ ದುರ್ಬಳಕೆಯಾಗಲು ಅದರ ತಂತ್ರಜ್ಞಾನದಲ್ಲಿರುವ ದೋಷವೂ ಕಾರಣ. ವಾಟ್ಸ್‌ಆ್ಯಪ್‌ನಲ್ಲಿರುವ ಗ್ರೂಪ್‌ಗ್ಳ ಮುಖಾಂತರ ಸುಳ್ಳು ಸುದ್ದಿಗಳು ಕ್ಷಿಪ್ರವಾಗಿ ರವಾನೆ ಯಾಗುತ್ತವೆ. ಇದಕ್ಕೆ ಗ್ರೂಪ್‌ ಅಡ್ಮಿನಿಸ್ಟ್ರೇಟರ್‌ನನ್ನು ಹೊಣೆ ಮಾಡಿದರೂ ಇದು ಪರಿಣಾಮಕಾರಿಯೇನಲ್ಲ. ಏಕೆಂದರೆ ಅಡ್ಮಿನ್‌ಗೂ ಸದಸ್ಯರು ಕಳುಹಿಸುವ ಸಂದೇಶಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ. ಅಂದರೆ ಎಲ್ಲ ಡೇಟಾಗಳು ಆಯಾಯ ಮೊಬೈಲ್‌ನಲ್ಲಿ ಸೇವ್‌ ಆಗಿರುತ್ತವೆಯೇ ಹೊರತು ವಾಟ್ಸ್‌ಆ್ಯಪ್‌ ಸರ್ವರ್‌ನಲ್ಲಿ ಅಲ್ಲ. ಈ ವಿಚಾರವನ್ನು ಸ್ವತಹ ವಾಟ್ಸ್‌ಆ್ಯಪ್‌ ಒಪ್ಪಿಕೊಂಡಿದೆ. ಹೀಗಾಗಿ ಸಂದೇಶಗಳ ಮೇಲೆ ಕಂಪೆನಿಗೂ ನಿಯಂತ್ರಣವಿರುವುದಿಲ್ಲ ಹಾಗೂ ಅವುಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಆ್ಯಪ್‌ನಲ್ಲಿ ಯಾವ ಚರ್ಚೆ ಆಗುತ್ತದೆ ಎನ್ನುವುದು ಕಂಪೆನಿಗೂ ಗೊತ್ತಿರುವುದಿಲ್ಲ. ಸಂದೇಶ ರವಾನೆಯಾದ ಕೂಡಲೇ ಸರ್ವರ್‌ನಿಂದ ಡಿಲೀಟ್‌ ಆಗುತ್ತದೆ ಎನ್ನುವ ಸೂಚನೆ ವಾಟ್ಸ್‌ಆ್ಯಪ್‌ ವೆಬ್‌ಸೈಟಿನಲ್ಲೇ ಇದೆ. ಈ ದೃಷ್ಟಿಯಿಂದಲೂ ವಾಟ್ಸ್‌ಆ್ಯಪ್‌ ಸುಳ್ಳು ಸುದ್ದಿಗಳ ಮೂಲ ಪತ್ತೆಹಚ್ಚಲು ತಾಂತ್ರಿಕವಾದ ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯ. 

ಹಾಗೆಂದು ಸೋಷಿಯಲ್‌ ಮೀಡಿಯಾಗಳಿಂದ ಬರೀ ಕೆಡುಕು ಮಾತ್ರ ಆಗುತ್ತದೆ ಎಂದಲ್ಲ. ದುರಂತಗಳ ಸಂದರ್ಭದಲ್ಲಿ ಮೊದಲು ನೆರವಿಗೆ ಬರುವುದೇ ಸೋಷಿಯಲ್‌ ಮೀಡಿಯಾ ಎನ್ನುವುದು ಕೇರಳ ಮತ್ತು ಕೊಡಗಿನ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮತ್ತೂಮ್ಮೆ ಸಾಬೀತಾಗಿದೆ. ಆದರೆ ಜನರು ಅದನ್ನು ಒಳಿತಿಗಿಂತ ಕೆಡುಕಿಗೆ ಹೆಚ್ಚು ಉಪಯೋಗಿಸುತ್ತಿರು ವುದರಿಂದ ವರವಾಗಬೇಕಾದ ಆವಿಷ್ಕಾರ ಶಾಪವಾಗಿ ಪರಿಣಮಿಸುತ್ತಿದೆ. 

ಟಾಪ್ ನ್ಯೂಸ್

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.