ಐತಿಹಾಸಿಕ ತೀರ್ಪು; ಮಾಧ್ಯಮ-ಸರ್ಕಾರಕ್ಕಿದೆ ಜವಾಬ್ದಾರಿ


Team Udayavani, Sep 7, 2018, 3:43 PM IST

righr.jpg

ಸಲಿಂಗಕಾಮ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಐತಿಹಾಸಿಕವಾದದ್ದು. 2013ರಲ್ಲಿ ತಾನೇ ನೀಡಿದ್ದ ತೀರ್ಪನ್ನು ಪಕ್ಕಕ್ಕೆ ಸರಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್‌, ಎಲ್ಲರ ಖಾಸಗಿತನಗಳಿಗೆ ಗೌರವ ನೀಡಬೇಕಾದದ್ದು ಈಗಿನ ಆದ್ಯ ಕರ್ತವ್ಯವಾಗಿದೆ ಎಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377 ಅನ್ನು ಭಾಗಶಃ ರದ್ದು ಮಾಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ, ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದ ಎಲ್‌ಜಿಬಿಟಿ ಸಮುದಾಯಕ್ಕೆ ನಿರಾಳತೆ ನೀಡಿದೆ.

ಎಲ್‌ಜಿಬಿಟಿ ಸಮುದಾಯಕ್ಕೂ ತನ್ನದೇ ಆದ ಹಕ್ಕುಗಳಿವೆ ಎಂದು ಮೊದಲು ಹೇಳಿದ್ದು ದೆಹಲಿ ಹೈಕೋರ್ಟ್‌. 2009ರಲ್ಲೇ ಈ ಸಂಬಂಧ ತೀರ್ಪು ನೀಡಿದ್ದ ಅದು ಸಲಿಂಗಕಾಮ ಅಪರಾಧವಲ್ಲ ಎಂದಿತ್ತು. ಈ ಮೂಲಕ ದೆಹಲಿ ಹೈಕೋರ್ಟ್‌ ಎಲ್‌ಜಿಬಿಟಿ ಸಮುದಾಯದ 140 ವರ್ಷಗಳ ಕಾಯುವಿಕೆಗೆ ಒಂದು ಅಂತ್ಯ ಹಾಡಿತ್ತು. ಆದರೆ, ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು 2013ರಲ್ಲಿ ರದ್ದು ಮಾಡಿದ್ದ ಸುಪ್ರೀಂ ಕೋರ್ಟ್‌ ಸಲಿಂಗ ಕಾಮ ಅಪರಾಧವೆಂದು ಘೋಷಿಸಿ ಎಲ್‌ಜಿಬಿಟಿ ಸಮುದಾಯದ ಮೇಲೆ ಬರೆ ಎಳೆದಿತ್ತು. ಅಲ್ಲದೆ ಇಂಥ ಕಾನೂನುಗಳನ್ನು ಸಂಸತ್‌ ರೂಪಿಸಬೇಕು ಎಂದು ಹೇಳಿ ಕೈತೊಳೆದುಕೊಂಡಿತ್ತು.

ಆದರೆ, ಈ ಕುರಿತಂತೆ ಆಗಿನಿಂದ ಈಗಿನವರೆಗೆ ಸಂಸತ್‌ ಯಾವುದೇ ತೀರ್ಮಾನಕ್ಕೆ ಬರಲೇ ಇಲ್ಲ. 2015ರಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಖಾಸಗಿ ಮಸೂದೆಯೊಂದನ್ನೂ ಮಂಡಿಸಿದ್ದು, ಇದಕ್ಕೆ ಸಂಸತ್‌ ನಲ್ಲಿ ಯಾವುದೇ ಮಾನ್ಯತೆ ಸಿಗಲೇ ಇಲ್ಲ. ಕಡೆಗೆ ಕೇಂದ್ರವೇ ಕೋರ್ಟ್‌ನಲ್ಲಿ ವಾದ ಮಂಡಿಸಿ ಈ ವಿಚಾರದಲ್ಲಿ ಸಂಸತ್‌ ಮಾಡುವುದು ಏನೂ ಇಲ್ಲ, ಕೋರ್ಟ್‌ ಅವಶ್ಯವಾಗಿ ತನ್ನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿ ಸುಪ್ರೀಂ ಮಡಿಲಿಗೇ ಈ ಪ್ರಕರಣದ ಹೊಣೆಯನ್ನು ಹೊರಿಸಿತು.
 
ಸುಪ್ರೀಂ ಕೋರ್ಟ್‌, “ಈಗ ಕಾಲ ಬದಲಾಗಿದ್ದು, ಇಂದಿನ ಪರಿಸ್ಥಿತಿಗೆ ತಕ್ಕಂತೆ, ಸಂವಿಧಾನದಲ್ಲಿ ನೀಡಿರುವ ಹಾಗೆ ಎಲ್ಲರಿಗೂ ಸಮಾನವಾಗಿ ಮೂಲಭೂತ ಹಕ್ಕು ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಸಲಿಂಗ ಕಾಮ ಅಪರಾಧವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದೂ
ಹೇಳಿದೆ. ತೀರ್ಪಿನ ವೇಳೆ ಪಂಚಪೀಠದಲ್ಲಿದ್ದ ನ್ಯಾಯಮೂರ್ತಿಗಳು ಉಲ್ಲೇಖೀಸಿರುವ ಅಂಶಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಇದೇ ಮೊದಲ ಬಾರಿಗೆ ಸಂವಿಧಾನ ಪೀಠದಲ್ಲಿ ಕುಳಿತು ತೀರ್ಪು ಬರೆದಿರುವ ನ್ಯಾ.ಇಂದು ಮಲ್ಲೋತ್ರಾ ಅವರು, ಇತಿಹಾಸ ಎಲ್‌ಜಿಬಿಟಿ ಸಮುದಾಯ ಮತ್ತು ಅವರ ಕುಟುಂಬದವರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಅಂದಿನಿಂದಲೂ ಇವರನ್ನು ಸಾಮಾಜಿಕವಾಗಿ ಕೆಟ್ಟದಾಗಿ ನೋಡುತ್ತಿದ್ದ ಸಮಾಜ ಉಳಿದವರಂತೆ ವಾಸಿಸಲು ಬಿಡಲೇ ಇಲ್ಲ. ಅವರನ್ನು ಮನುಷ್ಯರಂತೆಯೂ ನೋಡಲಿಲ್ಲ ಎಂದು ವಿಷಾದಿಸಿದ್ದಾರೆ. ನ್ಯಾ. ಇಂದು ಮಲ್ಲೋತ್ರಾ ಅವರ ಈ ಅಂಶ ಪರಿಗಣಿಸುವಂಥದ್ದಾಗಿದೆ. ಇಂದಿಗೂ ಸಮಾಜದಲ್ಲಿ ಎಲ್‌ಜಿಬಿಟಿ ಸಮುದಾಯದವರನ್ನು ಕೆಟ್ಟದಾಗಿ ನೋಡಿದ್ದೂ ಅಲ್ಲದೇ, ಅವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸುವ ಕೆಲಸವೂ ಆಗುತ್ತಿತ್ತು. ಸಾಮಾಜಿಕ ನೋವಿನ ನಡುವೆ, ಅಪರಾಧಿಗಳಂತೆ ಬದುಕುವ ಅನಿವಾರ್ಯತೆಗೆ ಈ ಸಮುದಾಯ ಸಿಲುಕಿತ್ತು. ಈಗ ಇಂಥ ನೋವುಗಳಿಗೆ ವಿರಾಮ ಹಾಡಿರುವ ಕೋರ್ಟ್‌ ಇವರಿಗೂ ಒಂದು ಗೌರವಯುತವಾದ ಬಾಳ್ವೆ ಇದೆ ಎಂದು ತೋರಿಸಿ ಕೊಟ್ಟಂತಾಗಿದೆ.

ಇದರ ಜತೆಗೆ ಗುರುವಾರದ ತೀರ್ಪು ಅಂತಾ ರಾಷ್ಟ್ರೀಯ ಮಟ್ಟದಲ್ಲೂ ಭಾರತವನ್ನು ಮೇಲ್‌ಸ್ತರಕ್ಕೆ ಕೊಂಡೊಯ್ದಿದೆ. ಜಗತ್ತಿನ ಖ್ಯಾತ ಪತ್ರಿಕೆಗಳೆಲ್ಲವೂ ತೀರ್ಪನ್ನು ಮೆಚ್ಚಿಕೊಂಡಿವೆ. ತೀರಾ ಮುಂದುವರಿದ ದೇಶಗಳು ಎನ್ನಿಸಿಕೊಂಡವರೂ ಇಂಥ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಹಿಂದೆ ಬಿದ್ದಿರುವಾಗ, ಭಾರತದಂಥ ದೇಶದಲ್ಲಿ ಐತಿಹಾಸಿಕ ತೀರ್ಪು ಹೊರಬಿದ್ದಿರುವುದು ಸ್ವಾಗತಾರ್ಹ. ಕೋರ್ಟ್‌ ಏನೋ ಈ ಐತಿಹಾಸಿಕ
ತೀರ್ಪು ಕೊಟ್ಟಾಗಿದೆ, ಆದರೆ, ಇಂಥ ಸಂಬಂಧವುಳ್ಳವರನ್ನು ಇನ್ನು ಮುಂದಾದರೂ ಸಮಾಜ ಗೌರವಯುತವಾಗಿ ನೋಡುವುದನ್ನು ಕಲಿಯಬೇಕು. ಜತೆಗೆ ಸುಪ್ರೀಂ ಕೋರ್ಟ್‌ ಹೇಳಿದ ಹಾಗೆ, ಈ ಬಗ್ಗೆ ಅರಿವು ಮೂಡಿಸುವ ಕೆಲಸವೂ ಸರ್ಕಾರಗಳು ಮತ್ತು ಮಾಧ್ಯಮಗಳ ಕಡೆಯಿಂದ ಆಗಬೇಕು. 

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.